ಆ್ಯಪ್ನಗರ

ಅಗ್ರ ಕ್ರಮಾಂಕದ ಸಮಸ್ಯೆ ಬಗೆಹರಿಸಬೇಕಿದೆ: ಕೊಹ್ಲಿ

ಯುವ ಆಟಗಾರರಿಗೆ ಬೇಕಾದಷ್ಟು ಅವಕಾಶ ನೀಡಲಿದ್ದೇವೆ: ಕೊಹ್ಲಿ ಭರವಸೆ

TOI.in 3 Oct 2018, 4:47 pm
ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web virat-kohli-07


ಈ ನಿಟ್ಟಿನಲ್ಲಿ ಯುವ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಪ್ರತಿಭೆಯನ್ನು ತೋರಲು ಬೇಕಾದಷ್ಟು ಅವಕಾಶ ನೀಡುವುದರ ಬಗ್ಗೆಯೂ ಕೊಹ್ಲಿ ಮಾತನಾಡಿದ್ದಾರೆ.

ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಕಂಡುಬರಲಿದೆ. ಇದರೊಂದಿಗೆ ಕರ್ನಾಟಕದ ಕೆಎಲ್ ರಾಹುಲ್ ಜೊತೆಗೆ 18ರ ಹರೆಯದ ಪೃಥ್ವಿ ಪದಾಪರ್ಣೆ ಮಾಡಲು ಸಜ್ಜಾಗಿದ್ದಾರೆ. ಹಾಗಾಗಿ ಮಯಾಂಕ್ ಅಗರ್ವಾಲ್ ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಯಬೇಕಿದೆ.

ಅಗ್ರ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆ. ಈ ಯುವ ಆಟಗಾರರಿಗೆ ಬೇಕಾದಷ್ಟು ಅವಕಾಶವನ್ನು ನೀಡಲಿದ್ದೇವೆ. ತಾವೇನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಯುವ ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸಲಿದ್ದೇವೆ ಎಂದರು.

ಕೆಳ ಕ್ರಮಾಂಕ ಕೊಡುಗೆಯು ಮಹತ್ವದಾಗಿದೆ. ಹಾಗಾಗಿ ಬದಲಾವಣೆ ಅಗತ್ಯವಿಲ್ಲ. ರಿಷಭ್ ಪಂತ್ ಹೊಸ ಆಯ್ಕೆ. ಅಶ್ವಿನ್ ಹಾಗೂ ಜಡೇಜಾ ತವರಿನಲ್ಲಿ ಉತ್ತಮ ನಿರ್ವಹಣೆ ನೀಡಿದ್ದಾರೆ. ಅದನ್ನು ಮತ್ತೆ ಪುನರಾವರ್ತಿಸುವ ನಿರೀಕ್ಷೆಯಿದೆ ಎಂದರು.

ಅಗ್ರ ಕ್ರಮಾಂಕದ ಹೊರತಾಗಿ ಈ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೇರೆ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂಬುದನ್ನು ಕೊಹ್ಲಿ ಬೊಟ್ಟು ಮಾಡಿದರು.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಆಡುವ ಬಳಗದಲ್ಲಿ ಪ್ರತಿ ಪಂದ್ಯದಲ್ಲೂ ಬದಲಾವಣೆ ತರಲಾಗಿತ್ತು. ಈ ಬಗ್ಗೆ ಟೀಕೆಗಳು ಎದ್ದರೂ ಕೊಹ್ಲಿ ಮಾತ್ರ ತಲೆಕೆಡಿಸಿಕೊಂಡಿಲ್ಲ.

ಶ್ರೇಷ್ಠ ಇಲೆವೆನ್ ಮೈದಾನಕ್ಕಿಳಿಯಬೇಕು. ತಂಡ ಸಂಯೋಜನೆಯ ಭಾಗವಾಗಿ ಬದಲಾವಣೆ ತರಲಾಗಿದೆ. ಅಲ್ಲಿನ ನಿರ್ದಿಷ್ಟ ವಾತಾವರಣಕ್ಕೆ ತಕ್ಕಂತೆ ಅತ್ಯುತ್ತಮ ಇವೆಲೆನ್ ಕಣಕ್ಕಿಳಿಸಬೇಕಿದೆ ಎಂದರು.

ಇದೇ ಕಾರಣಕ್ಕಾಗಿ ನಮ್ಮ ಬೌಲರ್‌ಗಳು 20 ವಿಕೆಟುಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಟಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹಾಗಾಗಿ ಇಂಗ್ಲೆಂಡ್‌ನಲ್ಲಿ ವೈಫಲ್ಯ ಅನುಭವಿಸಿದೆವು ಎಂಬುದನ್ನು ಒಪ್ಪಿಕೊಂಡರು.

ಅಗ್ರ ಕ್ರಮಾಂಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಕೊಡುಗೆ ನೀಡುವ ಅಗತ್ಯದ ಬಗ್ಗೆಯೂ ಕೊಹ್ಲಿ ವಿವರಿಸಿದರು. ಮಧ್ಯಮ ಕ್ರಮಾಂಕವು ಇವೆರಡಕ್ಕೂ ಬಂಧಿಸಲ್ಪಟ್ಟಿದೆ ಎಂದು ಹೇಳಿದರು.

ಅಂತಿಮವಾಗಿ ಏಷ್ಯಾ ಕಪ್ ವಿಶ್ರಾಂತಿಯ ಬಳಿಕ ಸಂಪೂರ್ಣ ಫಿಟ್ನೆಸ್ ಮರಳಿ ಪಡೆದಿರುವುದಾಗಿ ತಿಳಿಸಿರುವ ಕೊಹ್ಲಿ, ಮುಂಬರುವ 2019 ಏಕದಿನ ವಿಶ್ವಕಪ್‌ ಹಿನ್ನಲೆಯಲ್ಲಿ ಗರಿಷ್ಠ ಫಿಟ್ನೆಸ್ ಮಟ್ಟ ಕಾಯ್ದುಕೊಳ್ಳುವುದು ಮುಖ್ಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌