ಆ್ಯಪ್ನಗರ

KAR vs SAU: ವಿಜಯ್‌ ಹಝಾರೆ ಟ್ರೋಫಿ ಸೆಮಿಫೈನಲ್ಸ್‌ನಲ್ಲಿ ಸೌರಾಷ್ಟ್ರ ಎದುರು ಮುಗ್ಗರಿಸಿದ ಕರ್ನಾಟಕ!

Vijay Hazare Trophy 2022-23: 2022-23ರ ಸಾಲಿನ ವಿಜಯ್ ಹಝಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಹೋರಾಟ ಅಂತ್ಯಗೊಳಿಸಿದೆ. ನವೆಂಬರ್‌ 30ರಂದು (ಬುಧವಾರ) ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಕರ್ನಾಟಕ ತಂಡ 5 ವಿಕೆಟ್‌ಗಳ ಹೀನಾಯ ಸೋಲುಂಡಿತು. ಇದರೊಂದಿದೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಟ್ರೋಫಿ ಗೆಲುವಿನ ಕನಸು ಮತ್ತೊಮ್ಮೆ ಭಗ್ನವಾಗಿದೆ. ಸತತವಾಗಿ ನಾಕ್‌ಔಟ್‌ ಹಂತಕ್ಕೆ ಕಾಲಿಡುತ್ತಿರುವ ಕರ್ನಾಟಕ ತಂಡಕ್ಕೆ ಟ್ರೋಫಿ ಗೆಲುವು ಮಾತ್ರ ಸಾಧ್ಯವಾಗುತ್ತಿಲ್ಲ.

Authored byವಿಜೇತ್ ಕುಮಾರ್ | Vijaya Karnataka Web 30 Nov 2022, 5:41 pm

ಹೈಲೈಟ್ಸ್‌:

  • 2022-23ರ ಸಾಲಿನ ವಿಜಯ್ ಹಝಾರೆ ಟ್ರೋಫಿ (ಲಿಸ್ಟ್‌ 'ಎ') ಕ್ರಿಕೆಟ್‌ ಟೂರ್ನಿ.
  • ಸೆಮಿಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೆ ಭಾರಿ ಬೆಲೆತೆತ್ತ ಕರ್ನಾಟಕ ತಂಡ.
  • ಆಲ್‌ರೌಂಡ್‌ ಆಟವಾಡಿ 5 ವಿಕೆಟ್‌ಗಳ ಜಯ ದಾಖಲಿಸಿದ ಸೌರಾಷ್ಟ್ರ ತಂಡ ಫೈನಲ್‌ನಲ್ಲಿ ಮಹಾರಾಷ್ಟ್ರ ಎದುರು ಪೈಪೋಟಿ ನಡೆಸಲಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Saurashtra vs Karnataka
ಸೌರಾಷ್ಟ್ರ ಎದುರು ಮುಗ್ಗರಿಸಿದ ಕರ್ನಾಟಕ ತಂಡ (ಚಿತ್ರ: ಬಿಸಿಸಿಐ).
ಬೆಂಗಳೂರು: ಮಯಾಂಕ್‌ ಅಗರ್ವಾಲ್‌ ಸಾರಥ್ಯದ ಕರ್ನಾಟಕ ತಂಡ ಪ್ರಸಕ್ತ ಸಾಲಿನ (2022-23) ಲಿಸ್ಟ್‌ 'ಎ' ಕ್ರಿಕೆಟ್‌ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಭರ್ಜರಿ ಆಟವಾಡಿ ಸೆಮಿಫೈನಲ್‌ಗೆ ದಾಪುಗಾಲಿಟ್ಟಿದ್ದ ಕರ್ನಾಟಕ ತಂಡ, ಬುಧವಾರ (ನವೆಂಬರ್‌ 30) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಸೌರಾಷ್ಟ್ರ ಎದುರು 5 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು.
ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ ಆರಂಭಿಸಿದ ನಾಯಕ ಮಯಾಂಕ್‌ ಅಗರ್ವಾಲ್‌ ಎದುರಿಸಿದ 11 ಎಸೆತಗಳಲ್ಲಿ 1 ರನ್‌ ಮಾತ್ರವೇ ಗಳಿಸಿ ಪೆವಿಲಿಯನ್‌ ಸೇರಿದ್ದು, ಕರ್ನಾಟಕದ ಹೀನಾಯ ಸೋಲಿಗೆ ಮುನ್ನುಡಿಬರೆದಂತ್ತಿತ್ತು.

ಆಸರೆಯಾಗಿ ನಿಂತ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಆರ್‌ ಸಮರ್ಥ್‌, 135 ಎಸೆತಗಳಲ್ಲಿ 4 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ 88 ರನ್‌ ಗಳಿಸಿದರು. ಇನಿಂಗ್ಸ್‌ ಮಧ್ಯದಲ್ಲಿ ಮನೋಜ್‌ ಭಾಂಡಗೆ 22 ರನ್‌ ಗಳಿಸಿದ್ದನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ಹೇಳಿಕೊಳ್ಳುವ ಪ್ರದರ್ಶನ ಬರಲೇ ಇಲ್ಲ. ಪರಿಣಾಮ 49.1 ಓವರ್‌ಗಳಲ್ಲಿ ಕರ್ನಾಟಕ ತಂಡ 171 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಸ್ಟಾರ್‌ ಆಟಗಾರ ಮನೀಶ್‌ ಪಾಂಡೆ (0) ವೈಫಲ್ಯ ಕರ್ನಾಟದ ಬ್ಯಾಟಿಂಗ್‌ ವೈಲ್ಯಗಳಲ್ಲಿ ಒಂದು.


ಜಯದೇವ್ ಉನಾದ್ಕಟ್‌ ಪರಾಕ್ರಮ
ಟೀಮ್ ಇಂಡಿಯಾ ಮತ್ತು ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಗಳಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿ ಪಳಗಿರುವ ಅನುಭವಿ ಎಡಗೈ ವೇಗದ ಬೌಲರ್ ಜಯದೇವ್‌ ಉನಾದ್ಕಟ್‌ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾದರು. ತಮ್ಮ 10 ಓವರ್‌ಗಳಲ್ಲಿ 2 ಮೇಡಿನ್ ಎಸೆದ ಉನಾದ್ಕಟ್‌, ಕೇವಲ 26 ರನ್‌ ಮಾತ್ರವೇ ಕೊಟ್ಟು 4 ವಿಕೆಟ್‌ಗಳನ್ನು ಉರುಳಿಸಿದರು. ಅವರಿಗೆ ಪ್ರೇರಖ್ ಮಂಕಡ್‌ (34ಕ್ಕೆ 2), ಕುಶಂಗ್‌ ಪಟೇಲ್‌ (25ಕ್ಕೆ 1) ಮತ್ತು ಪಾರ್ತ್‌ ಭುತ್ (30ಕ್ಕೆ 1) ಉತ್ತಮ ಸಾಥ್‌ ನೀಡಿದರು.

Ruturaj Gaikwad: ಸಿಕ್ಸರ್‌ ಸಿಡಿಸುವ ವೇಳೆ 'ಯುವರಾಜ್‌ ಸಿಂಗ್‌'ನ ಸ್ಮರಿಸಿದ್ದೆ ಎಂದ ಋತುರಾಜ್ ಗಾಯಕ್ವಾಡ್‌!
ಜಯ್‌ ಗೋಹಿಲ್‌ ಅರ್ಧಶತಕ
ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡ ಮೊದಲ ಎರಡು ಓವರ್‌ಗಳಲ್ಲಿ ತನ್ನಿಬ್ಬರು ಓಪನರ್‌ಗಳಾದ ಹಾರ್ವಿಕ್‌ ದೇಸಾಯ್ (0) ಮತ್ತು ಶೆಲ್ಡನ್ ಜಾಕ್ಸನ್ (0) ಅವರ ವಿಕೆಟ್‌ ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಜಯ್ ಗೋಹಿಲ್‌ 82 ಎಸೆತಗಳಲ್ಲಿ 61 ರನ್‌ ಬಾರಿಸಿ ಸೌರಾಷ್ಟ್ರ ತಂಡದ ಗೆಲುವಿಗೆ ಬಲವಾದರು. ಅವರೊಟ್ಟಿಗೆ ಸಮರ್ಥ್‌ ವ್ಯಾಸ್‌ (33) ಮತ್ತು ಪ್ರೇರಕ್ ಮಂಕಡ್‌ (35) ಜೊತೆಗಾರಿಕೆ ನಿಭಾಯಿಸಿ ಗೆಲುವಿಗೆ ಬಲವಾದರು. ಕರ್ನಾಟಕ ಪರ ಕೆ. ಗೌತಮ್‌ (50ಕ್ಕೆ 2) ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ: 49.1 ಓವರ್‌ಗಳಲ್ಲಿ 171 ರನ್‌ಗಳಿಗೆ ಆಲ್‌ಔಟ್‌ (ಆರ್‌ ಸಮರ್ಥ್‌ 88, ಮನೋಜ್‌ ಭಾಂಡಗೆ 22; ಜಯದೇವ್‌ ಉನಾದ್ಕಟ್‌ 26ಕ್ಕೆ 4).
ಸೌರಾಷ್ಟ್ರ: 36.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 172 ರನ್‌ (ಜಯ್‌ ಗೋಹಿಲ್ 61, ಸಮರ್ಥ್ ವ್ಯಾಸ್‌ 33, ಪ್ರೇರಕ್ ಮಂಕಡ್‌ 35, ಅರ್ಪಿತ್‌ ವಾಸವಾಡ ಅಜೇಯ 25; ಕೆ. ಗೌತಮ್ 50ಕ್ಕೆ 2).
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌