ಆ್ಯಪ್ನಗರ

ವೃದ್ಧಿಮಾನ್ ಸಹಾ ಮೊದಲ ಆಯ್ಕೆ; ರಿಷಬ್ ಪಂತ್‌ಗೆ ಟೆಸ್ಟ್ ವಿಕೆಟ್ ಕೀಪರ್ ಸ್ಥಾನವೂ ನಷ್ಟವಾಗಲಿದೆಯೇ?

ಭಾರತ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ ಅನುಭವಿ ವೃದ್ಧಿಮಾನ್ ಸಹಾ ಹಾಗೂ ಉದಯೋನ್ಮುಖ ರಿಷಬ್ ಪಂತ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾರು ಕೈಗಳಿಗೆ ಗ್ಲೌ ಹಾಕಲಿದ್ದಾರೆ ಎಂಬುದು ಕುತೂಹಲವೆನಿಸಿದೆ.

Vijaya Karnataka Web 26 Sep 2019, 12:27 pm
ಮುಂಬಯಿ: ಗಾಯದಿಂದಾಗಿ ಸುದೀರ್ಘ ಸಮಯದಿಂದ ಹೊರಗುಳಿದಿರುವ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದಾಗಿ ಟೆಸ್ಟ್ ಕ್ರಿಕೆಟ್‌ನಲ್ಲೂ ಉದಯೋನ್ಮುಖ ರಿಷಬ್ ಪಂತ್‌ಗೆ ಅವಕಾಶ ನಷ್ಟವಾಗುವ ಭೀತಿ ಕಾಡುತ್ತಿದೆ.
Vijaya Karnataka Web saha-vs-pant


ಕಳೆದ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆಯಲ್ಲೇ ಸಹಾ ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಪಂತ್‌ರನ್ನೇ ನೆಚ್ಚಿಕೊಂಡಿದ್ದರು. ಇಷ್ಟಾದರೂ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಪಂತ್ ಯಶಸ್ವಿಯಾಗಿರಲಿಲ್ಲ.

ಅತೀವ ಒತ್ತಡದಲ್ಲಿರುವ ರಿಷಬ್ ಪಂತ್‌ಗೆ ಅಮೂಲ್ಯ ಟಿಪ್ಸ್ ನೀಡಿದ ವೀರೇಂದ್ರ ಸೆಹ್ವಾಗ್

ತದಾ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲೂ ಪಂತ್ ವೈಫಲ್ಯವನ್ನು ಅನುಭವಿಸಿದ್ದಾರೆ. ಇದು ಟೆಸ್ಟ್ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಪಂತ್‌ಗಿಂತಲೂ ಟೆಕ್ನಿಕಲ್ ಆಗಿ ಉತ್ತಮವಾಗಿರುವ ವೃದ್ಧಿಮಾನ್ ಸಹಾಗೆ ಅವಕಾಶ ನೀಡಲು ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಉತ್ಸುಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ರಿಷಬ್ ಪಂತ್ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಮೊದಲ ಆಯ್ಕೆಯಾಗಿದ್ದರು. ಇದನ್ನೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಪಂತ್‌ರನ್ನು ಕೈಬಿಟ್ಟರೆ ಯುವ ಆಟಗಾರನಿಗೆ ದೊಡ್ಡ ಹಿನ್ನಡೆಯಾಗಲಿದೆ.

ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್‌ಗೂ ಯಾಚಿಸುವ ಪರಿಸ್ಥಿತಿ ಬಂದಿದ್ದೇಕೆ?

ತಮ್ಮ ಚುಟುಕು ಟೆಸ್ಟ್ ಕ್ರಿಕೆಟ್ ಕೆರಿಯರ್‌ನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಏಕಮಾತ್ರ ವಿಕೆಟ್ ಕೀಪರ್ ಎಂಬ ಹಿರಿಮೆಗೆ ರಿಷಬ್ ಪಂತ್ ಪಾತ್ರವಾಗಿದ್ದರು.

ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ ಎದುರಿಸುತ್ತಿರುವ ಪಂತ್, ಆತ್ಮವಿಶ್ವಾಸದ ಅಭಾವವನ್ನು ಎದುರಿಸುತ್ತಿದ್ದು, ಇದು ವಿಕೆಟ್ ಕೀಪಿಂಗ್ ಮೇಲೂ ಪರಿಣಾಮ ಬೀರುತ್ತಿದೆ. ನಿಖರವಾದ ಡಿಆರ್‌ಎಸ್ ಮನವಿ ಮಾಡುವಲ್ಲಿ ವಿಫಲವಾಗುತ್ತಿದ್ದಾರೆ. ಭಾರತದಂತಹ ತಿರುವು ಪಿಚ್‌ನಲ್ಲಿ ಡಿಆರ್‌ಎಸ್ ಹೆಚ್ಚು ನಿರ್ಣಾಯಕವೆನಿಸಲಿದೆ. ಇನ್ನೊಂದೆಡೆ ಪಂತ್‌ಗಿಂತಲೂ ವೃದ್ಧಿಮಾನ್ ಉತ್ತಮ ವಿಕೆಟ್ ಕೀಪರ್ ಆಗಿದ್ದು, ಕೆಳ ಕ್ರಮಾಂಕದಲ್ಲೂ ಉಪಯುಕ್ತ ರನ್ ಪೇರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಹೆರಿಗೆಯ ಬಳಿಕ 26 ಕೆ.ಜಿ ತೂಕ ಇಳಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಗಾಯಮುಕ್ತರಾಗಿ ತಂಡವನ್ನು ಸೇರಿಕೊಂಡಿರುವ ವೃದ್ಧಿಮಾನ್ ಸಹಾ, ಟೆಸ್ಟ್‌ಗೆ ಮೊದಲ ಆಯ್ಕೆಯಾಗಬೇಕು ಎಂದು ತಜ್ಞರು ಸಹ ಅಭಿಪ್ರಾಯಪಡುತ್ತಾರೆ. 32 ಟೆಸ್ಟ್‌ಗಳಲ್ಲಿ ಸಹಾ 30.63ರ ಸರಾಸರಿ ಕಾಯ್ದುಕೊಂಡಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಐದು ಅರ್ಧಶತಕಗಳು ಸೇರಿವೆ. 2018 ಜನವರಿಯಲ್ಲಿ 34ರ ಹರೆಯದ ಸಹಾ ಭುವ ನೋವಿಗೊಳಗಾಗಿದ್ದರು. ಅಲ್ಲಿಂದ ಬಳಿಕ ರಿಷಬ್ ಪಂತ್ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌