ಆ್ಯಪ್ನಗರ

ಭಾರತ ಸರಣಿಗೂ ಮುನ್ನ ಎಚ್ಚರಿಕೆ ರವಾನಿಸಿದ ವಿಂಡೀಸ್ ನಾಯಕ ಕೀರಾನ್ ಪೊಲಾರ್ಡ್

ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಟ್ವೆಂಟಿ-20 ಸರಣಿಗೆ ಸಜ್ಜಾಗಿವೆ. ಈ ನಡುವೆ ಗೆಲುವಿನ ಹುಮ್ಮಸ್ಸಿನಲ್ಲಿರುವ ವಿರಾಟ್ ಕೊಹ್ಲಿ ಪಡೆಗೆ ವೆಸ್ಟ್‌ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Vijaya Karnataka Web 4 Dec 2019, 10:23 am
ಹೈದರಾಬಾದ್: ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಇದೀಗ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ತಲಾ ಮೂರು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಈ ಮಧ್ಯೆ ವೆಸ್ಟ್‌ಇಂಡೀಸ್ ನಾಯಕ ಕೀರಾನ್ ಪೊಲಾರ್ಡ್ ಬಲಾಢ್ಯ ಭಾರತಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
Vijaya Karnataka Web ಕೀರಾನ್ ಪೊಲಾರ್ಡ್


ಕಠಿಣ ತಂಡದ ವಿರುದ್ಧ ಸ್ಪರ್ಧಿಸಲು ನಾವು ಆಗಮಿಸಿದ್ದೇವೆ. ನಾವು ಅಂಡರ್‌ಡಾಗ್‌ಗಳಾಗಿದ್ದು, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸಿದ್ದೇವೆ. ನಮ್ಮ ಯೋಜನೆಯನ್ನು ಕಾರ್ತಗತಗೊಳಿಸಲು ಸಫಲವಾದರೆ ಏನೂ ಬೇಕಾದರೂ ಸಾಧ್ಯ ಎಂದು ಎಚ್ಚರಿಕೆಯ ಸಂದೇಶ ನೀಡಿದರು.

ಕೆಲವೊಂದು ಅಂಶಗಳನ್ನು ಸರಿಯಾಗಿ ಮಾಡಬೇಕಿದೆ. ಅದು ಸಾಧ್ಯವಾದರೆ ಫಲಿತಾಂಶ ನಿಮ್ಮ ಪರವಾಗಿರುತ್ತದೆ ಎಂದು ಪೊಲಾರ್ಡ್ ಸೇರಿಸಿದರು.

ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ತಂಡವಾಗಿರುವ ವಿಂಡೀಸ್, ಭಾರತಕ್ಕೆ ಸಡ್ಡು ಹೊಡೆಯುವ ಇರಾಯದಲ್ಲಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 6ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ದಾಂಪತ್ಯಕ್ಕೆ ಕಾಲಿರಿಸಿದ ಮನೀಶ್ ಪಾಂಡೆ; ಹೊಸ ಬಾಳ್ವೆಗೆ ಶುಭ ಹಾರೈಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಅಫಘಾನಿಸ್ತಾನ ವಿರುದ್ಧದ ಸರಣಿಯ ಕಿರು ಅವಧಿಯಲ್ಲಿ ಆಟಗಾರರು ಸಜ್ಜಾಗಿದ್ದಾರೆ. ಯಶಸ್ಸು ನಿರಾಸೆ ತರುತ್ತದೆ. ಏಕೆಂದರೆ ಸ್ಥಿರತೆಗಾಗಿ ಮಾಡಿದ ಕೆಲಸವನ್ನು ಪದೇ ಪದೇ ಮಾಡಬೇಕು. ಈ ನಿಟ್ಟಿನಲ್ಲಿ ಹುಡುಗರು ಸಜ್ಜಾಗಿದ್ದಾರೆ ಎಂದು ಪೊಲಾರ್ಡ್ ಹೇಳಿದರು.

ನಾನು ಸುದೀರ್ಘ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ ಮಧ್ಯೆ ಮೂರು-ನಾಲ್ಕು ವರ್ಷಗಳು ದೂರವುಳಿಯಬೇಕಾಯಿತು. ನನ್ನ ಹಾಗೂ ವಿಂಡೀಸ್ ಮಂಡಳಿಯ ಸಂಬಂಧ ಹದೆಗೆಟ್ಟಿರುವುದು ಹೊಸ ವಿಚಾರವೇನಲ್ಲ ಎಂದರು.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಸುಲಭ ಕ್ಯಾಚ್ ಕೈಚೆಲ್ಲಿದ ಜೋ ಡೆನ್ಲಿ

ವೆಸ್ಟ್‌ಇಂಡೀಸ್‌ಗಾಗಿ ಆಡಲು ಕನಸು ಹೊತ್ತುಕೊಂಡಾಗ ನಾಯಕನಾಗುವ ಕನಸು ಹೊಂದಿರುವುದಿಲ್ಲ. ಆದರೆ ಈ ಅವಕಾಶ ಲಭಿಸಿದಾಗ ಅದೊಂದು ಸವಾಲಿನಿಂದ ಕೂಡಿರುತ್ತದೆ. ನಾನು ಸವಾಲುಗಳಿಂದ ದೂರವುಳಿಯಲು ಬಯಸುತ್ತಿಲ್ಲ ಎಂದರು.

ಅದೇ ಹೊತ್ತಿಗೆ ತಮ್ಮ ಅನುಭವ ಸಂಪತ್ತನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳುವುದಾಗಿ ಪೊಲಾರ್ಡ್ ತಿಳಿಸಿದರು. ಅನುಭವಿ ಆಟಗಾರರು ಯುವ ಆಟಗಾರರಿಗೆ ಅನುಭವ ಹಂಚಿಕೊಳ್ಳಬೇಕು. ಅದು ನನ್ನ ಕರ್ತವ್ಯ. ಈ ಮೂಲಕ ಸರಿಯಾದ ದಿಶೆಯತ್ತ ಸಾಗಿಸಬೇಕು ಎಂದರು.

ವಿಕ್ರಂ ಲ್ಯಾಂಡರ್ ಪತನ ಸ್ಥಳ ಪತ್ತೆ ಹಚ್ಚಿದ ನಾಸಾಗೆ ಹೊಸ ಸವಾಲೆಸೆದ ಆರ್‌ಸಿಬಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌