ಆ್ಯಪ್ನಗರ

ಟ್ವೆಂಟಿ-20 ಇಲ್ಲದೆ ಕ್ರಿಕೆಟ್‌ಗೆ ಉಳಿಗಾಲವಿಲ್ಲ: ಗಂಗೂಲಿ

ಮನರಂಜನೆಯ ಭಾಗವಾಗಿರುವ ಟ್ವೆಂಟಿ-20 ಕ್ರಿಕೆಟ್‌ನ ಆಗಮನದ ಬಳಿಕ ಸಾಕಷ್ಟು ಜನಪ್ರಿಯವಾಗಿದೆ. ಇದನ್ನೇ ಬೊಟ್ಟು ಮಾಡಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಟ್ವೆಂಟಿ-20 ಇಲ್ಲದಿದ್ದರೆ ಕ್ರಿಕೆಟ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದಿದ್ದಾರೆ.

TIMESOFINDIA.COM 23 Feb 2018, 7:00 pm
ಬೆಂಗಳೂರು: ಕ್ರಿಕೆಟ್ ಇತಿಹಾಸದತ್ತ ಕಣ್ಣಾಯಿಸಿದಾಗ ಹಲವಾರು ಬದಲಾವಣೆಗಳು ಕಂಡುಬಂದಿದೆ. ಟೆಸ್ಟ್ ಕ್ರಿಕೆಟ್‌ನಿಂದ ಹಿಡಿದು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ವರೆಗೂ ಬಂದು ತಲುಪಿದೆ.
Vijaya Karnataka Web without twenty20 cricket cannot survive sourav ganguly
ಟ್ವೆಂಟಿ-20 ಇಲ್ಲದೆ ಕ್ರಿಕೆಟ್‌ಗೆ ಉಳಿಗಾಲವಿಲ್ಲ: ಗಂಗೂಲಿ


ಮನರಂಜನೆಯ ಭಾಗವಾಗಿರುವ ಟ್ವೆಂಟಿ-20 ಕ್ರಿಕೆಟ್‌ನ ಆಗಮನದ ಬಳಿಕ ಸಾಕಷ್ಟು ಜನಪ್ರಿಯವಾಗಿದೆ. ಇದನ್ನೇ ಬೊಟ್ಟು ಮಾಡಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಟ್ವೆಂಟಿ-20 ಇಲ್ಲದಿದ್ದರೆ ಕ್ರಿಕೆಟ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದಿದ್ದಾರೆ.

ಕ್ರಿಕೆಟ್‌ ಉಳಿಗಾಲಕ್ಕೆ ಟ್ವೆಂಟಿ-20 ಅತಿ ಮುಖ್ಯ ಎಂಬುದನ್ನು ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ.

ಅದೇ ಹೊತ್ತಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸುವ ಬಗ್ಗೆ ಗಂಗೂಲಿ ನಂಬಿಕೆ ವ್ಯಕ್ತಪಡಿಸಿದರು.

ಭಾರತೀಯ ಯುವ ಆಟಗಾರರಿಗೆ ಅವಕಾಶ ಸಿಗುತ್ತಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿರುವ ದಾದಾ, ಹಾರ್ದಿಕ್ ಪಾಂಡ್ಯ, ಮನೀಷ್ ಪಾಂಡೆ ಅವರಂತಹ ಆಟಗಾರರು ದೇಶವನ್ನು ಪ್ರತಿನಿಧಿಸುತ್ತಿದ್ದು, ವೀರೇಂದ್ರ ಸೆಹ್ವಾಗ್ ಹರಭಜನ್ ಸಿಂಗ್ ಅವರಂತೆಯೇ ಹೆಚ್ಚಿನ ಅವಕಾಶ ನೀಡಬೇಕಿದೆ ಎಂದರು.

ಅದೇ ಹೊತ್ತಿಗೆ ಮಹೇಂದ್ರ ಸಿಂಗ್ ಧೋನಿ ಕೊಡುಗೆಯನ್ನು ಗೌರವಿಸಬೇಕಿದೆ ಎಂದರು.

ಏತನ್ಮಧ್ಯೆ ಸಮಯ ನಿರ್ಬಂಧದಿಂದಾಗಿ ಲೋಧಾ ಸಮಿತಿ ಶಿಫಾರಸು ಮಾಡಿರುವ ಎಲ್ಲ ಬದಲಾವಣೆಗಳನ್ನು ಜಾರಿಗೆ ತರಲಾಗಿಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌