ಆ್ಯಪ್ನಗರ

ವಿಶ್ವಕಪ್ ವರೆಗೂ ಆಡಲು ಧೋನಿ ಬಳಿ ಬೇಡಿಕೊಂಡಿದ್ದು ವಿರಾಟ್?

ಏಕದಿನ ವಿಶ್ವಕಪ್ 2019 ಬಳಿಕ ನಿವೃತ್ತಿ ನಿರ್ಧಾರದಿಂದ ಹೊರಬರಲು ಮಹೇಂದ್ರ ಸಿಂಗ್ ಧೋನಿ ಅವರ ಮನವೊಳಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.

Vijaya Karnataka Web 23 Jul 2019, 2:55 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಮಕಾಲೀನ ಕಪ್ತಾನ ವಿರಾಟ್ ಕೊಹ್ಲಿ ಪರಸ್ಪರ ಅತೀವ ಗೌರವವನ್ನು ಹಂಚಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಪ್ರತಿ ಬಾರಿಯೂ ಹಿರಿಯ ಆಟಗಾರನ ಬೆಂಬಲಕ್ಕೆ ವಿರಾಟ್ ನಿಂತಿದ್ದಾರೆ.
Vijaya Karnataka Web kohli-dhoni-01


ನಾಯಕತ್ವ ಪರಿವರ್ತನಾ ಕಾಲಘಟ್ಟದಲ್ಲೂ ಯಾವುದೇ ತೊಂದರೆಗಳು ಎದುರಾಗಿಲ್ಲ. ಇದೀಗ ಏಕದಿನ ವಿಶ್ವಕಪ್ ಅಭಿಯಾನ ಮುಗಿದಿರುವಂತೆಯೇ 38ರ ಹರೆಯದ ಧೋನಿ ನಿವೃತ್ತಿ ಸಲ್ಲಿಸುವ ಬಗ್ಗೆ ವರದಿಗಳು ಎದ್ದಿದ್ದವು.

ಆದರೆ ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ವರೆಗೂ ಮುಂದುವರಿಯುವಂತೆಯೇ ಧೋನಿ ಅವರಲ್ಲಿ ಸ್ವತ: ನಾಯಕ ಕೊಹ್ಲಿ ಅವರೇ ಬೇಡಿಕೊಂಡಿದ್ದಾರೆ ಎಂಬುದೀಗ ತಿಳಿದು ಬಂದಿದೆ.

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿಭಾಯಿಸುವ ನಿಟ್ಟಿನಲ್ಲಿ ಕ್ರಿಕೆಟ್‌ಗೆ ಎರಡು ತಿಂಗಳುಗಳಷ್ಟು ಕಾಲ ವಿರಾಮ ಹಾಕಿರುವ ಧೋನಿ ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ಅಲಭ್ಯವಾಗಿದ್ದಾರೆ.

ನಿವೃತ್ತಿ ನಿರ್ಧಾರವನ್ನು ಕೈಬಿಡುವಲ್ಲಿ ಧೋನಿ ಅವರನ್ನು ಮನವೊಳಿಸಲು ಕೊಹ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಅತ್ಯುತ್ತಮ ಫಿಟ್ನೆಸ್ ಮಟ್ಟವನ್ನು ಕಾಯ್ದುಕೊಂಡಿರುವ ಧೋನಿ, ಮುಂದಿನ ವರ್ಷ ನಡೆಲಿಯಿರುವ ಟಿ20 ವಿಶ್ವಕಪ್‌ನಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದು ಕೊಹ್ಲಿ ನಂಬಿಕೆಯಾಗಿದೆ.

ಕೊಹ್ಲಿ ಈ ಹಿಂದೆಯೇ ಹಲವಾರು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿರುವಂತೆಯೇ ಧೋನಿ ಅವರೇ ನನ್ನ ನಾಯಕ ಎಂಬುದನ್ನು ನೀವಿಲ್ಲಿ ನೆನಿಪಿಸಿಕೊಳ್ಳಬಹುದಾಗಿದೆ.

ಇನ್ನೊಂದೆಡೆ ಧೋನಿ ಭವಿಷ್ಯದ ಬಗ್ಗೆ ಹೆಚ್ಚೇನು ವಿವರಣೆ ನೀಡದಿದ್ದರೂ ರಿಷಬ್ ಪಂತ್ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಲಿದ್ದಾರೆ ಎಂಬುದನ್ನು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಖಚಿತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌