ಆ್ಯಪ್ನಗರ

ಸ್ಮಿತ್ ಮಾಡಿರುವುದು ದೊಡ್ಡ ಮೂರ್ಖತನ: ದಾದಾ

ಬಾಲ್ ಟ್ಯಾಂಪರಿಂಗ್ ಪ್ರಕರಣದ ವಿವಾದ ಸಂಬಂಧ ಹೇಳಿಕೆ ಕೊಟ್ಟಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ, ಆಸ್ಟ್ರೇಲಿಯಾ ಕಪ್ತಾನ ಸ್ಟೀವ್ ಸ್ಮಿತ್ ಮಾಡಿರುವುದು ಮೂರ್ಖತನ ಎಂದು ಹೇಳಿದ್ದಾರೆ.

TIMESOFINDIA.COM 27 Mar 2018, 3:03 pm
ಹೊಸದಿಲ್ಲಿ: ಬಾಲ್ ಟ್ಯಾಂಪರಿಂಗ್ ಪ್ರಕರಣದ ವಿವಾದ ಸಂಬಂಧ ಹೇಳಿಕೆ ಕೊಟ್ಟಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ, ಆಸ್ಟ್ರೇಲಿಯಾ ಕಪ್ತಾನ ಸ್ಟೀವ್ ಸ್ಮಿತ್ ಮಾಡಿರುವುದು ಮೂರ್ಖತನ ಎಂದು ಹೇಳಿದ್ದಾರೆ.
Vijaya Karnataka Web steven-smith-01


ದಕ್ಷಿಣ ಆಫ್ರಿಕಾ ವಿರುದ್ದ ಕೇಪ್ ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು.

ಬಳಿಕ ತಪ್ಪೊಪ್ಪಿಕೊಂಡಿರುವ ನಾಯಕ ಸ್ಮಿತ್, ಆಸೀಸ್ ನಾಯಕತ್ವ ಗುಂಪಿನ ಅರಿವಿನೊಂದಿಗೆ ಬಾಲ್ ಟ್ಯಾಂಪರಿಂಗ್ ಮಾಡಲಾಗಿತ್ತು ಎಂದಿದ್ದರು.

ಏನೇ ಮಾಡಿಯಾದರೂ ಪಂದ್ಯ ಗೆಲ್ಲಬೇಕೆಂಬ ಸ್ಮಿತ್ ಹಾಗೂ ಆಸೀಸ್ ತಂಡದ ನಿಲುವನ್ನು ಛೇಡಿಸಿರುವ ಗಂಗೂಲಿ, ಯಾರೇ ತಪ್ಪು ಮಾಡಿದರೂ ಇಂದೊಂದು ಶುದ್ಧ ಅವಿವೇಕ ಎಂದು ನುಡಿದರು.

ಹಳದಿ ಬಣ್ಣದ ಮರಳು ಕಾಗದದ ವಸ್ತುವನ್ನು ಬಳಕೆ ಮಾಡಿ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಲಾಗಿತ್ತು. ಬಳಿಕ ಶಸ್ತಿನ ಕ್ರಮ ಕೈಗೊಂಡಿರುವ ಐಸಿಸಿ, ಸ್ಮಿತ್ ಮೇಲೆ ಒಂದು ಪಂದ್ಯದ ನಿಷೇಧ ಹಾಗೂ ಬೆನ್‌ಕ್ರಾಫ್ಟ್ ಮೇಲೆ ಪಂದ್ಯ ಶುಲ್ಕದ ಶೇಕಡಾ 75ರಷ್ಟು ದಂಡ ವಿಧಿಸಲಾಗಿತ್ತು.

ಕಳೆದ ಬೆಂಗಳೂರು ಟೆಸ್ಟ್‌ನಲ್ಲಿ ಉಂಟಾದ ಡಿಆರ್‌ಎಸ್ ವಿವಾದದ ಸಂದರ್ಭದಲ್ಲಿ ತಮ್ಮಿಂದಾದ ಮರೆವು ಎಂದು ಸ್ಮಿತ್ ಹೇಳಿದ್ದರು. ಆದರೆ ನನಗನಿಸುತ್ತದೆ ಅವರಿಗೆ ನಿಜವಾದ ಬ್ರೈನ್ ಫೇಡ್ ಈಗ ಸಂಭವಿಸಿದೆ ಎಂದು ಗಂಗೂಲಿ ಹೇಳಿದರು.

ಏನೇ ಮಾಡಿಯಾದರೂ ಪಂದ್ಯ ಗೆಲ್ಲಬೇಕೆಂಬ ಈ ನಿಲುವು ಸರಿಯಲ್ಲ. ಆಸೀಸ್ ಕೂಡಾ ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕಿದೆ ಎಂದರು.

ಆಸೀಸ್ ವಿರುದ್ದ ವಾಗ್ದಾಳಿ ನಡೆಸಿರುವ ಹರ್ಭಜನ್ ಸಿಂಗ್ ಕೂಡಾ, ಮತ್ತಷ್ಟು ಕಠಿಣ ಶಿಕ್ಷೆಯನ್ನು ವಿಧಿಸಬೇಕಿದೆ ಎಂದಿದ್ದಾರೆ.

2008ರಲ್ಲಿ ಆಂಡ್ರ್ಯೂ ಸೈಮಂಡ್ಸ್ ಜತೆಗಿನ ಮಂಕಿ-ಗೇಟ್ ವಿವಾದವನ್ನು ಸ್ಮರಿಸಿದ ಭಜ್ಜಿ, ಸರಿಯಾದ ತನಿಖೆಯಿಲ್ಲದೆ ನನ್ನ ಮೇಲೆ ಮೂರು ಪಂದ್ಯಗಳ ನಿಷೇಧವನ್ನು ಹೇರಲಾಗಿತ್ತು. ಆದರೆ ಆರೋಪ ಸಾಬೀತಾದರೂ ಸ್ಮಿತ್ ಹಾಗೂ ಬೆನ್‌ಕ್ರಾಫ್ಟ್ ಅವರ ಮೇಲೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌