ಆ್ಯಪ್ನಗರ

ಕೊಹ್ಲಿ ವಿಶ್ವಕಂಡ ಆಕ್ರಮಣಕಾರಿ ಆಟಗಾರ: ರೋಶನ್‌ ಸಿಲ್ವಾ

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವ ಕಂಡ ಅತ್ಯದ್ಭುತ ಆಟಗಾರ ಮಾತ್ರವಲ್ಲದೆ ಖ್ಯಾತ ನಾಯಕನಾಗಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬಲ್ಲ ಚಾಕಚಕ್ಯತೆಯುಳ್ಳವರು ಎಂದು ಶ್ರೀಲಂಕಾ ತಂಡದ ಟೆಸ್ಟ್‌ ಕ್ರಿಕೆಟಿಗ ರೋಶನ್‌ ಸಿಲ್ವಾ ತಿಳಿಸಿದರು.

Vijaya Karnataka 21 Mar 2018, 1:13 pm
ಮಂಗಳೂರು: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವ ಕಂಡ ಅತ್ಯದ್ಭುತ ಆಟಗಾರ ಮಾತ್ರವಲ್ಲದೆ ಖ್ಯಾತ ನಾಯಕನಾಗಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬಲ್ಲ ಚಾಕಚಕ್ಯತೆಯುಳ್ಳವರು ಎಂದು ಶ್ರೀಲಂಕಾ ತಂಡದ ಟೆಸ್ಟ್‌ ಕ್ರಿಕೆಟಿಗ ರೋಶನ್‌ ಸಿಲ್ವಾ ತಿಳಿಸಿದರು.
Vijaya Karnataka Web virat kohli is the worlds most aggressive player roshen silva
ಕೊಹ್ಲಿ ವಿಶ್ವಕಂಡ ಆಕ್ರಮಣಕಾರಿ ಆಟಗಾರ: ರೋಶನ್‌ ಸಿಲ್ವಾ


ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕೊಹ್ಲಿ ಶ್ರಮಜೀವಿಯಾಗಿದ್ದು ಕೆಲವು ಸಂದರ್ಭ ಇಡೀ ತಂಡ ಮಾಡಬೇಕಾದ ರನ್‌ಗಳನ್ನು ಏಕಾಂಗಿಯಾಗಿ ಸಂಪಾದಿಸಿ ತಂಡದ ವಿಜಯಕ್ಕೆ ಕಾರಣರಾಗಿದ್ದಾರೆ. ತಂಡದ ಕಪ್ತಾನನಾಗಿ ಸಲಹೆ ನೀಡುವುದು ಸುಲಭ ಆದರೆ ಸಲಹೆ ನೀಡಿದ್ದನ್ನು ಅಕ್ಷರಶಃ ತಾನೇ ಆಟದ ಮೂಲಕ ತೋರಿಸುವುದು ಕಷ್ಟ. ಈ ನಿಟ್ಟಿನಲ್ಲಿ ಕೊಯ್ಲಿ ಮಾದರಿಯಾಗಿದ್ದು ತನ್ನ ಅದ್ಭುತ ಆಟ ಮೂಲಕ ಎಲ್ಲರಿಗೂ ಮಾದರಿಯಾಗುತ್ತಾರೆ. 2007ರಲ್ಲಿ 19ರೊಳಗಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಪರ ವಿರಾಟ್‌ ಕೊಹ್ಲಿ ಆಡುತ್ತಿದ್ದಾಗ ನಾನು ಶ್ರೀಲಂಕಾ ಪರ ಆಡಿದ್ದೆ,''ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಟಿ4 ಸೂಪರ್‌ ಕಿಂಗ್ಸ್‌ ಮಾಲೀಕ ಮಾರ್ಷಲ್‌ ನೊರೊನ್ಹಾರ ಮಗ ಶ್ರೀಲಂಕಾದ ವಸಂತನ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದರು. ಆ ಮೂಲಕ ನನಗೆ ಮಂಗಳೂರಿನ ಪರಿಚಯವಾಗಿ, ರಾಯಭಾರಿ ಅವಕಾಶ ದೊರೆತಿದೆ. ವಸಂತನ್‌ ಈಗ ಟಿ-4 ಸೂಪರ್‌ ಕಿಂಗ್ಸ್‌ ತರಬೇತುದಾರರಾಗಿದ್ದಾರೆ ಎಂದರು.

''ಮಂಗಳೂರಿನ ಹವಾಮಾನ ಮತ್ತು ಆಹಾರ ಪದ್ಧತಿ ಶ್ರೀಲಂಕಾದಂತೆಯೇ ಹೋಲಿಕೆಯಾಗುತ್ತಿದ್ದು ಈ ನಗರ ನನಗೆ ತುಂಬಾ ಇಷ್ಟವಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಎಂಪಿಎಲ್‌ ಟೂರ್ನಿಯಲ್ಲಿ ಟಿ-4 ಸೂಪರ್‌ ಕಿಂಗ್ಸ್‌ ತಂಡದ ರಾಯಭಾರಿಯಾಗಿ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. ಇಲ್ಲಿನ ಜನ ತುಂಬಾ ಒಳ್ಳೆಯವರು. 3ರಿಂದ 4 ದಿನಗಳ ಕಾಲ ಮಂಗಳೂರಿನಲ್ಲಿದ್ದು ತಂಡವನ್ನು ಬೆಂಬಲಿಸುವೆ. ವೆಸ್ಟ್‌ ಇಂಡೀಸ್‌ ಪ್ರವಾಸ ಹಿನ್ನೆಲೆಯಲ್ಲಿ ಫೈನಲ್‌ ಪಂದ್ಯಕ್ಕೆ ಬರುವುದು ಅನುಮಾನ,''ಎಂದರು.

ಟಿ-4 ಸೂಪರ್‌ ಕಿಂಗ್ಸ್‌ ತಂಡದ ಮಾಲೀಕ ಮಾರ್ಷಲ್‌ ನೊರೊನ್ಹಾ ಮಾತನಾಡಿ, ''ಟಿ-4 ತಂಡವು ಬುಧವಾರ ಮೊದಲ ಪಂದ್ಯವನ್ನು ಆಡಲಿದೆ. ತಂಡದಲ್ಲಿ 3 ರಾಜ್ಯಮಟ್ಟದ ಆಟಗಾರರಿದ್ದು, ಮಂಗಳೂರಿನ 9 ಆಟಗಾರರಿದ್ದಾರೆ. ವಿದೇಶಿ ಕೋಚ್‌ ವಸಂತನ್‌, ರಾಯಭಾರಿ ರೋಶನ್‌ ಸೇರಿದಂತೆ ತಂಡ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ,'' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟೀಮ್‌ ನಿರ್ದೇಶಕ ಹ್ಯಾರಿಸ್‌ ಮೊಹಮ್ಮದ್‌, ಮ್ಯಾನೇಜರ್‌ ಜಿ. ಗಣೇಶ್‌ ಕುಮಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌