ಆ್ಯಪ್ನಗರ

ಕೊಹ್ಲಿಗೆ ತಕ್ಕ ಉತ್ತರ ನೀಡಿದ ವೀರು

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿನ ಟೀಮ್ ಇಂಡಿಯಾದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ತರಲಾಗಿತ್ತು.

TIMESOFINDIA.COM 14 Jan 2018, 11:57 am
ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿನ ಟೀಮ್ ಇಂಡಿಯಾದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ತರಲಾಗಿತ್ತು.
Vijaya Karnataka Web virat kohli should drop himself if he fails at centurion says virender sehwag
ಕೊಹ್ಲಿಗೆ ತಕ್ಕ ಉತ್ತರ ನೀಡಿದ ವೀರು


ಎಡಗೈ ಓಪನರ್ ಶಿಖರ್ ಧವನ್, ಬಲಗೈ ವೇಗಿ ಭುವನೇಶ್ವರ್ ಕುಮಾರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಬದಲಿಗೆ ಅನುಕ್ರಮವಾಗಿ ಕೆಎಲ್ ರಾಹುಲ್, ಇಶಾಂತ್ ಶರ್ಮಾ ಮತ್ತು ಪಾರ್ಥಿವ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಇದು ಅನೇಕ ಮಾಜಿ ಕ್ರಿಕೆಟಿಗರಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಮಾಜಿ ಡ್ಯಾಶಿಂಗ್ ಓಪನರ್ ಹಾರ್ದಿಕ್ ಪಾಂಡ್ಯ ಪ್ರಶ್ನಿಸಿದ್ದಾರೆ.

ಹಾಗೊಂದು ವೇಳೆ ಸೆಂಚುರಿಯನ್ ಕ್ರಿಕೆಟ್ ಟೆಸ್ಟ್‌ನಲ್ಲಿ ವೈಫಲ್ಯ ಅನುಭವಿಸಿದರೆ ಸ್ವತ: ಕೊಹ್ಲಿ ಅವರೇ ತಮ್ಮನ್ನು ತಾವೇ ಹೊರಗಿರಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇವಲ ಒಂದು ಪಂದ್ಯ ವೈಫಲ್ಯದಿಂದಾಗಿ ಶಿಖರ್ ಧವನ್ ಅವರನ್ನು ಹೊರಗಟ್ಟಲಾಗಿದೆ. ಇನ್ನೊಂದೆಡೆ ಯಾವುದೇ ಕಾರಣವಿಲ್ಲದೆ ಭುವನೇಶ್ವರ್ ಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.

ಭುವಿಯನ್ನು ಕಡೆಗಣಿಸಿರುವುದು ಸರಿಯಾದ ನಿರ್ಧಾರವೇ ಅಲ್ಲ. ಎತ್ತರದ ಕಾರಣ ನೀಡಿ ಇಶಾಂತ್ ಆಯ್ಕೆ ಮಾಡಲಾಗಿದೆ. ಈ ಮೂಲಕ ಭುವಿ ಆತ್ಮವಿಶ್ವಾಸವನ್ನು ಕುಗ್ಗಿಸಲಾಗಿದೆ ಎಂದು ವಿರಾಟ್ ಮೇಲೆ ವೀರು ಅಸಮಾಧಾನ ತೋಡಿಕೊಂಡಿದ್ದಾರೆ.

ಹಾಗೆೇನಾದರೂ ಇಶಾಂತ್‌ ಸೇರಿಸಬೇಕಿದ್ದರೆ ಬೇರೆ ಬೌಲರ್‌ಗೆ ಬದಲಿ ಆಯ್ಕೆ ಮಾಡಬಹುದಿತ್ತು. ಭುವನೇಶ್ವರ್ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದರು ಎಂದು ಸೆಹ್ವಾಗ್ ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌