ಆ್ಯಪ್ನಗರ

ದಾದಾ ಕ್ರೀಸ್‌ನಲ್ಲಿ ಹೇಗಿರುತ್ತಿದ್ದರು ಗೊತ್ತೆ? ಸೆಹವಾಗ್‌ ಟ್ವೀಟ್‌ಗೆ ನೆಟ್ಟಿಗರು ಫುಲ್‌ ಫಿದಾ!

ಕ್ರೀಸ್‌ಗೆ ಇಳಿದಾಗ ದಾದಾ ಹೇಗಿರುತ್ತಿದ್ದರು ಎಂಬುದನ್ನು 4 ಸ್ಟೆಪ್‌ಗಳಲ್ಲಿ ವರ್ಣಿಸಿರುವ ಸೆಹವಾಗ್‌ ಟ್ವೀಟ್‌ಗೆ ನೆಟ್ಟಿಗರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ

Vijaya Karnataka Web 8 Jul 2018, 3:22 pm
ಬೆಂಗಳೂರು: ಸೌರವ್‌ ಗಂಗೂಲಿ ಅವರ ಆಕ್ರಮಣಕಾರಿ ಆಟ ಹೇಗಿರುತ್ತದೆ ಎಂಬುದನ್ನು ನಾಲ್ಕು ಸಾಲುಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹವಾಗ್‌ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ. ಸೆಹವಾಗ್‌ ವರ್ಣನೆಗೆ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.
Vijaya Karnataka Web Dada


46ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸೌರವ್‌ ಗಂಗೂಲಿ ಅವರ ವರ್ತನೆ ಮೈದಾನದಲ್ಲಿ ಹೇಗಿರುತ್ತದೆ ಎಂದು ಸೆಹವಾಗ್‌ ನಾಲ್ಕು ಸ್ಟೆಪ್‌ಗಳ ಮೂಲಕ ನೆನಪಿಸಿಕೊಂಡಿದ್ದಾರೆ.

ಸ್ಟೆಪ್‌ 1: ಎಚ್ಚೆತ್ತುಕೊಳ್ಳುವುದು, ಎರಡು ಬಾರಿ ಕಣ್ಣು ಮಿಟುಕಿಸುವುದು ಮತ್ತು ಟ್ರಾಕ್‌ ಮೇಲೆ ಕುಣಿಯುವುದು.
ಸ್ಟೆಪ್‌ 2: ಎದುರಾಳಿಗಳನ್ನಷ್ಟೇ ಅಲ್ಲ, ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರನ್ನು ಚಚ್ಚುವುದು (ಉದ್ದೇಶಪೂರ್ವಕವಾಗಿ ಅಲ್ಲ)
ಸ್ಟೆಪ್‌ 3: ಚೆಂಡನ್ನಷ್ಟೇ ತಿರುಗಿಸುವುದಲ್ಲ, ಕೂದಲನ್ನು ತಿರುಗಿಸುತ್ತ ಹೃದಯದಿಂದ ಬೌಲಿಂಗ್‌ ಮಾಡುತ್ತಾರೆ.
ಸ್ಟೆಪ್‌ 4: ಯಾರು ತನ್ನನ್ನು ನೋಡುತ್ತಿಲ್ಲ ಎಂದುಕೊಂಡು ಮನಸ್ಫೂರ್ತಿಯಾಗಿ ಸಂಭ್ರಮಿಸುವ ಅದ್ಭುತ ಮನುಷ್ಯ
ಎಂದು ವರ್ಣಿಸಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಮೊಹಮ್ಮದ್‌ ಕೈಫ್‌, ವಿವಿಎಸ್‌ ಲಕ್ಷಣ್‌, ಹೇಮಂಗ್‌ ಬದಾನಿ ಮುಂತಾದವರು ಗಂಗೂಲಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಆಫ್‌ಸೈಡ್‌ನಲ್ಲಿ ಆಕರ್ಷಕ ಹೊಡೆತಗಳ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಮೊದಲ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗಳಿಸಿದ್ದ ದಾದಾ ಬಗ್ಗೆ ಅಂದು ರಾಹುಲ್‌ ದ್ರಾವಿಡ್‌ 'ಆಫ್‌ಸೈಡ್‌ನಲ್ಲಿ ಮೊದಲು ದೇವರಿರುತ್ತಾನೆ, ನಂತರ ಸೌರವ್‌ ಗಂಗೂಲಿ ಇರುತ್ತಾರೆ' ಎಂದಿದ್ದರು.

183 ರನ್‌ ಗಳಿಸುವ ಮೂಲಕ ವಿಶ್ವಕಪ್‌ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿ ಗಳಿಸಿರುವ ಗಂಗೂಲಿ 'ಕೋಲ್ಕತದ ರಾಜಕುಮಾರ' ಎಂದೂ ಅಭಿಮಾನಿಗಳು ಗುರುತಿಸುತ್ತಾರೆ.

2003ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ ಕೊಂಡೊಯ್ದ ರೋಚಕತೆ ಕ್ರಿಕೆಟ್‌ ಅಭಿಮಾನಿಗಳ ಮನೆ ಮಾತಾಗಿದೆ. ನ್ಯಾಟ್‌ವೆಸ್ಟ್‌ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ರೋಚಕ ಗೆಲುವು ಸಾಧಿಸಿದ ಸಂದರ್ಭ ಪೆವಿಲಿಯನ್‌ನಲ್ಲಿದ್ದ ನಾಯಕ ಗಂಗೂಲಿ ಶರ್ಟ್‌ ಬಿಚ್ಚಿ ಆಕಾಶದತ್ತ ಗಿರಗಿರನೆ ತಿರುಗಿಸಿ ಸಂಭ್ರಮಿಸಿದ್ದು ಕ್ರಿಕೆಟ್‌ ಜಗತ್ತಿನಲ್ಲಿ ಜನಮಾನಸವಾಗುಳಿದಿದೆ. ಅಂದಿನ ಆ ವೀಡಿಯೋ ಕ್ಲಿಪ್ಪಿಂಗ್‌ ಸಾಮಾಜಿಕ ತಾಣಗಳಲ್ಲಿ ಜನ್ಮದಿನದ ನೆಪದಲ್ಲಿ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌