ಆ್ಯಪ್ನಗರ

ಸಮತೋಲನ ಕಳೆದುಕೊಂಡೆವು; ಸೋಲಿನ ಬಳಿಕ ಕೊಹ್ಲಿ

ಹಾರ್ದಿಕ್, ಜಾಧವ್ ಆಗಮನದೊಂದಿಗೆ ಹೆಚ್ಚಿನ ಸಮತೋಲನ: ನಾಯಕ ಕೊಹ್ಲಿ

TOI.in 28 Oct 2018, 4:47 pm
ಪುಣೆ: ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದರೂ ಟೀಮ್ ಇಂಡಿಯಾಕ್ಕೆ ಜಯ ದಕ್ಕಲಿಲ್ಲ. ಪರಿಣಾಮ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ.
Vijaya Karnataka Web virat-kohli-loss


ಈ ನಡುವೆ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿ, ಸಮತೋಲನವನ್ನು ಕಳೆದುಕೊಂಡಿರುವುದೇ ಹಿನ್ನಡೆಗೆ ಕಾರಣವಾಯಿತು ಎಂದರು.

ಅಲ್ಲದೆ ಹಾರ್ದಿಕ್ ಪಾಂಡ್ಯ ಹಾಗೂ ಕೇದರ್ ಜಾಧವ್ ತಂಡವನ್ನು ಸೇರಿಕೊಂಡಾಗ ಮತ್ತೆ ಬ್ಯಾಲನ್ಸ್ ಪಡೆಯಲಿದ್ದೇವೆ ಎಂಬುದನ್ನು ಉಲ್ಲೇಖಿಸಿದರು.

ನಾವು ಉತ್ತಮ ದಾಳಿ ಸಂಘಟಿಸಿದೆವು. ಆದರೂ ಕೊನೆಯ ಹಂತದಲ್ಲಿ ವಿಂಡೀಸ್‌ಗೆ ಹೆಚ್ಚಿನ ರನ್ ಬಿಟ್ಟುಕೊಟ್ಟೆವು. 227/8 ಎಂಬಲ್ಲಿದ್ದ ವಿಂಡೀಸ್ 283/9 ರನ್ ಪೇರಿಸಿತ್ತು. ಬಹುಶಃ ಎದುರಾಳಿಗಳನ್ನು ಬೇಗನೇ ಕಟ್ಟಿ ಹಾಕಬಹುದಿತ್ತು ಎಂದರು.

ನೋಡಿ ಹಾರ್ದಿಕ್ ಹಾಗೂ ಕೇದರ್ ತಂಡವನ್ನು ಸೇರಿಕೊಂಡಾಗ ಹೆಚ್ಚಿನ ಬೌಲಿಂಗ್ ಆಯ್ಕೆಯನ್ನು ಪಡೆಯಲಿದ್ದೇವೆ. ಹಾರ್ದಿಕ್ ಅವರಂತಹ ಆಟಗಾರರು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಆಯ್ಕೆ ನೀಡಲಿದ್ದಾರೆ. ಅಲ್ಲಿಯ ವರೆಗೆ ಸಮತೋಲನದ ಹುಡುಕಾಟದಲ್ಲಿದ್ದೇವೆ ಎಂದರು.

ಕೇದರ್ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದರಿಂದ ಹೆಚ್ಚಿನ ಬ್ಯಾಲನ್ಸ್ ಸಿಗಲಿದೆ ಎಂದು ವಿವರಿಸಿದರು.

ಅದೇ ಹೊತ್ತಿಗೆ ಚೇಸಿಂಗ್ ವೇಳೆ ಜೊತೆಯಾಟದ ಕೊರತೆ ಅನುಭವಿಸಿದೆವು. ಅಲ್ಲದೆ ವಿಂಡೀಸ್ ಪಂದ್ಯ ಗೆಲ್ಲಲು ಅರ್ಹವಾಗಿತ್ತು ಎಂದರು.

ನಮ್ಮ ಯೋಜನೆಯನ್ನು ಸರಿಯಾಗಿ ಕಾರ್ತಗತಗೊಳಿಸಲು ವಿಫಲವಾದೆವು. ಈ ಬಗ್ಗೆ ಹೆಚ್ಚಿನ ಪರಿಶ್ರಮ ವಹಿಸಬೇಕಿದೆ ಎಂದರು.

ವೈಯಕ್ತಿಕ ಮೈಲಿಗಲ್ಲಿನ ಬಗ್ಗೆ ಕೇಳಿದಾಗ ನಾನು ನನ್ನ ಬ್ಯಾಟಿಂಗ್ ಬಗ್ಗೆ ಹೆಚ್ಚೇನು ಮಾತನಾಡಲು ಇಚ್ಚಿಸುವುದಿಲ್ಲ. ಪದೇ ಪದೇ ಅದೇ ಪ್ರಶ್ನೆ ಮಾಡಿದಾಗ ಉತ್ತರಿಸಲು ಮುಜುರಗರವಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌