ಆ್ಯಪ್ನಗರ

ಪರ್ತ್ ಶತಕ ಅಪ್ರಸ್ತುತ: ಸೋಲಿನ ಬಳಿಕ ಕೊಹ್ಲಿ

ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ (123) ಹೊರತಾಗಿಯೂ ಟೀಮ್ ಇಂಡಿಯಾ 146 ರನ್ ಅಂತರದ ಹೀನಾಯ ಸೋಲಿಗೊಳಗಾಗಿದೆ. ಈ ಮುನ್ನ ಆಡಿಲೇಡ್ ಪಂದ್ಯದಲ್ಲಿ ಭಾರತದ 31 ರನ್ ಅಂತರದ ಗೆಲುವು ದಾಖಲಿಸಿತ್ತು.

Vijaya Karnataka Web 18 Dec 2018, 12:07 pm
ಪರ್ತ್: ತಂಡವು ಗೆಲುವು ದಾಖಲಿಸದಿದ್ದರೆ ವೈಯಕ್ತಿಕ ಮೈಲಿಗಲ್ಲಿನ ಶತಕವು ಅಪ್ರಸ್ತುತವೆನಿಸುತ್ತದೆ ಎಂದು ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web kohli-03


ಆಸ್ಟ್ರೇಲಿಯಾ ವಿರುದ್ಧ ನಡೆದ ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 146 ರನ್ ಅಂತರದ ಹೀನಾಯ ಸೋಲಿಗೊಳಗಾಗಿತ್ತು. ಈ ಮೂಲಕ 1-1ರ ಅಂತರದ ಸಮಬಲ ದಾಖಲಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ ಟೆಸ್ಟ್ ಜೀವನದ 25ನೇ ಹಾಗೂ ಆಸೀಸ್ ನೆಲದಲ್ಲಿ 6ನೇ ಶತಕ ಸಾಧನೆ ಮಾಡಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು.

ಇದೀಗ ಪಂದ್ಯದ ಬಳಿಕ ಉತ್ತರಿಸಿರುವ ವಿರಾಟ್, "ಪಂದ್ಯವನ್ನು ಗೆಲ್ಲದ ಹೊರತು ಮಿಕ್ಕಿದ್ದೆಲ್ಲ ಅಪ್ರಸಕ್ತವಾಗಿದೆ" ಎಂದು ತಿಳಿಸಿದರು.

"ನಾನೀಗ ಮುಂದಿನ ಪಂದ್ಯದತ್ತ ಗಮನ ಕೇಂದ್ರಿಕರಿಸಿದ್ದೇನೆ. ಗೆಲುವಿಗಾಗಿ ಮತ್ತಷ್ಟು ಕೊಡುಗೆ ಸಲ್ಲಿಸುವ ನಂಬಿಕೆಯಿದೆ" ಎಂದರು.

ಪರ್ತ್ ಟೆಸ್ಟ್ ಪಂದ್ಯದಲ್ಲಿ ಯಾವುದೇ ಸ್ಪಿನ್ನರ್ ಕಣಕ್ಕಿಳಿಸದಿರುವುದು ಟೀಮ್ ಇಂಡಿಯಾಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಈ ಬಗ್ಗೆ ಕೇಳಿದಾಗ "ಪಂದ್ಯ ಆರಂಭಕ್ಕೂ ಮುನ್ನ ಪಿಚ್ ಪರೀಶೀಲಿಸಿದಾಗ ಸ್ಪಿನ್ನರ್ ಆಡಿಸುವ ಇರಾದೆಯೇ ನಮ್ಮ ಯೋಚನೆಯಲ್ಲಿರಲಿಲ್ಲ. ನಾವು ನಾಲ್ಕು ಪ್ರಮುಖ ವೇಗಿಗಳೊಂದಿಗೆ ಮುಂದುವರಿದೆವು. ಆದರೆ ಎದುರಾಳಿ ಸ್ಪಿನ್ನರ್ ನಥನ್ ಲಯನ್ ನಿಜಕ್ಕೂ ಅದ್ಭುತ ದಾಳಿ ಸಂಘಟಿಸಿದರು" ಎಂದು ಸೇರಿಸಿದರು.

"ಆಸೀಸ್ ತಂಡವು ನಮಗಿಂತಲೂ ಉತ್ತಮವಾಗ ಕ್ರಿಕೆಟ್ ಆಡಿದೆ. ಹಾಗಾಗಿ ಗೆಲುವಿನ ಶ್ರೇಯಕ್ಕೆ ಅರ್ಹರು. ಪಂದ್ಯ ಗೆಲ್ಲುವ ನಂಬಿಕೆ ನಮ್ಮಲ್ಲಿತ್ತು. ಆದರೆ ಆಸೀಸ್ ಬೌಲರ್‌ಗಳು ನಿರ್ದಯವಾಗಿ ದಾಳಿ ಮಾಡಿದರು" ಎಂದರು.

"ನಮ್ಮ ಬೌಲರ್‌ಗಳು ಸಾಂಘಿಕ ದಾಳಿ ಸಂಘಟಿಸಿದ್ದಾರೆ. ವಿಕೆಟ್ ಪಡೆಯಲು ವಿಫಲವಾದರೂ ನಿರಂತರ ಒತ್ತಡವನ್ನು ಸೃಷ್ಟಿ ಮಾಡುತ್ತಲೇ ಇದ್ದರು. ಇದು ಉತ್ತಮ ಸನ್ನೆಯಾಗಿದೆ" ಎಂದು ನುಡಿದರು.

ಇನ್ನು ವಿವಾದಾತ್ಮಕ ತೀರ್ಪಿನ ಬಗ್ಗೆ ಕೇಳಿದಾಗ, "ಅದು ಆನ್ ಫೀಲ್ಡ್ ನಿರ್ಣಯವಾಗಿದ್ದು, ಹಾಗಾಗಿ ತೀರ್ಪು ಉಳಿದುಕೊಳ್ಳುತ್ತದೆ" ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌