ಹೊಸದಿಲ್ಲಿ: ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ತಮ್ಮ ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಟೀಮ್ ಇಂಡಿಯಾವನ್ನು ಸೋಲಿಸುತ್ತೇವೆಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 24ರಂದು ಭಾನುವಾರ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಾಗೂ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆದರೆ, ಈ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದು ಚೊಚ್ಚಲ ಟಿ20 ಚಾಂಪಿಯನ್ಸ್ ಆಗಿತ್ತು. ನಂತರ, 2009ರ ಆವೃತ್ತಿಯಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದಿತ್ತು. ಆದರೆ, ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡಕ್ಕಿಂತ ಭಾರತ ಉತ್ತಮ ದಾಖಲೆಯನ್ನು ಹೊಂದಿದೆ.
ಕೊಹ್ಲಿಗಿಂತ ಈತನೇ ದುಬಾರಿ, ಪ್ರತಿ ತಂಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರು!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಮ್ ಮುನ್ನಡೆಸುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿಗಿಂತ ಬಾಬರ್ ಆಝಮ್ಗೆ ನಾಯಕತ್ವದ ಅನುಭವ ತುಂಬಾ ಕಡಿಮೆ. ಆದರೂ, ಚುಟುಕು ಸ್ವರೂಪದಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ತೋರುತ್ತಿದೆ.
"ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಒಂದು ತಂಡವಾಗಿ ನಮ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ಅಗ್ರ ಸ್ಥಾನದಲ್ಲಿದೆ. ಹಳೆಯ ಕತೆ ಮುಗಿದು ಹೋಗಿದೆ. ಇದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಅಂದಹಾಗೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮ ಕ್ರಿಕೆಟ್ ಆಡುತ್ತೇವೆಂಬ ಬಗ್ಗೆ ನಂಬಿಕೆ ಇದೆ," ಎಂದು ಆಝಮ್ ತಿಳಿಸಿದ್ದಾರೆ.
ಚುಟುಕು ವಿಶ್ವಕಪ್ ಬಳಿಕ ಭಾರತ ಟಿ20, ಓಡಿಐ ತಂಡಕ್ಕೆ ರೋಹಿತ್ ನಾಯಕ?
"ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯ ಯಾವಾಗಲೂ ಹೆಚ್ಚಿನ ತೀವ್ರತೆಯಿಂದ ಕೂಡಿರುತ್ತದೆ ಹಾಗೂ ಎರಡೂ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ . ಆದರೆ, ನಾವು ಕ್ರಿಕೆಟ್ ಆಡುವ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತೇವೆ. ಶಾಂತ ಸ್ವಭಾವದಿಂದ ಇರುವ ಮೂಲಕ ಆಡುವ ಕಡೆಗೆ ಗಮನ ಹರಿಸುತ್ತೇವೆ," ಎಂದರು.
ಯುಎಇ ಪರಿಸ್ಥಿತಿಗಳಲ್ಲಿ ಆಡಿರುವ ಹೆಚ್ಚಿನ ಅನುಭವವನ್ನು ಪಾಕಿಸ್ತಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಒಂದು ಹೆಜ್ಜೆ ಮುಂದಿದ್ದು, ಭಾರತ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆಲುವು ಪಡೆಯಲಿದೆ ಎಂದು ಬಾಬರ್ ಆಝಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮೆಂಟರ್ ಆಗಿ ಧೋನಿಯನ್ನು ಕರೆಸಿಕೊಳ್ಳಲು ಈತನೇ ಕಾರಣ ಎಂದ ಪಣೇಸರ್!
"ಕಳೆದ 3 ಅಥವಾ 4 ವರ್ಷಗಳಿಂದ ನಾವು ಯುಎಇ ಪಿಚ್ಗಳಲ್ಲಿ ಆಡುತ್ತಿದ್ದೇವೆ ಹಾಗೂ ಅಪಾರ ಅನುಭವವನ್ನು ಹೊಂದಿದ್ದೇವೆ. ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಹಾಗೂ ಬ್ಯಾಟ್ಸ್ಮನ್ಗಳು ಇಲ್ಲಿ ಹೇಗೆ ಹೊಂದಿಕೊಳ್ಳಬೇಕೆಂಬ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಪಂದ್ಯದ ದಿನ ಯಾರು ಚೆನ್ನಾಗಿ ಆಡುತ್ತಾರೆ, ಅವರು ಗೆಲ್ಲುತ್ತಾರೆ. ಆದರೆ, ನಮ್ಮ ಗುರಿ ಉತ್ತಮ ಕ್ರಿಕೆಟ್ ಆಡುವುದು. ನೀವು ಕೇಳುವುದಾದರೆ, ಭಾರತದ ವಿರುದ್ಧ ನಾವೇ ಗೆಲ್ಲುತ್ತೇವೆಂದು ಹೇಳುತ್ತೇನೆ," ಎಂದು ಬಾಬರ್ ಆಝಮ್ ಮಾತು ಮುಗಿಸಿದರು.
'ಪಿಸಿಬಿ ಮುಖ್ಯಸ್ಥನಾಗಿ ಸಂಬಳ ಪಡೆಯುತ್ತಿಲ್ಲ' ಎಂದ ರಾಜಾಗೆ ಟಾಂಗ್ ಕೊಟ್ಟ ಆಮಿರ್!
2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಾಗೂ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆದರೆ, ಈ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದು ಚೊಚ್ಚಲ ಟಿ20 ಚಾಂಪಿಯನ್ಸ್ ಆಗಿತ್ತು. ನಂತರ, 2009ರ ಆವೃತ್ತಿಯಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದಿತ್ತು. ಆದರೆ, ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡಕ್ಕಿಂತ ಭಾರತ ಉತ್ತಮ ದಾಖಲೆಯನ್ನು ಹೊಂದಿದೆ.
ಕೊಹ್ಲಿಗಿಂತ ಈತನೇ ದುಬಾರಿ, ಪ್ರತಿ ತಂಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರು!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಮ್ ಮುನ್ನಡೆಸುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿಗಿಂತ ಬಾಬರ್ ಆಝಮ್ಗೆ ನಾಯಕತ್ವದ ಅನುಭವ ತುಂಬಾ ಕಡಿಮೆ. ಆದರೂ, ಚುಟುಕು ಸ್ವರೂಪದಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ತೋರುತ್ತಿದೆ.
"ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಒಂದು ತಂಡವಾಗಿ ನಮ್ಮ ವಿಶ್ವಾಸ ಹಾಗೂ ಮನೋಸ್ಥೈರ್ಯ ಅಗ್ರ ಸ್ಥಾನದಲ್ಲಿದೆ. ಹಳೆಯ ಕತೆ ಮುಗಿದು ಹೋಗಿದೆ. ಇದರ ಬಗ್ಗೆ ಯೋಚಿಸುವ ಬದಲು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ. ಅಂದಹಾಗೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮ ಕ್ರಿಕೆಟ್ ಆಡುತ್ತೇವೆಂಬ ಬಗ್ಗೆ ನಂಬಿಕೆ ಇದೆ," ಎಂದು ಆಝಮ್ ತಿಳಿಸಿದ್ದಾರೆ.
ಚುಟುಕು ವಿಶ್ವಕಪ್ ಬಳಿಕ ಭಾರತ ಟಿ20, ಓಡಿಐ ತಂಡಕ್ಕೆ ರೋಹಿತ್ ನಾಯಕ?
"ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯ ಯಾವಾಗಲೂ ಹೆಚ್ಚಿನ ತೀವ್ರತೆಯಿಂದ ಕೂಡಿರುತ್ತದೆ ಹಾಗೂ ಎರಡೂ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ . ಆದರೆ, ನಾವು ಕ್ರಿಕೆಟ್ ಆಡುವ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತೇವೆ. ಶಾಂತ ಸ್ವಭಾವದಿಂದ ಇರುವ ಮೂಲಕ ಆಡುವ ಕಡೆಗೆ ಗಮನ ಹರಿಸುತ್ತೇವೆ," ಎಂದರು.
ಯುಎಇ ಪರಿಸ್ಥಿತಿಗಳಲ್ಲಿ ಆಡಿರುವ ಹೆಚ್ಚಿನ ಅನುಭವವನ್ನು ಪಾಕಿಸ್ತಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಒಂದು ಹೆಜ್ಜೆ ಮುಂದಿದ್ದು, ಭಾರತ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆಲುವು ಪಡೆಯಲಿದೆ ಎಂದು ಬಾಬರ್ ಆಝಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮೆಂಟರ್ ಆಗಿ ಧೋನಿಯನ್ನು ಕರೆಸಿಕೊಳ್ಳಲು ಈತನೇ ಕಾರಣ ಎಂದ ಪಣೇಸರ್!
"ಕಳೆದ 3 ಅಥವಾ 4 ವರ್ಷಗಳಿಂದ ನಾವು ಯುಎಇ ಪಿಚ್ಗಳಲ್ಲಿ ಆಡುತ್ತಿದ್ದೇವೆ ಹಾಗೂ ಅಪಾರ ಅನುಭವವನ್ನು ಹೊಂದಿದ್ದೇವೆ. ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಹಾಗೂ ಬ್ಯಾಟ್ಸ್ಮನ್ಗಳು ಇಲ್ಲಿ ಹೇಗೆ ಹೊಂದಿಕೊಳ್ಳಬೇಕೆಂಬ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಪಂದ್ಯದ ದಿನ ಯಾರು ಚೆನ್ನಾಗಿ ಆಡುತ್ತಾರೆ, ಅವರು ಗೆಲ್ಲುತ್ತಾರೆ. ಆದರೆ, ನಮ್ಮ ಗುರಿ ಉತ್ತಮ ಕ್ರಿಕೆಟ್ ಆಡುವುದು. ನೀವು ಕೇಳುವುದಾದರೆ, ಭಾರತದ ವಿರುದ್ಧ ನಾವೇ ಗೆಲ್ಲುತ್ತೇವೆಂದು ಹೇಳುತ್ತೇನೆ," ಎಂದು ಬಾಬರ್ ಆಝಮ್ ಮಾತು ಮುಗಿಸಿದರು.
'ಪಿಸಿಬಿ ಮುಖ್ಯಸ್ಥನಾಗಿ ಸಂಬಳ ಪಡೆಯುತ್ತಿಲ್ಲ' ಎಂದ ರಾಜಾಗೆ ಟಾಂಗ್ ಕೊಟ್ಟ ಆಮಿರ್!