ಆ್ಯಪ್ನಗರ

ವಿಜಯ್ ಹಜಾರೆ ಟ್ರೋಫಿ; ಕರ್ನಾಟಕಕ್ಕೆ ಹೈದರಾಬಾದ್ ಮೊದಲ ಸವಾಲು

2019-20ನೇ ಸಾಲಿನ ವಿಜಯ್ ಹಜಾರೆ ಸೀಮಿತ ಓವರ್‌ಗಳ ದೇಶೀಯ ಕ್ರಿಕೆಟ್ ಟೂರ್ನಿಗೆ ಇಂದಿನಿಂದ (ಸೆ.24) ಚಾಲನೆ ದೊರಕಿದೆ. ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ನಾಲ್ಕನೇ ಬಾರಿಗೆ ಕಿರೀಟದ ಮೇಲೆ ಕಣ್ಣಿಟ್ಟಿದೆ.

Vijaya Karnataka Web 24 Sep 2019, 10:07 am
ಬೆಂಗಳೂರು: ದೇಶೀಯ ಕ್ರಿಕೆಟ್ ಹಬ್ಬ 2019-20ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಮತ್ತೆ ಆರಂಭವಾಗಿದೆ. ಕರ್ನಾಟಕ ತಂಡವು ತನ್ನ ಮೊದಲ ಹೋರಾಟದಲ್ಲಿ ಹೈದಬಾದಾದ್ ಸವಾಲನ್ನು ಎದುರಿಸುತ್ತಿದೆ.
Vijaya Karnataka Web manish-pandey-02


ಸೀಮಿತ ಓವರ್‌ಗಳ ವಿಜಯ್ ಹಜಾರೆ ಟೂರ್ನಿಯಲ್ಲಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸುತ್ತಿದ್ದಾರೆ.

ಯುವರಾಜ್ ಸಿಂಗ್‌ ಗೌರವ ಸೂಚಕವಾಗಿ ಜೆರ್ಸಿ 'ನಂ 12' ನಿವೃತ್ತಿ ನೀಡಬೇಕೇ?

ಕರ್ನಾಟಕದ ತಂಡವು ಯುವ ಹಾಗೂ ಅನುಭವಿ ಆಟಗಾರರಿಂದ ತುಂಬಿಕೊಂಡಿದೆ. ಸದ್ಯ ಟೀಮ್ ಇಂಡಿಯಾ ಕರ್ತವ್ಯದಲ್ಲಿರುವ ಕೆಎಲ್ ರಾಹುಲ್ ಇನ್ನಷ್ಟೇ ತಂಡವನ್ನು ಸೇರಿಕೊಳ್ಳಬೇಕಿದೆ. ಶ್ರೇಯಸ್ ಗೋಪಾರ್, ಕೆ ಗೌತಮ್, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ ಸೇರಿದಂತೆ ದೇವದತ್ ಪಡಿಕ್ಕಲ್ ಅವರಂತಹ ಯುವ ಪಡೆಯನ್ನು ಪಡೆದಿದೆ.

ಎಲೈಟ್ ಎ ಗುಂಪಿನಲ್ಲಿರುವ ತಂಡಗಳ ವಿವರ:

ಕರ್ನಾಟಕ, ಜಾರ್ಖಂಡ್, ಕೇರಳ, ಆಂದ್ರ ಪ್ರದೇಶ, ಮುಂಬಯಿ, ಛತ್ತೀಸಗಡ, ಸೌರಾಷ್ಟ್ರ, ಗೋವಾ, ಕರ್ನಾಟಕ, ಹೈದರಾಬಾದ್.

ಕರ್ನಾಟಕ ತಂಡದ ವಿವರ:
ಮನೀಶ್ ಪಾಂಡೆ (ನಾಯಕ), ಕೃಷ್ಣಮೂರ್ತಿ ಸಿದ್ದಾರ್ತ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಅಭಿಷೇಕ್ ರೆಡ್ಡಿ, ಪವನ್ ದೇಶಪಾಂಡೆ, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಪ್ರವೀಣ್ ದುಬೆ, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ವಿ ಕೌಶಿಕ್.

ರಿಷಬ್ ಪಂತ್‌ರನ್ನು ಟೀಮ್ ಮ್ಯಾನೇಜ್‌ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಗೌತಮ್ ಗಂಭೀರ್ ಗರಂ!

ಏನಿದು ವಿಜಯ್ ಹಜಾರೆ ಟ್ರೋಫಿ?
ಭಾರತದ ಮಾಜಿ ದಿಗ್ಗಜ ವಿಜಯ್ ಹಜಾರೆ ಹೆಸರಿನಲ್ಲಿ 2002-03ನೇ ಇಸವಿಯಲ್ಲಿ ವಿಜಯ್ ಹಜಾರೆ ಟ್ರೋಫಿಯನ್ನು ಬಿಸಿಸಿಐ ಆಯೋಜಿಸಿತ್ತು. ಇದು ರಣಜಿಗೆ ಸಮಾನವಾದ ರಾಜ್ಯ ತಂಡಗಳನ್ನು ಒಳಗೊಂಡ ಸೀಮಿತ ಓವರ್‌ಗಳ ಟೂರ್ನಿಯಾಗಿದೆ. 2017-18ನೇ ಸಾಲಿನಲ್ಲಿ ಮನೀಶ್ ಪಾಂಡೆ ಮುಂದಾಳತ್ವದಲ್ಲಿ ಕರ್ನಾಟಕ ಕೊನೆಯ ಬಾರಿಗೆ ಟ್ರೋಫಿ ಗೆದ್ದಿತ್ತು.

ತಮಿಳುನಾಡು ದಾಖಲೆಯ ಐದು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕ ಹಾಗೂ ಮುಂಬಯಿ ತಂಡಗಳು ತಲಾ ಮೂರು ಬಾರಿ ಟ್ರೋಫಿ ಬಗಲಿಗೇರಿಸಿಕೊಂಡಿದೆ.

ಕರ್ನಾಟಕ ಚಾಂಪಿಯನ್: 2012/13, 2014/15, 2017/18

ತಂಡಗಳ ವಿಂಗಡನೆ:
2018-19ನೇ ಸಾಲಿನಲ್ಲಿ ಎಲ್ಲ ತಂಡಗಳನ್ನು ಮೂರು ಎಲೈಟ್ ಗುಂಪು ಹಾಗೂ 1 ಪ್ಲೇಟ್ ಗುಂಪುಗಳಾಗಿ ವಿಂಗಡಿಸಲಾಗಿದೆ. ಅಗ್ರ ಎರಡು ಎಲೈಟ್ ಗುಂಪುಗಳು ತಲಾ ಒಂಬತ್ತು ತಂಡಗಳನ್ನು ಮತ್ತು ಮೂರನೇ ಎಲೈಟ್ ಗುಂಪು 10 ತಂಡಗಳನ್ನು ಒಳಗೊಂಡಿದೆ. ಹಾಗೆಯೇ ಪ್ಲೇಟ್ ಗುಂಪಿನಲ್ಲಿ 10 ತಂಡಗಳನ್ನು ಒಳಗೊಂಡಿದೆ. ಕಳೆದ ಮೂರು ಋತುಗಳಲ್ಲಿನ ಅಂಕಗಳ ಆಧಾರ ಮೇಲೆ ತಂಡಗಳನ್ನು ವಿಂಗಡಿಸಲಾಗುತ್ತದೆ.

1993-04ನೇ ಸಾಲಿನಿಂದ 201-02ರ ವರೆಗೆ ಪ್ರತಿ ತಂಡಗಳು ತಮ್ಮ ವಲಯದಲ್ಲೇ ಆಡುತ್ತಿದ್ದವು. ಅಲ್ಲದೆ ಫೈನಲ್ ಇರುತ್ತಿರಲಿಲ್ಲ ಅಥವಾ ನಿರ್ದಿಷ್ಟ ವಿಜೇತರನ್ನು ಘೋಷಿಸಲಾಗುತ್ತಿರಲಿಲ್ಲ. 2004-05ರ ಸಾಲಿನಲ್ಲಷ್ಟೇ ಪ್ಲೇ-ಆಫ್ ಮಾದರಿ, ಸಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌