ಆ್ಯಪ್ನಗರ

ಭಾರತ ವಿರುದ್ಧ ಸರಣಿಗೆ 'ನೊ' ಎಂದ ಕಿಂಗ್ ಗೇಲ್; ಕಾರಣವೇನು?

ಭಾರತ ವಿರುದ್ಧ ನಡೆಯಲಿರುವ ಸರಣಿಯಿಂದ ಹೊರಗುಳಿಯಲು ವೆಸ್ಟ್‌ಇಂಡೀಸ್‌ನ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ನಿರ್ಧರಿಸಿದ್ದಾರೆ. ಇದು ಗೇಲ್ ಅಬ್ಬರವನ್ನು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

Vijaya Karnataka Web 27 Nov 2019, 10:54 am
ಜೋಹಾನ್ಸ್‌ಬರ್ಗ್: ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದೈತ್ಯ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ. ಹಾಗಿರಬೇಕೆಂದರೆ ಭಾರತ ವಿರುದ್ಧ ಸರಣಿಯಲ್ಲಿ ಗೇಲ್ ಸಿಡಿಲಬ್ಬರದ ಆಟವನ್ನು ನೋಡ ಬಯಸಿದ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಬಂದಿದೆ.
Vijaya Karnataka Web ಕ್ರಿಸ್ ಗೇಲ್


ಮುಂಬರುವ ಭಾರತ ವಿರುದ್ಧದ ಸರಣಿಯಿಂದ ಹೊರಗುಳಿಯಲು ಕಿಂಗ್ ಗೇಲ್ ನಿರ್ಧರಿಸಿದ್ದಾರೆ. ಇದರ ಹೊರತಾಗಿ ಹೊಸ ವರ್ಷದಿಂದ ಆರಂಭವಾಗಲಿರುವ ಸರಣಿಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲು ಬಯಸುವುದಾಗಿ ತಿಳಿಸಿದ್ದಾರೆ.

ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕೈಗೊಳ್ಳುತ್ತಿರುವ ವೆಸ್ಟ್‌ಇಂಡೀಸ್ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸುತ್ತಿದೆ. ಮೊದಲ ಟಿ20 ಪಂದ್ಯವು ಡಿಸೆಂಬರ್ 6ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಕ್ರಿಸ್ ಗೇಲ್‌ಗೆ ಗೌರವ ಸಿಗುತ್ತಿಲ್ಲವೇ? ವಿಂಡೀಸ್ ದೈತ್ಯ ಆಟಗಾರ ಕೊರಗಿದ್ದೇಕೆ?

ಈ ನಡುವೆ ಟ್ವೆಂಟಿ-20 ಸರಣಿಯಿಂದಲೂ ಗೇಲ್ ಹೊರಗುಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಗೇಲ್, ಏಕದಿನ ಸರಣಿ ಆಡುವಂತೆ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಕೋರಿದೆ. ಆದರೆ ನಾನು ವಿಶ್ರಾಂತಿಯನ್ನು ಬಯಸಿದ್ದೇನೆ ಎಂದಿದ್ದಾರೆ.

ಆಯ್ಕೆ ಸಮಿತಿಯು ಯುವ ಆಟಗಾರರೊಂದಿಗೆ ಆಡಲು ಬಯಸಿದೆ. ಆದರೆ ವರ್ಷಾಂತ್ಯದಲ್ಲಿ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದು 40ರ ಹರೆಯದ ಗೇಲ್ ತಿಳಿಸಿದರು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬಾಷ್ ಲೀಗ್‌ನಿಂದಲೂ ಹೊರಗುಳಿಯಲು ಗೇಲ್ ನಿರ್ಧರಿಸಿದ್ದಾರೆ. ನಾನು ಬಿಗ್ ಬಾಷ್ ಲೀಗ್‌ನಲ್ಲೂ ಆಡುತ್ತಿಲ್ಲ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲೂ ನನ್ನ ಹೆಸರು ಹೇಗೆ ಡ್ರಾಫ್ಟ್ ಆಯಿತು ಎಂಬುದು ತಿಳಿದಿಲ್ಲ ಎಂದರು.

ಕ್ರಿಕೆಟ್‌ನ ಕರಾಳ ದಿನ; ಫಿಲಿಪ್ ಹ್ಯೂಸ್ ಸ್ಮರಿಸಿದ ಕ್ರಿಕೆಟ್ ಜಗತ್ತು

ಈ ಮೊದಲು ಜಾನ್ಸಿ ಸೂಪರ್ ಲೀಗ್ ಟೂರ್ನಿಯಲ್ಲಿ ಜೊಝಿ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸಿದ ಕ್ರಿಸ್ ಗೇಲ್ ಸತತ ವೈಫಲ್ಯವನ್ನು ಅನುಭವಿಸಿದ್ದರು. ಪರಿಣಾಮ ಜೊಝಿ ತಂಡವು ತಾವಾಡಿದ ಎಲ್ಲ ಆರು ಪಂದ್ಯಗಳಲ್ಲೂ ಸೋಲನ್ನು ಅನುಭವಿಸಿತ್ತು. ಇದರಿಂದ ಫ್ರಾಂಚೈಸಿಗಳು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಗೇಲ್ ಬೇಸರ ತೋಡಿಕೊಂಡಿದ್ದಾರೆ.

"ಫಾರ್ಮ್ ಕೆಟ್ಟರೆ ತಮಗೆ ಯಾವುದೇ ರೀತಿಯ ಗೌರವ ಸಿಗುವುದಿಲ್ಲ. ತಂಡದ ಪಾಲಿಗೆ ಅತ್ಯಂತ ಕೆಟ್ಟ ಆಟಗಾರನಾಗಿ ಪರಿಣಮಿಸುತ್ತೇನೆ" ಎಂದು ಗೇಲ್ ಕೊರಗಿದ್ದರು.

ಶಿಖರ್ ಧವನ್ ಗಾಯಾಳು; ಸಂಜು ಸ್ಯಾಮ್ಸನ್‌ಗೆ ಬುಲಾವ್ ಸಾಧ್ಯತೆ

"ಈ ಫ್ರಾಂಚೈಸಿ ಬಗ್ಗೆ ಮಾತನಾಡುತ್ತಿಲ್ಲ. ಸಾಮಾನ್ಯವಾಗಿ ಹೇಳುತ್ತಿದ್ದೇನೆ. ಆಟಗಾರರಿಂದಲೂ ಗೌರವ ಸಿಗುತ್ತಿಲ್ಲ. ಆಟಗಾರರು, ಮ್ಯಾನೇಜ್‌ಮೆಂಟ್, ಮಂಡಳಿ ಸದಸ್ಯರೇ ಆಗಿರಲಿ ಯಾರಿಂದಲೂ ಗೌರವ ಸಿಗುವುದಿಲ್ಲ. ಒಮ್ಮೆ ಗೇಲ್ ಫಾರ್ಮ್ ಕೆಟ್ಟರೆ ಅಲ್ಲಿಗೆ ಕೆರಿಯರ್ ಮುಗಿಯಿತು. ಎಲ್ಲರ ಪಾಲಿಗೆ ಅತ್ಯಂತ ಕೆಟ್ಟ ಆಟಗಾರನಾಗಿ ಬಿಡುತ್ತಾರೆ. ಆದರೆ ಈ ಎಲ್ಲ ವಿಚಾರಗಳಿಂದ ಹೊರಬಂದಿದ್ದೇನೆ. ಇಂತಹ ವಿಚಾರಗಳನ್ನು ನಾನು ನಿರೀಕ್ಷೆ ಮಾಡುತ್ತೇನೆ. ಈ ಸಂಗತಿಗಳೊಂದಿಗೆ ಬದುಕಿದ್ದೇನೆ" ಎಂದು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌