ಆ್ಯಪ್ನಗರ

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಶ್ವಿನ್ ಹೊಸ ಟ್ರಿಕ್ಸ್ ಪ್ರಯೋಗ

ಬೌಲಿಂಗ್‌ನಲ್ಲಿ ಸದಾ ಹೊಸತನವನ್ನು ಪ್ರಯೋಗ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಎಂದೂ ಕಾಡುವ ರವಿಚಂದ್ರನ್ ಅಶ್ವಿನ್, ಮುಂಬರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೊಸ ಟ್ರಿಕ್ಸ್ ಪ್ರಯೋಗಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 24 May 2017, 5:26 pm
ಮುಂಬೈ: ಬೌಲಿಂಗ್‌ನಲ್ಲಿ ಸದಾ ಹೊಸತನವನ್ನು ಪ್ರಯೋಗ ಮಾಡುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಎಂದೂ ಕಾಡುವ ರವಿಚಂದ್ರನ್ ಅಶ್ವಿನ್, ಮುಂಬರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೊಸ ಟ್ರಿಕ್ಸ್ ಪ್ರಯೋಗಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
Vijaya Karnataka Web will throw up something new in champions trophy ravichandran ashwin
ಚಾಂಪಿಯನ್ಸ್ ಟ್ರೋಫಿಯಲ್ಲಿ ಅಶ್ವಿನ್ ಹೊಸ ಟ್ರಿಕ್ಸ್ ಪ್ರಯೋಗ


ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸಾಗಿದ ಟೆಸ್ಟ್ ಸರಣಿಯಲ್ಲಿ ನೀಡಿರುವ ಅಮೋಘ ಪ್ರದರ್ಶನದ ಬಳಿಕ ಗಾಯದ ತೊಂದರೆಗೆ ತುತ್ತಾಗಿದ್ದ ಆಫ್ ಸ್ಪಿನ್ನರ್ ಅಶ್ವಿನ್, ಇಂಡಿಯನ್ ಪ್ರೀಮಿಯರ್ ಲೀಗ್‌ 10ನೇ ಆವೃತ್ತಿ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು.

ಈಗ ಎರಡು ತಿಂಗಳುಗಳಷ್ಟು ಕಾಲ ವಿಶ್ರಾಂತಿ ಪಡೆದಿರುವ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಉತ್ಸಾಹದಲ್ಲಿದ್ದಾರೆ. ಹಾಗೆಯೇ ಇಂಗ್ಲೆಂಡ್‌ನಲ್ಲಿ ಜರಗಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ನಾನು ಹೊಸತನವನ್ನು ಪ್ರಯೋಗ ಮಾಡಲಿದ್ದೇನೆ. ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಟೂರ್ನಿಗೆ ಹೇಗೆ ಸಜ್ಜಾಗಲಿದ್ದೇನೆ ಎಂಬುದಕ್ಕೆ ಸೂಚನೆ ಸಿಗಲಿದೆ ಎಂದರು.

ಬೌಲಿಂಗ್ ಪರಿವರ್ತನೆಗಳು ಹೇಗೆ ಫಲಪ್ರದವಾಗಲಿದೆ ಎಂಬುದಕ್ಕೆ ಅಭ್ಯಾಸ ಪಂದ್ಯಗಳಲ್ಲಿ ಉತ್ತರ ದೊರಕಲಿದೆ. ನನ್ನ ತಂಡಕ್ಕಾಗಿ ಹೊಸತನವನ್ನು ನೀಡಲು ಸಾಧ್ಯವಾದರೆ ಉತ್ತಮ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌