ಆ್ಯಪ್ನಗರ

ಕೊಹ್ಲಿ ಅನುಪಸ್ಥಿತಿಯಲ್ಲಿ ಧೋನಿ ಮಾರ್ಗದರ್ಶನ ನಿರ್ಣಾಯಕ!

ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ಗೆ ಶನಿವಾರದಿಂದ ಚಾಲನೆ ದೊರಕುತ್ತಿದೆ. ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ಇದರಿಂದಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾ ಪಡೆದಿದ್ದಾರೆ. ಹಾಗೆಯೇ ಹೊಸ ಹುರುಪಿನಲ್ಲಿರುವ ಭಾರತೀಯ ಪಡೆ ಉತ್ತಮ ನಿರ್ವಹಣೆ ನೀಡುವ ಭರವಸೆಯಲ್ಲಿದೆ.

TOI.in 15 Sep 2018, 4:31 pm
ದುಬೈ: ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ಗೆ ಶನಿವಾರದಿಂದ ಚಾಲನೆ ದೊರಕುತ್ತಿದೆ. ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ಇದರಿಂದಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾ ಪಡೆದಿದ್ದಾರೆ. ಹಾಗೆಯೇ ಹೊಸ ಹುರುಪಿನಲ್ಲಿರುವ ಭಾರತೀಯ ಪಡೆ ಉತ್ತಮ ನಿರ್ವಹಣೆ ನೀಡುವ ಭರವಸೆಯಲ್ಲಿದೆ.
Vijaya Karnataka Web dhoni-09


ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-4ರ ಅಂತರದ ಸರಣಿ ಸೋಲಿನ ಭಾರಿ ಮುಖಭಂಗ ಎದುರಿಸಿತ್ತು. ಆದರೂ ಆ ತಂಡದಲ್ಲಿದ್ದ ಶಿಖರ್ ಧವನ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಮಾತ್ರ ಏಷ್ಯಾ ಕಪ್‌ನಲ್ಲಿ ಭಾಗವಹಿಸಲಿದ್ದಾರೆ.

ಯಎಇ ವಾತಾವರಣಕ್ಕೆ ಹೊಂದಿಕೊಂಡು ಅಲ್ಲಿನ ಪಿಚ್ ಅರಿತುಕೊಂಡು ಸರಿಯಾದ ನಿರ್ಣಯ ಕೈಗೊಳ್ಳುವುದು ಅತಿ ಅಗತ್ಯವೆನಿಸಿದೆ. ಈ ಹಿನ್ನಲೆಯಲ್ಲಿ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಸಾನಿಧ್ಯವು ಅತಿ ಮುಖ್ಯವೆನಿಸಲಿದೆ.

ನಾಯಕನಾಗಿಯೂ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಧೋನಿ, ಕಪ್ತಾನಗಿರಿ ವಿರಾಟ್ ಕೊಹ್ಲಿಗೆ ವಹಿಸಿಕೊಟ್ಟ ಬಳಿಕವೂ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ವಿಕೆಟ್ ಹಿಂದುಗಡೆ ನಿಂತು ಡಿಆರ್‌ಎಸ್ ಮನವಿ ಮಾಡುವಲ್ಲೂ ಧೋನಿ ಪಾತ್ರ ಮಹತ್ವದ್ದಾಗಿದೆ.

ಇದೀಗ ತಂಡದ ಖಾಯಂ ನಾಯಕ ವಿರಾಟ್ ಅನುಪಸ್ಥಿತಿಯಲ್ಲೂ ರೋಹಿತ್‌ ತಂಡವನ್ನು ಮುನ್ನಡೆಸುವಾಗ ಧೋನಿ ಇದೇ ಪಾತ್ರವನ್ನು ನಿಭಾಯಿಸುವುದು ಮುಖ್ಯವೆನಿಸುತ್ತದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ಸಿನತ್ತ ಕೊಂಡೊಯ್ದಿರುವ ರೋಹಿತ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೇ ನಿರ್ವಹಣೆ ಕಾಯ್ದುಕೊಳ್ಳಬೇಕಿದೆ.

ಯುವ ಆಟಗಾರರಿಗೂ ತಮ್ಮ ಕೆರಿಯರ್ ರೂಪಿಸಿಕೊಳ್ಳಲು ಧೋನಿ ಸಾನಿಧ್ಯ ಮಹತ್ವೆದನಿಸಲಿದೆ. ಒಟ್ಟಿನಲ್ಲಿ ಏಕದಿನ ವಿಶ್ವಕಪ್‌ಗೂ ಮುನ್ನ ಪರಿಪೂರ್ಣ ಸಂಯೋಜನೆ ರೂಪಿಸಿಕೊಳ್ಳುವುದು ಟೀಮ್ ಇಂಡಿಯಾ ಗುರಿಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌