ಆ್ಯಪ್ನಗರ

'ನನ್ನ, ಯುವರಾಜ್ ಟೆಸ್ಟ್ ಕ್ರಿಕೆಟ್‌ಗೆ ಅಡ್ಡಿಯಾಗಿದ್ದೆ ಈ ದಿಗ್ಗಜರು' ಕೈಫ್‌ ಹೇಳಿದ ಆಟಗಾರರು ಸಾಮಾನ್ಯರಲ್ಲ!

ಸೀಮಿತ ಓವರ್‌ ತಂಡದಲ್ಲಿ ಮೊಹಮ್ಮದ್‌ ಕೈಫ್‌ ಹಾಗೂ ಯುವರಾಜ್‌ ಸಿಂಗ್‌ ಜೋಡಿ ಹಲವು ಪಂದ್ಯಗಳಲ್ಲಿ ಟೀಮ್‌ ಇಂಡಿಯಾವನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ, ಇವರಿಬ್ಬರೂ ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘ ಕಾಲ ಆಡುವಲ್ಲಿ ವಿಫಲರಾಗಿದ್ದರು.

Vijaya Karnataka Web 17 Jun 2020, 6:15 pm

ಹೈಲೈಟ್ಸ್‌:

  • ನಿಯಮಿತವಾಗಿ ಟೆಸ್ಟ್‌ ಕ್ರಿಕೆಟ್‌ ಆಡದಿರಲು ಕಾರಣ ತಿಳಿಸಿದ ಕೈಫ್‌
  • ನನಗೆ, ಯುವರಾಜ್‌ಗೆ ದಿಗ್ಗಜ ಆಟಗಾರರು ಅಡ್ಡಿಯಾಗಿದ್ದರು
  • ಟೈಮ್ಸ್‌ ಆಫ್‌ ಇಂಡಿಯಾಗೆ ಹೇಳಿರುವ ಮಾಜಿ ಬ್ಯಾಟ್ಸ್‌ಮನ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kaif yuvi
ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದಲ್ಲಿ ನನಗೆ ಮತ್ತು ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ಗೆ ಸ್ಥಾನ ಪಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದು ಟೀಮ್‌ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌ ಬಹಿರಂಗಪಡಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌ ಹಾಗೂ ವಿರೇಂದ್ರ ಸೆಹ್ವಾಗ್‌ ಅವರು ತಂಡದಲ್ಲಿ ಇದ್ದ ಕಾರಣ ಟೆಸ್ಟ್‌ಗೆ ನಮಗೆ ಅವಕಾಶ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ.
ಟೈಮ್ಸ್ ಆಫ್‌ ಇಂಡಿಯಾ ಜತೆ ಮಾತನಾಡಿದ ಕೈಫ್‌, ಟೀಮ್‌ ಮ್ಯಾನೇಜ್‌ಮೆಂಟ್‌ ನನಗೆ ಒಮ್ಮೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಿತ್ತು. ಆದರೆ, ತಾನು ಪಡೆದ ಸೀಮಿತ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಇತರ ಬ್ಯಾಟ್ಸ್‌ಮನ್‌ಗಳು ಇರುವುದರಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಎಂದಿಗೂ ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

19 ವಯೋಮಿತಿ ವಿಶ್ವಕಪ್‌ ಗೆದ್ದ ಭಾರತ ತಂಡದ ಮೊದಲ ನಾಯಕ ಮೊಹಮ್ಮದ್‌ ಕೈಪ್‌, ಮೊದಲ ಬಾರಿ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದ ಬಗ್ಗೆ ಮಾತನಾಡಿ, "ಭಾರತ ಹಿರಿಯರ ಟೆಸ್ಟ್‌ ತಂಡಕ್ಕೆ ನನ್ನನ್ನು ಆಯ್ಕೆ ಮಾಡಿದಾಗ ತುಂಬಾ ಆಶ್ಚರ್ಯವಾಗಿತ್ತು. ನನ್ನ ನಾಯಕತ್ವದಲ್ಲಿ ಭಾರತ ಕಿರಿಯರ ತಂಡ 19 ವಯೋಮಿತಿ ವಿಶ್ವಕಪ್‌ ಗೆದ್ದಿತ್ತು. ಇದನ್ನು ಮಾಧ್ಯಮಗಳು ಸಾಕಷ್ಟು ವೈಭವೀಕರಿಸಿದ್ದವು. ಭಾರತ ಹಿರಿಯ ತಂಡದಲ್ಲಿ ಸ್ಥಾನ ಪಡೆಯಲು, 19 ವಯೋಮಿತಿ ಟೂರ್ನಿಯು ಎಲ್ಲಾ ಆಟಗಾರರಿಗೂ ಚಾಲೆಂಜಿಂಗ್‌ ಆಗಿತ್ತು. ಆ ವೇಳೆ ನಾನು ಸತತವಾಗಿ ಎರಡು ಬಾರಿ 90ಕ್ಕೂ ಹೆಚ್ಚು ರನ್‌ ಗಳಿಸಿದ್ದೆ. ನಂತರ, ಭಾರತ ಟೆಸ್ಟ್ ತಂಡಕ್ಕೆ ನನ್ನನ್ನು ಆಯ್ಕೆ ಮಾಡಲಾಗಿತ್ತು," ಎಂದು ಹೇಳಿದರು.

ಸೈಯದ್‌ ಕಿರ್ಮಾನಿ ಕೊಟ್ಟ ಟಿಪ್ಸ್‌ ಪಂತ್‌ಗೆ ರಕ್ಷಾ ಕವಚ! : ಏನದು ಮಾಜಿ ವಿಕೆಟ್‌ ಕೀಪರ್‌ ಸಲಹೆ ?

ರಾಯಲ್‌ ಚಾಲೆಂಜರ್ಸ್‌ ಮಾಜಿ ಆಟಗಾರನಿಗೆ ಅಪಾರವಾದ ಅನುಭವದ ಕೊರತೆ ಇತ್ತು. ಹಾಗಾಗಿ, ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯಲ್ಲಿ ಅಲಾನ್‌ ಡೊನಾಲ್ಡ್‌, ಶಾನ್‌ ಪೊಲಾಕ್‌ ಹಾಗೂ ಹೇವರ್ಡ್‌ ಅವರ ಬೌಲಿಂಗ್‌ ಎದುರಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಟೀಮ್‌ ಇಂಡಿಯಾದಿಂದ ಸ್ಥಾನ ಕಳೆದುಕೊಂಡರು. ಆದರೆ, ದೇಶಿ ಕ್ರಿಕೆಟ್‌ನಲ್ಲಿ ತೋರಿದ್ದ ಅದ್ಭುತ ಪ್ರದರ್ಶನದಿಂದ ಮತ್ತೊಮ್ಮೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಒಮ್ಮೊಮ್ಮೆ ಆಯ್ಕೆದಾರರು ಆಶ್ಚರ್ಯಕರ ರೀತಿಯಲ್ಲಿ ರಾಷ್ಟ್ರೀಯ ತಂಡಕ್ಕೆ ತಳ್ಳುತ್ತಾರೆ ಹಾಗೂ ಮೊದಲ ಕೆಲ ಪಂದ್ಯಗಳಲ್ಲಿ ಪ್ರದರ್ಶನ ನೀಡದ ಪಕ್ಷದಲ್ಲಿ ತಂಡದಿಂದ ಹೊರ ನೂಕುತ್ತಾರೆ. ಅಂದು ಭಾರತ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಅದ್ಭುತ ಬ್ಯಾಟ್ಸ್‌ಮನ್‌ಗಳಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದಲ್ಲಿ ನಿಯಮಿತವಾಗಿ ಆಡುವುದು ಕಷ್ಟವಾಗಿತ್ತು ಎಂಬುದನ್ನು ಉತ್ತರ ಪ್ರದೇಶದ ಮಾಜಿ ಆಟಗಾರ ಬಹಿರಂಗಪಡಿಸಿದರು.

140 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಭಾರತದ ವೇಗಿಗಳ ಗುಟ್ಟು ಬಯಲು!

"ಅಂದಿನ ದಿನಗಳಲ್ಲಿ ಸಚಿನ್‌, ದ್ರಾವಿಡ್‌ ಹಾಗೂ ಸೆಹ್ವಾಗ್‌ ಅವರಂಥ ಅದ್ಭುತ ಆಟಗಾರರಿಂದ ಟೀಮ್‌ ಇಂಡಿಯಾ ತುಂಬಿತ್ತು. ಈ ಕಾರಣದಿಂದಲೇ ನನಗೂ ಮತ್ತು ಯುವರಾಜ್‌ಗೆ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ, ನನಗಿಂತ ಯುವರಾಜ್‌ ಸಿಂಗ್‌ಗೆ ಹೆಚ್ಚಿನ ಅವಕಾಶ ಸಿಕ್ಕಿತ್ತು. 2006ರಲ್ಲಿ ನಾಗ್ಪುರದಲ್ಲಿ ಒಬ್ಬ ಆಟಗಾರ ಗಾಯವಾಗಿದ್ದರಿಂದ ನನಗೆ ಅವಕಾಶ ಸಿಕ್ಕಿತ್ತು. ಈ ಪಂದ್ಯದಲ್ಲಿ ನಾನು 91 ರನ್‌ ಗಳಿಸಿದ್ದೆ. ಆ ಆಟಗಾರ ಗುಣಮುಖರಾದ ಬಳಿಕ ನನ್ನನ್ನು ಕೈ ಬಿಡಲಾಯಿತು," ಎಂದು ಕೈಫ್‌ ಕ್ರಿಕೆಟ್‌ ದಿನಗಳನ್ನು ಸ್ಮರಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌