ಆ್ಯಪ್ನಗರ

ವಿಶ್ವಕಪ್‌ನಲ್ಲಿ ಆಡುವ ಬಳಗದ ಕುರಿತು ಖಚಿತತೆಯಿದೆ: ಕೊಹ್ಲಿ

ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಆಡಲಿರುವ ಭಾರತದ ಆಡುವ ಬಳಗ ಹಾಗೂ ಒಟ್ಟಾರೆ ತಂಡದ ಬಗ್ಗೆ ಸಂಪೂರ್ಣವಾಗಿ ಖಚಿತತೆಯನನ್ನು ಹೊಂದಿರುವುದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದರು.

Vijaya Karnataka Web 14 Mar 2019, 12:27 pm
ಹೊಸದಿಲ್ಲಿ: ಏಕದಿನ ವಿಶ್ವಕಪ್‌ಗೂ ಮೊದಲು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-3ರ ಅಂತರದ ಹೀನಾಯ ಸೋಲಿಗೆ ಗುರಿಯಾಗಿದೆ. ಇದರೊಂದಿಗೆ ಮುಂಬರುವ ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲುವ ಭಾರತದ ಸಾಧ್ಯತೆಯ ಬಗ್ಗೆ ಸಂಶಯಗಳು ಮೂಡಿವೆ.
Vijaya Karnataka Web virat-kohli-captaincy


ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಮುಂಬರುವ ವಿಶ್ವಕಪ್‌ನಲ್ಲಿ ಆಡುವ ಬಳಗದ ಬಗ್ಗೆ ಖಚಿತತೆಯಿದ್ದು, ಕೇವಲ ಒಂದು ಸ್ಥಾನದ ಬಗ್ಗೆ ಮಾತ್ರ ಮಾತುಕತೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಆಸೀಸ್ ವಿರುದ್ಧದ ಸರಣಿಯಲ್ಲಿ ಕೆಲವೊಂದು ಪ್ರಯೋಗಗಳಿಗೆ ಮುಂದಾಗಿದ್ದೆವು. ಆದರೆ ಸರಣಿ ಸೋಲಿಗೆ ಇದೊಂದು ಕಾರಣವಲ್ಲ. ವಿಶ್ವಕಪ್‌ನಲ್ಲಿ ಆಡುವ ಬಳಗದ ಬಗ್ಗೆ ಖಚಿತತೆಯಿದೆ. ಪರಿಸ್ಥಿತಿಗೆ ಅನುಗುಣವಾಗಿ ಒಂದು ಬದಲಾವಣೆ ಕಾಣಬಹುದು. ಹಾರ್ದಿಕ್ ಪಾಂಡ್ಯ ಆಗಮಿಸಿದಾಗ ಬ್ಯಾಟಿಂಗ್ ಆಳ ಹಾಗೂ ಹೆಚ್ಚಿನ ಬೌಲಿಂಗ್ ಆಯ್ಕೆಯು ಸಿಗಲಿದೆ. ಆಡುವ ಬಳಗದ ಬಗ್ಗೆ ಸ್ಪಷ್ಟತೆಯಿದೆ ಎಂದರು.

ಇದೀಗ ಆಟಗಾರರಿಗೆ ತಮ್ಮ ಜವಾಬ್ದಾರಿಯನ್ನು ವಹಿಸಲಿದ್ದೇವೆ. ಅದಕ್ಕೆ ತಕ್ಕುದಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕೇವಲ ಒಂದು ಸ್ಥಾನದ ಬಗ್ಗೆ ಮಾತ್ರ ಮಾತುಕತೆ ನಡೆಯಬೇಕು ಎಂದು ವಿವರಿಸಿದರು.

ಒಂದು ರೀತಿಯಲ್ಲಿ ಈ ಎಲ್ಲ ಸೋಲುಗಳು ಉತ್ತಮವಾಗಿದೆ. ಇದರಿಂದಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ವಿಶ್ವಕಪ್‌ನಲ್ಲಿ ಉತ್ತಮ ನಿರ್ವಹಣೆ ನೀಡಲು ಪ್ರೇರಣೆ ಸಿಗಲಿದೆ. ಕಳೆದ ಕೆಲವು ತಿಂಗಳುಗಳ ಕ್ರಿಕೆಟ್ ಬಗ್ಗೆ ಹೆಮ್ಮೆಯಿದೆ. ಈ ಸರಣಿಯಲ್ಲಿ ಆಸೀಸ್ ಗೆಲುವಿಗೆ ಅರ್ಹವಾಗಿದ್ದರು. ಇಂತಹ ಒತ್ತಡದ ಸನ್ನಿವೇಶಗಳನ್ನು ನಮಗಿಂತಲೂ ಉತ್ತಮವಾಗಿ ನಿಭಾಯಿಸಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌