ಆ್ಯಪ್ನಗರ

ವಿಶ್ವಕಪ್‌ಗೆ ಅಚ್ಚರಿಯ ಪ್ಯಾಕೇಜ್ ಆಗಲಿದ್ದಾರೆಯೇ ಈ ಕನ್ನಡಿಗ ವೇಗಿ!

ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಾದಿಯಲ್ಲಿರುವ ಟೀಮ್ ಇಂಡಿಯಾ ಬೌಲರ್‌ಗಳ ಸಾಲಿನಲ್ಲಿ ಸರ್ಪ್ರೈಸ್ ಪ್ಯಾಕೇಜ್ ಇರಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿರುವುದು ಅಚ್ಚರಿ ಮೂಡಿಸಿದೆ. ಇಲ್ಲಿ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹೆಸರನ್ನು ಉಲ್ಲೇಖಿಸಿರುವುದು ಹೆಚ್ಚಿನ ಗಮನ ಸೆಳೆಯುತ್ತದೆ.

Vijaya Karnataka Web 8 Jan 2020, 11:23 am
ಇಂದೋರ್: ಒಂದು ಕಾಲದಲ್ಲಿ ಭಾರತೀಯ ತಂಡದಲ್ಲಿ ಕರ್ನಾಟಕ ಆಟಗಾರರ ಅಧಿಪತ್ಯವಿತ್ತು. ಅದರಲ್ಲೂ ಪ್ರಮುಖವಾಗಿಯೂ ಬೌಲಿಂಗ್ ವಿಭಾಗದಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗಿತ್ತು.
Vijaya Karnataka Web ವಿರಾಟ್ ಕೊಹ್ಲಿ - ಪ್ರಸಿದ್ಧ್ ಕೃಷ್ಣ


ಭಾರತ ತಂಡದಲ್ಲೀಗ ಕರ್ನಾಟಕದ ಬೌಲರ್‌ಗಳಿಲ್ಲ. ಈ ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ವಿಶ್ವಕಪ್‌ನಲ್ಲಿ ಅಚ್ಚರಿಯ ಪ್ಯಾಕೇಜ್ ಬಗ್ಗೆ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದ ಗೆಲುವಿನ ಬಳಿಕ ಪ್ರತಿಕ್ರಿಯಿಸುತ್ತಾ ವಿರಾಟ್ ಕೊಹ್ಲಿ, ಕರ್ನಾಟಕದ ಬೌಲರ್ ಪ್ರಸಿದ್ಧ್ ಕೃಷ್ಣ ಬಗ್ಗೆಯೂ ಉಲ್ಲೇಖಿಸಿರುವುದು ಅಚ್ಚರಿ ಮೂಡಿಸಿತ್ತು.

ರೋಹಿತ್ ದಾಖಲೆ ಮುರಿದು ಧೋನಿ ಸಾಲಿಗೆ ಸೇರಿದ ಕಿಂಗ್ ಕೊಹ್ಲಿ

"ವಿಶ್ವಕಪ್‌ನತ್ತ ಸಾಗುತ್ತಿರುವ ಟೀಮ್ ಇಂಡಿಯಾ ಸರಿಯಾದ ಹಾದಿಯಲ್ಲಿದೆ. ನಾವೀಗ ಬೇಕಾದಷ್ಟು ಬೌಲಿಂಗ್ ಆಯ್ಕೆಗಳನ್ನು ಪಡೆದಿದ್ದೇವೆ. ನನಗನಿಸುತ್ತದೆ ಆಸ್ಟ್ರೇಲಿಯಾಗೆ ಹೋಗುವಾಗ ಓರ್ವ ಬೌಲರ್ ಸರ್ಪ್ರೈಸ್ ಪ್ಯಾಕೇಜ್ ಆಗಲಿದ್ದಾರೆ. ವೇಗದ ಜತೆಗೆ ಬೌನ್ಸರ್ ದಾಳಿಯನ್ನು ಮಾಡಬಲ್ಲ ಬೌಲರ್ ಆಗಿರಬಹುದು. ದೇಶೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧ್ ಕೃಷ್ಣ ಉತ್ತಮ ನಿರ್ವಹಣೆಯನ್ನು ನೀಡಿದ್ದಾರೆ. ಯಾವುದೇ ಪ್ರಕಾರದ ಕ್ರಿಕೆಟ್ ಆದರೂ ಈ ಎಲ್ಲ ಬೌಲರ್‌ಗಳನ್ನು ಹೊಂದಿರುವುದು ಶ್ರೀಮಂತವಾಗಿಸುತ್ತದೆ. ವಿಶ್ವಕಪ್‌ನತ್ತ ನೋಡಿದಾಗ ನಮಗೆ ಬೇಕಾದಷ್ಟು ಆಯ್ಕೆಗಳಿವೆ" ಎಂದರು.

ಇಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೂಹ್ಲಿ, ಕರ್ನಾಟಕದ 23ರ ಹರೆಯದ ಯುವ ಬಲಗೈ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹೆಸರನ್ನು ಉಲ್ಲೇಖಿಸಿರುವುದು ಅತ್ಯಂತ ಗಮನಾರ್ಹವೆನಿಸುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರಸಿದ್ಧ್ ಕೃಷ್ಣ 18 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ತಮ್ಮ ನಿಖರ ದಾಳಿಯಿಂದಲೇ ಗಮನ ಸೆಳೆದಿದ್ದಾರೆ.

ವಿರಾಟ್ ಕೊಹ್ಲಿ-ಶ್ರೇಯಸ್ ಅಯ್ಯರ್ ಪರಸ್ಪರ ದಿಟ್ಟಿಸಿ ನೋಡಿದ್ದೇಕೆ?

ಏತನ್ಮಧ್ಯೆ ಭಾರತದ ಸರ್ವಾಂಗೀಣ ಪ್ರದರ್ಶನದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಸರಣಿಯಿಂದ ಸರಣಿಗೆ ಬಲವನ್ನು ಬಲ ಸಾಧಿಸುತ್ತಿದ್ದೇವೆ. ರೋಹಿತ್ ಶರ್ಮಾ ಇಲ್ಲದರ ಹೊರತಾಗಿಯೂ ಅಧಿಕಾರಯುತ ಗೆಲುವು ದಾಖಲಿಸಿದ್ದೇವೆ. ಇದೊಂದು ಉತ್ತಮ ಸಂಕೇತವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌