ಆ್ಯಪ್ನಗರ

ಕರ್ನಾಟಕ ತಂಡ ಔಟ್‌

ಗ್ರೂಪ್ ಹಂತದಲ್ಲೇ ಹೊರಬಿದ್ದ ಕರ್ನಾಟಕ

Vijaya Karnataka 5 Oct 2018, 11:59 am
ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿ
Vijaya Karnataka Web manish-pandey-10


ಬೆಂಗಳೂರು: ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಪ್ರಸಕ್ತ ಸಾಲಿನ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲೇ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಮತ್ತು ರೈಲ್ವೇಸ್‌ ನಡುವಣ ಎಲೈಟ್‌ 'ಎ' ಗುಂಪಿನ ಪಂದ್ಯ ಮಳೆ ಕಾರಣ ರದ್ದಾಯಿತು. ಪರಿಣಾಮ ಇತ್ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಂಡವು. ಜತೆಗೆ ಕರ್ನಾಟಕ ತಂಡದ ನಾಕ್‌ಔಟ್‌ ಹಂತಕ್ಕೇರುವ ಅಲ್ಪ ಅವಕಾಶ ಕೂಡ ಕೈತಪ್ಪಿಹೋಯಿತು. ಮಳೆ ಆರಂಭಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸುತ್ತಿದ್ದ ಕರ್ನಾಟಕ 42.3 ಓವರ್‌ಗಳಲ್ಲಿ 5 ವಿಕೆಟ್‌ಗೆ 229 ರನ್‌ಗಳನ್ನು ಗಳಿಸಿತ್ತು.

ಕರ್ನಾಟಕ ತಂಡ 'ಎ' ಗುಂಪಿನಿಂದ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಗಳಿಸಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿತ್ತು. ಏಕೆಂದರೆ ಆಡಿದ 5 ಪಂದ್ಯಗಳಿಂದ ರಾಜ್ಯಕ್ಕೆ 6 ಅಂಕಗಳು ಲಭ್ಯವಾಗಿ ಉಳಿದ 3 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದರಷ್ಟೇ ನಾಕ್‌ಔಟ್‌ ತಲುಪುವ ಅಲ್ಪ ಅವಕಾಶ ಉಳಿದಿತ್ತು. ಆದರೀಗ 6 ಪಂದ್ಯಗಳಿಂದ 8 ಅಂಕ ಅಷ್ಟೇ ಒಗ್ಗೂಡಿಸಿರುವ 3 ಬಾರಿಯ ಚಾಂಪಿಯನ್ಸ್‌ ಸ್ಪರ್ಧೆಯಿಂದ ನಿರ್ಗಮಿಸಿದೆ.

ಟೂರ್ನಿಯಲ್ಲಿ ಎಲೈಟ್‌ ವಿಭಾಗದಲ್ಲಿ 'ಎ', 'ಬಿ' ಮತ್ತು 'ಸಿ' ಗುಂಪುಗಳಿದ್ದು, ಪ್ಲೇಟ್‌ ಗ್ರೂಪ್‌ (ಡಿ) ಎಂದು ಮತ್ತೊಂದು ಗುಂಪನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. 'ಎ' ಮತ್ತು 'ಬಿ' ಗುಂಪಿನಲ್ಲಿ ಸಂಯುಕ್ತವಾಗಿ ಅಗ್ರ 5 ತಂಡಗಳು ಕ್ವಾರ್ಟರ್‌ ಫೈನಲ್‌ ತಲುಪಿದರೆ, 'ಸಿ' ಗುಂಪಿನಲ್ಲಿ 2 ತಂಡಗಳು ಮತ್ತು 'ಡಿ' ಗುಂಪಿನಿಂದ ಒಂದು ತಂಡ ನಾಕ್‌ಔಟ್‌ಗೆ ಮುನ್ನಡೆಯಲಿವೆ. ಕರ್ನಾಟಕ 'ಎ' ಮತ್ತು 'ಬಿ' ಗುಂಪಿನ ಸಂಮಿಶ್ರ ಪಟ್ಟಿಯಲ್ಲಿ ನಿರಾಶಾದಾಯಕ 14ನೇ ಸ್ಥಾನದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌