ಆ್ಯಪ್ನಗರ

ದಶಕದ ಬಳಿಕವೂ ಗಂಭೀರ್ ಜಗಳ ಮರೆಯದ ಆಫ್ರಿದಿ

ಸರಿ ಸುಮಾರು 10 ವರ್ಷಗಳ ಹಿಂದೆ ಕಾನ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಜೊತೆಗೆ ಪಾಕಿಸ್ತಾನದ ಶಾಹೀದ್ ಆಫ್ರಿದಿ ಜಟಾಪಟಿ ನಡೆದಿತ್ತು. ಇದೀಗ ಒಂದು ದಶಕದ ಬಳಿಕವೂ ಆಫ್ರಿದಿ ಈ ಕಾವೇರಿದ ವಾತಾವರಣವನ್ನು ಮರೆತಿಲ್ಲ. ಹಾಗೆಯೇ ಗಂಭೀರ್ ಜೊತೆಗೆ ಸದ್ಯಕ್ಕಂತೂ ಚಹಾ ಹಂಚಿಕೊಳ್ಳುವ ವಿಚಾರವೇ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 7 May 2017, 7:51 pm
ಹೊಸದಿಲ್ಲಿ: ಸರಿ ಸುಮಾರು 10 ವರ್ಷಗಳ ಹಿಂದೆ ಕಾನ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಜೊತೆಗೆ ಪಾಕಿಸ್ತಾನದ ಶಾಹೀದ್ ಆಫ್ರಿದಿ ಜಟಾಪಟಿ ನಡೆದಿತ್ತು. ಇದೀಗ ಒಂದು ದಶಕದ ಬಳಿಕವೂ ಆಫ್ರಿದಿ ಈ ಕಾವೇರಿದ ವಾತಾವರಣವನ್ನು ಮರೆತಿಲ್ಲ. ಹಾಗೆಯೇ ಗಂಭೀರ್ ಜೊತೆಗೆ ಸದ್ಯಕ್ಕಂತೂ ಚಹಾ ಹಂಚಿಕೊಳ್ಳುವ ವಿಚಾರವೇ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
Vijaya Karnataka Web unlikely to have coffee with gambhir insists shahid afridi
ದಶಕದ ಬಳಿಕವೂ ಗಂಭೀರ್ ಜಗಳ ಮರೆಯದ ಆಫ್ರಿದಿ


ಟೀಮ್ ಇಂಡಿಯಾದ ಬಹುತೇಕ ಆಟಗಾರರೊಂದಿಗೆ ಅತ್ಯುತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಆಫ್ರಿದಿ, ಗೌತಮ್ ಗಂಭೀರ್ ಘಟನೆಯನ್ನು ಮಾತ್ರ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಆಫ್ರಿದಿ ಅವರಿಗೆ ವಿರಾಟ್ ಕೋಹ್ಲಿ ಪಡೆ ಹಸ್ತಾಕ್ಷರ ಮಾಡಿದ ಜೆರ್ಸಿಯನ್ನು ಸ್ಮರಣಿಕೆಯಾಗಿ ನೀಡಿತ್ತು.


ಅಂದು ನಡೆದ ಪಂದ್ಯದಲ್ಲಿ ಚೆಂಡೆಸೆದ ಆಫ್ರಿದಿ ಕ್ರೀಸಿನಲ್ಲೇ ನಿಂತಿದ್ದರು. ಅತ್ತ ಸಿಂಗಲ್‌ಗಾಗಿ ಓಡುತ್ತಿದ್ದ ಗಂಭೀರ್ ಢಿಕ್ಕಿ ಹೊಡೆದಿದ್ದರು. ಅಲ್ಲದೆ ಪರಸ್ಪರ ನಿಂದನೆ ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಫ್ರಿದಿ, ಗಂಭೀರ್ ನನ್ನ ಗೆಳೆಯರ ಪಟ್ಟಿಯಲ್ಲಿಲ್ಲ ಎಂದಿದ್ದಾರೆ. ಹಾಗೆಯೇ ಸದ್ಯಕ್ಕಂತೂ ಕಾಫಿ ಹಂಚಿಕೊಳ್ಳುವ ವಿಷಯನೇ ಬರಲ್ಲ. ಕೆಲವು ಕಾರಣಗಳಿಗಾಗಿ ಆ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಆದರೂ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಹರಭಜನ್ ಸಿಂಗ್, ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ಆಫ್ರಿದಿ, ಅವರೆಲ್ಲರೂ ನನ್ನ ಉತ್ತಮ ಗೆಳೆಯರು ಎಂದಿದ್ದಾರೆ.

ವೃತ್ತಿ ಜೀವನದ ಆರಂಭದ ಸಂದರ್ಭದಲ್ಲಿ ಇತ್ತಂಡಗಳು ನಿರಂತರ ಅಂತರಾಳದಲ್ಲಿ ಸರಣಿಗಳನ್ನು ಆಡುತ್ತಿದ್ದವು. ಹಾಗೆಯೇ ಯಾವಗೆಲ್ಲ ಪರಸ್ಪರ ಭೇಟಿಯಾಗುತ್ತಿದ್ದೆವೋ ನಾವೆಲ್ಲರೂ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದೆವು ಎಂದರು.

ಹಿಂದೆ ಭಾರತ ತಂಡವು ಪಾಕ್ ಪ್ರವಾಸ ಕೈಗೊಂಡಾಗ ಕರಾಚಿಯಲ್ಲಿರುವ ನನ್ನ ಮನೆಗೆ ಆಹ್ವಾನ ಮಾಡಿದ್ದೆ. ಅವರಿಗಾಗಿ ವಿಶೇಷ ಮಾಂಸಹಾರಿ ಭೋಜನವನ್ನು ರೆಡಿ ಮಾಡಿಟ್ಟಿದ್ದೆ. ಆದರೆ ಟೀಮ್ ಇಂಡಿಯಾದ ಕೆಲವು ಆಟಗಾರರು ಸಸ್ಯಹಾರಿಗಳೆಂದು ತಿಳಿದ ಮೇಲೆ ಅದಕ್ಕೆ ತಕ್ಕಂತೆ ಏರ್ಪಡು ಮಾಡಿದ್ದೆ ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌