ಆ್ಯಪ್ನಗರ

ನಿಜವಾಯ್ತು 12 ವರ್ಷಗಳ ಹಿಂದೆ ದಾದಾ ಬಗ್ಗೆ ವೀರು ನುಡಿದಿದ್ದ ಭವಿಷ್ಯ!

12 ವರ್ಷಗಳ ಹಿಂದೆಯೇ 2007ರಲ್ಲಿ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಲಿದ್ದಾರೆಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರು. ಇದೀಗ ವೀರು ಭವಿಷ್ಯವಾಣಿಯು ನಿಜವೆನಿಸಿದೆ.

Vijaya Karnataka Web 29 Oct 2019, 4:49 pm
ಹೊಸದಿಲ್ಲಿ: 12 ವರ್ಷಗಳ ಹಿಂದೆಯೇ ಅಂದರೆ 2007ನೇ ಇಸವಿಯಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಲಿದ್ದಾರೆಂದು ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರು.
Vijaya Karnataka Web ganguly-sehwag


ಇದೀಗ ಸೆಹ್ವಾಗ್ ನುಡಿದಿರುವ ಭವಿಷ್ಯವಾಣಿಯು ನಿಜವಾಗಿದೆ. 2019 ಅಕ್ಟೋಬರ್ 23ರಂದು ಬಂಗಾಳ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಸಿಸಿಐ ಅಧ್ಯಕ್ಷ ಗಾದಿಗೇರಿದ ಎರಡನೇ ಮಾಜಿ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರವಾದರು. ಪ್ರಸ್ತುತ 12 ವರ್ಷಗಳ ಹಿಂದೆ ಸೆಹ್ವಾಗ್ ನುಡಿದಿರುವ ಭವಿಷ್ಯವನ್ನು ನೆನಪಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ 'ಡ್ಯಾಶಿಂಗ್ ಓಪನರ್' ಆಗಲು ಕಾರಣ ಯಾರು ಗೊತ್ತಾ?

ನಿಜವಾಗ್ಲೂ, ದಾದಾ ಬಿಸಿಸಿಐ ಅಧ್ಯಕ್ಷರಾದ ಸುದ್ದಿ ಆಲಿಸುತ್ತಿದ್ದಂತೆಯೇ ನನಗೆ 2007ರ ಘಟನೆಯು ನೆನಪಿಗೆ ಬಂತು. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ನಾನು ಹಾಗೂ ವಾಸೀಂ ಜಾಫರ್ ಬೇಗನೇ ಔಟ್ ಆಗಿದ್ದೆವು. ಸಚಿನ್ ತೆಂಡೂಲ್ಕರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ಮೈದಾನಕ್ಕಿಳಿಯಲು ಸಾಧ್ಯವಾಗಲಿಲ್ಲ. ಅನಿರೀಕ್ಷಿತವಾಗಿ ಸೌರವ್ ಗಂಗೂಲಿಯಲ್ಲಿ ಕ್ರೀಸಿಗಿಳಿಯಲು ಸೂಚಿಸಲಾಯಿತು. ದಾದಾ ಪಾಲಿಗಿದು ಕಮ್‌ಬ್ಯಾಕ್ ಸರಣಿಯಾಗಿತ್ತು. ಅಲ್ಲದೆ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದರು. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ, ಒತ್ತಡವನ್ನು ನಿಭಾಯಿಸಿದ ರೀತಿ ನೀಡಿದರೆ, ಬಹುಶ: ಅವರಿಂದ ಮಾತ್ರ ಸಾಧ್ಯ ಎಂದು ವೀರು ವಿವರಿಸಿದರು.

ನುಡಿದಂತೆ ನಡೆದ ದಾದಾ; ಸದ್ಯದಲ್ಲೇ ಪ್ರಥಮ ದರ್ಜೆ ಕ್ರಿಕೆಟಿಗರಿಗೂ ಗುತ್ತಿಗೆ ಒಪ್ಪಂದ!

ಆ ದಿನ ನಾವೆಲ್ಲರೂ ಡ್ರೆಸ್ಸಿಂಗ್ ಕೋಣೆಯಲ್ಲಿ ನಮ್ಮಲ್ಲಿ ಯಾರಾದರೂ ಮುಂದೆ ಬಿಸಿಸಿಐ ಅಧ್ಯಕ್ಷರಾಗಲು ಸಾಧ್ಯವಾದರೆ ಅದು ದಾದಾ ಎಂಬುದನ್ನು ಒಪ್ಪಿಕೊಂಡೆವು. ಅವರಿಗೆ ಬಂಗಾಳ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಕೂಡಾ ಹೇಳಿದ್ದೆ. ನನ್ನ ಒಂದು ಭವಿಷ್ಯವಾಣಿಯು ನಿಜವಾಗಿದೆ. ಇನ್ನೊಂದನ್ನು ನೋಡೋಣ, ಕಾಯೋಣ ಎಂದು 41ರ ಹರೆಯದ ವೀರು ಸೇರಿಸಿದರು.

ವೀರು ನುಡಿದಿರುವ ಎರಡನೇ ಭವಿಷ್ಯವಾಣಿಯು ನಿಜವಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮೊದಲ ಟಿ20 ಪಂದ್ಯಕ್ಕೆ 'ಹೈ-ಅಲರ್ಟ್'; ಹಿಟ್ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ?

ಈ ಮೊದಲು ತಮ್ಮ ನಾನಿಂದು ಏನಾಗಿದ್ದೇನೋ ಅವೆಲ್ಲದ್ದಕ್ಕೂ ದಾದಾ ಕಾರಣ ಎಂದು ವೀರು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಗಂಗೂಲಿ ನೀಡಿರುವ ಬೆಂಬಲದಿಂದಲೇ ಕ್ರಿಕೆಟಿಗನಾಗಿ ಹೆಚ್ಚು ಯಶಸ್ಸು ಗಳಿಸಲು ಹಾಗೂ ಡ್ಯಾಶಿಂಗ್ ಓಪನರ್ ಆಗಿ ಪರಿವರ್ತನೆಯಾಗಲು ಸಾಧ್ಯವಾಯಿತು. ಇದೇ ಗುಣ ಲಕ್ಷ್ಮಣವು ಬಿಸಿಸಿಐ ಅಧ್ಯಕ್ಷರಾಗಿಯೂ ಗಂಗೂಲಿಗೆ ಸರಿಯಾಗಿ ಹೊಂದಿಕೆಯಾಗಲಿದೆ ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌