ಹೊಸದಿಲ್ಲಿ: ಕಳೆದ 1960ರ ಆರಂಭದಲ್ಲಿ ಲ್ಯಾಂಕಷೈರ್ ಪರ ಇಂಗ್ಲೆಂಡ್ ಕೌಂಟಿ ಆಡುತ್ತಿದ್ದ ದಿನಗಳಲ್ಲಿ ತಾವು ಅನುಭವಿಸಿದ್ದ ಜನಾಂಗೀಯ ನಿಂದನೆಯನ್ನು ಇದೀಗ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಬಹಿರಂಗಪಡಿಸಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಅವರು, "ನಾನು ಕೌಂಟಿ ಕ್ರಿಕೆಟ್ ಆಡಲು ಮೊದಲ ಬಾರಿ ಹೋದಾಗ, 'ನಾನು ಭಾರತೀಯ ಆಟಗಾರ?' ಎಂಬ ಪ್ರಶ್ನೆ ಎದ್ದು ಕಾಡುತ್ತಿತ್ತು. ಲ್ಯಾಂಕಷೈರ್ಗೆ ಸೇರ್ಪಡೆಯಾದ ಬಳಿಕ ಒಂದು ಅಥವಾ ಎರಡು ಬಾರಿ ನಾನು ಜನಾಂಗೀಯ ನಿಂದನೆಯನ್ನು ಅನುಭವಿಸಿದ್ದೇನೆ. ಇದು ವೈಯಕ್ತಿಕವಾಗಿರದೆ, ನಾನು ಭಾರತೀಯನಾಗಿರುವುದು ಇದಕ್ಕೆ ಕಾರಣವಾಗಿತ್ತು. ಇದನ್ನು ಅವರು ಉಚ್ಚಾರಣೆಯಿಂದ ಗೇಲಿ ಮಾಡುತ್ತಿದ್ದರು," ಎಂದು ಹೇಳಿದರು.
"ಇಂಗ್ಲೆಂಡ್ ಆಟಗಾರರು ಮಾತನಾಡುತ್ತಿದ್ದ ಇಂಗ್ಲೀಷ್ ಭಾಷೆಗಿಂತ ನನ್ನ ಇಂಗ್ಲೀಷ್ ತುಂಬಾ ಚೆನ್ನಾಗಿತ್ತು ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ಗೊಂದಲಕ್ಕೀಡಾಗುವುದಿಲ್ಲ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡಿದ್ದರು. ಅವರು ಸಂದೇಶ ಕಳುಹಿಸಿದರೆ, ನಾನೂ ಕೂಡ ಮೇಸೆಜ್ ಮಾಡಿ ಕೌಂಟರ್ ನೀಡುತ್ತಿದ್ದೆ. ಅಷ್ಟೇ ಅಲ್ಲ, ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ನಲ್ಲಿಯೂ ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೆ. ನಾನು ಭಾರತದ ರಾಯಭಾರಿಯಾಗಿ ದೇಶದ ನಕ್ಷೆಯಲ್ಲಿ ಇರಿಸಿದ್ದೇನೆಂದು ನನಗೆ ಹೆಮ್ಮೆ ಇದೆ," ಎಂದು ತಿಳಿಸಿದರು.
ಟೀಮ್ ಇಂಡಿಯಾ ಎದುರು ನ್ಯೂಜಿಲೆಂಡ್ ಗೆಲ್ಲುವ ಫೇವರಿಟ್: ಅಜಿತ್ ಅರ್ಗಕರ್!
ಇತ್ತೀಚೆಗೆ ಕಾಮಿಡಿಯನ್ ಸೈರಸ್ ಬ್ರೂಚಾ ಅವರೊಂದಿಗೆ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಫಾರೂಖ್ ಎಂಜಿನಿಯರ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರರು ಹೇಗೆ ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂಬುದನ್ನು ರಿವೀಲ್ ಮಾಡಿದರು.
ಇಂಗ್ಲೆಂಡ್ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ 'ಬ್ಲಡಿ ಇಂಡಿಯನ್ಸ್' (ರಕ್ತಸಿಕ್ತ ಭಾರತೀಯರು) ಎಂಬ ಪದಗಳನ್ನು ಹೇಗೆ ಬಳಸಿದ್ದಾರೆ ಎಂಬುದರ ಕುರಿತು ಎಂಜಿನಿಯರ್ ಮಾತನಾಡಿದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ಆಂಗ್ಲರ ಮನೋಭಾವದಲ್ಲಿ ಹೇಗೆ ಬದಲಾವಣೆಯನ್ನು ಉಂಟುಮಾಡಿತು ಎಂಬುದರ ಕುರಿತು ಅವರು ಬೆಳಕು ಚೆಲ್ಲಿದರು.
ಗಿಲ್ ಔಟ್, ಮಯಾಂಕ್ ಇನ್.! ಡಬ್ಲ್ಯುಟಿಸಿ ಫೈನಲ್ಗೆ ಅಗರ್ಕರ್ ನೆಚ್ಚಿನ ಭಾರತ ಪ್ಲೇಯಿಂಗ್ XI ಇಂತಿದೆ..
"ಕಳೆದ ಹಲವು ವರ್ಷಗಳ ಹಿಂದೆ ನಾವೆಲ್ಲಾ ಅವರಿಗೆ 'ಬ್ಲಡಿ ಇಂಡಿಯನ್ಸ್'. ಭಾರತದಲ್ಲಿ ಐಪಿಎಲ್ ಪ್ರಾರಂಭವಾದ ನಂತರ, ಅವರೆಲ್ಲರೂ(ಆಂಗ್ಲರು) ನಮ್ಮ ಹಿಂಬದಿಗಳನ್ನು ನೆಕ್ಕುತ್ತಿದ್ದಾರೆ. ಹಣದ ಕಾರಣದಿಂದಾಗಿ, ಅವರು ಈಗ ನಮ್ಮ ಬೂಟುಗಳನ್ನು ನೆಕ್ಕುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಆದರೆ ನನ್ನಂತಹವರಿಗೆ ಆರಂಭದಲ್ಲಿ ಅವರ ನಿಜವಾದ ಬಣ್ಣಗಳು ಏನೆಂದು ತಿಳಿದಿದೆ," ಎಂದು ಹರಿಹಾಯ್ದರು.
"ಈಗ ಇಂಗ್ಲೆಂಡ್ ಕ್ರಿಕೆಟಿಗರು ಇದ್ದಕ್ಕಿದ್ದಂತೆ ತಮ್ಮ ರಾಗಗಳನ್ನು ಬದಲಾಯಿಸಿದ್ದಾರೆ. ಕ್ರಿಕೆಟ್ ಆಡದೆ, ಹಣ ಗಳಿಕೆ ಸಾಧ್ಯವಾಗದೇ ಇದ್ದಾಗ ಕೆಲವು ತಿಂಗಳುಗಳ ಕಾಲ ಹೋಗಿ ಟೆಲಿವಿಷನ್ ಕೆಲಸಗಳನ್ನು ಮಾಡಲು ಭಾರತ ಉತ್ತಮ ದೇಶವಾಗಿದೆ ಎಂದು ಅವರು ಅರ್ಥ ಮಾಡಿಕೊಂಡಿದ್ದಾರೆ," ಎಂದು ಫಾರೂಖ್ ಎಂಜಿನಿಯರ್ ಆರೋಪಿಸಿದ್ದಾರೆ.
'ಕೊಹ್ಲಿ ರನ್ಗಳಿಸಲು ಕಷ್ಟ ಪಡಲಿದ್ದಾರೆ', ಭವಿಷ್ಯ ನುಡಿದ ಕಿವೀಸ್ ಕೋಚ್!
"ಇಂಗ್ಲೆಂಡ್ ಆಟಗಾರರು ಮಾತನಾಡುತ್ತಿದ್ದ ಇಂಗ್ಲೀಷ್ ಭಾಷೆಗಿಂತ ನನ್ನ ಇಂಗ್ಲೀಷ್ ತುಂಬಾ ಚೆನ್ನಾಗಿತ್ತು ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ಗೊಂದಲಕ್ಕೀಡಾಗುವುದಿಲ್ಲ ಎಂದು ಅವರು ಶೀಘ್ರದಲ್ಲೇ ಅರಿತುಕೊಂಡಿದ್ದರು. ಅವರು ಸಂದೇಶ ಕಳುಹಿಸಿದರೆ, ನಾನೂ ಕೂಡ ಮೇಸೆಜ್ ಮಾಡಿ ಕೌಂಟರ್ ನೀಡುತ್ತಿದ್ದೆ. ಅಷ್ಟೇ ಅಲ್ಲ, ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ನಲ್ಲಿಯೂ ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೆ. ನಾನು ಭಾರತದ ರಾಯಭಾರಿಯಾಗಿ ದೇಶದ ನಕ್ಷೆಯಲ್ಲಿ ಇರಿಸಿದ್ದೇನೆಂದು ನನಗೆ ಹೆಮ್ಮೆ ಇದೆ," ಎಂದು ತಿಳಿಸಿದರು.
ಟೀಮ್ ಇಂಡಿಯಾ ಎದುರು ನ್ಯೂಜಿಲೆಂಡ್ ಗೆಲ್ಲುವ ಫೇವರಿಟ್: ಅಜಿತ್ ಅರ್ಗಕರ್!
ಇತ್ತೀಚೆಗೆ ಕಾಮಿಡಿಯನ್ ಸೈರಸ್ ಬ್ರೂಚಾ ಅವರೊಂದಿಗೆ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಫಾರೂಖ್ ಎಂಜಿನಿಯರ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರರು ಹೇಗೆ ಜನಾಂಗೀಯ ನಿಂದನೆಗೆ ಒಳಗಾಗಿದ್ದರು ಎಂಬುದನ್ನು ರಿವೀಲ್ ಮಾಡಿದರು.
ಇಂಗ್ಲೆಂಡ್ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ 'ಬ್ಲಡಿ ಇಂಡಿಯನ್ಸ್' (ರಕ್ತಸಿಕ್ತ ಭಾರತೀಯರು) ಎಂಬ ಪದಗಳನ್ನು ಹೇಗೆ ಬಳಸಿದ್ದಾರೆ ಎಂಬುದರ ಕುರಿತು ಎಂಜಿನಿಯರ್ ಮಾತನಾಡಿದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿ ಆಂಗ್ಲರ ಮನೋಭಾವದಲ್ಲಿ ಹೇಗೆ ಬದಲಾವಣೆಯನ್ನು ಉಂಟುಮಾಡಿತು ಎಂಬುದರ ಕುರಿತು ಅವರು ಬೆಳಕು ಚೆಲ್ಲಿದರು.
ಗಿಲ್ ಔಟ್, ಮಯಾಂಕ್ ಇನ್.! ಡಬ್ಲ್ಯುಟಿಸಿ ಫೈನಲ್ಗೆ ಅಗರ್ಕರ್ ನೆಚ್ಚಿನ ಭಾರತ ಪ್ಲೇಯಿಂಗ್ XI ಇಂತಿದೆ..
"ಕಳೆದ ಹಲವು ವರ್ಷಗಳ ಹಿಂದೆ ನಾವೆಲ್ಲಾ ಅವರಿಗೆ 'ಬ್ಲಡಿ ಇಂಡಿಯನ್ಸ್'. ಭಾರತದಲ್ಲಿ ಐಪಿಎಲ್ ಪ್ರಾರಂಭವಾದ ನಂತರ, ಅವರೆಲ್ಲರೂ(ಆಂಗ್ಲರು) ನಮ್ಮ ಹಿಂಬದಿಗಳನ್ನು ನೆಕ್ಕುತ್ತಿದ್ದಾರೆ. ಹಣದ ಕಾರಣದಿಂದಾಗಿ, ಅವರು ಈಗ ನಮ್ಮ ಬೂಟುಗಳನ್ನು ನೆಕ್ಕುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಆದರೆ ನನ್ನಂತಹವರಿಗೆ ಆರಂಭದಲ್ಲಿ ಅವರ ನಿಜವಾದ ಬಣ್ಣಗಳು ಏನೆಂದು ತಿಳಿದಿದೆ," ಎಂದು ಹರಿಹಾಯ್ದರು.
"ಈಗ ಇಂಗ್ಲೆಂಡ್ ಕ್ರಿಕೆಟಿಗರು ಇದ್ದಕ್ಕಿದ್ದಂತೆ ತಮ್ಮ ರಾಗಗಳನ್ನು ಬದಲಾಯಿಸಿದ್ದಾರೆ. ಕ್ರಿಕೆಟ್ ಆಡದೆ, ಹಣ ಗಳಿಕೆ ಸಾಧ್ಯವಾಗದೇ ಇದ್ದಾಗ ಕೆಲವು ತಿಂಗಳುಗಳ ಕಾಲ ಹೋಗಿ ಟೆಲಿವಿಷನ್ ಕೆಲಸಗಳನ್ನು ಮಾಡಲು ಭಾರತ ಉತ್ತಮ ದೇಶವಾಗಿದೆ ಎಂದು ಅವರು ಅರ್ಥ ಮಾಡಿಕೊಂಡಿದ್ದಾರೆ," ಎಂದು ಫಾರೂಖ್ ಎಂಜಿನಿಯರ್ ಆರೋಪಿಸಿದ್ದಾರೆ.
'ಕೊಹ್ಲಿ ರನ್ಗಳಿಸಲು ಕಷ್ಟ ಪಡಲಿದ್ದಾರೆ', ಭವಿಷ್ಯ ನುಡಿದ ಕಿವೀಸ್ ಕೋಚ್!