ಆ್ಯಪ್ನಗರ

ಮಹಾನ್‌ ಕ್ರೀಡಾಕೂಟವನ್ನು ಸಂಭ್ರಮಿಸೋಣ

21ನೇ ಫಿಫಾ ವಿಶ್ವಕಪ್‌ಗೆ ಕ್ಷ ಣಗಣನೆ ಆರಂಭವಾಗಿದೆ. ಜಗತ್ತಿನ ಫುಟ್ಬಾಲ್‌ ಪ್ರೇಮಿಗಳು ಈಗ ರಷ್ಯಾದ ಕಡೆಗೆ ಗಮನ ಹರಿಸಿದ್ದಾರೆ. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನ ವಿಶ್ವಕಪ್‌ ಫುಟ್ಬಾಲ್‌ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ.

Vijaya Karnataka 13 Jun 2018, 10:45 am
21ನೇ ಫಿಫಾ ವಿಶ್ವಕಪ್‌ಗೆ ಕ್ಷ ಣಗಣನೆ ಆರಂಭವಾಗಿದೆ. ಜಗತ್ತಿನ ಫುಟ್ಬಾಲ್‌ ಪ್ರೇಮಿಗಳು ಈಗ ರಷ್ಯಾದ ಕಡೆಗೆ ಗಮನ ಹರಿಸಿದ್ದಾರೆ. ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಜನ ವಿಶ್ವಕಪ್‌ ಫುಟ್ಬಾಲ್‌ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ.
Vijaya Karnataka Web fifa-world-cup-2018


ಭಾರತದ ಕ್ರೀಡಾ ಅಭಿಮಾನಿಗಳು ಈಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಗುಂಗಿನಿಂದ ಹೊರಬಂದು ಫುಟ್ಬಾಲ್‌ ಕಡೆಗೆ ಮುಖ ಮಾಡಿದ್ದಾರೆ. ಭಾರತದಲ್ಲಿ ಫುಟ್ಬಾಲ್‌ ಹೆಚ್ಚು ಜನಪ್ರಿಯಗೊಂಡಿಲ್ಲ, ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಭಾರತ ಜಾಗತಿಕ ಫುಟ್ಬಾಲ್‌ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿರುವುದು ಗೋಚರಿಸುತ್ತದೆ.

ಕಳೆದ ವರ್ಷ ಫಿಫಾ ಕಿರಿಯರ ವಿಶ್ವಕಪ್‌ ಆಯೋಜಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ವಿದೇಶಿ ಆಟಗಾರರು ಬಂದು ಆಡುವ ಮೂಲಕ ಭಾರತದ ಹೆಸರು ಫುಟ್ಬಾಲ್‌ ಜಗತ್ತಿನಲ್ಲಿ ಚಿರಪರಿಚಿತವಾಗುತ್ತಿದೆ. ಏಷ್ಯಾ ಕಪ್‌ ಹಾಗೂ ಇಂಟರ್‌ ಕಾಂಟಿನೆಂಟಲ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತ ಫುಟ್ಬಾಲ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.


ಪ್ರಸಕ್ತ ಆಡುತ್ತಿರುವ ಜಾಗತಿಕ ಆಟಗಾರರಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಸುನಿಲ್‌ ಛೆಟ್ರಿ ಸೇರಿಕೊಂಡಿದ್ದಾರೆ. ಇದು ಒಂದು ಸ್ಫೂರ್ತಿಯ ಸೆಲೆ. ಫಿಫಾ ವಿಶ್ವಕಪ್‌ ಇತಿಹಾಸವನ್ನು ಹಿಂತಿರುಗಿ ನೋಡಿದಾಗ 1950ರಲ್ಲೇ ಭಾರತಕ್ಕೆ ವಿಶ್ವಕಪ್‌ನಲ್ಲಿ ಆಡುವ ಅವಕಾಶವಿದ್ದಿತ್ತು, ಆದರೆ ಶೂ ಧರಿಸದೆ ಆಡಲು ಅವಕಾಶ ಕೊಡಿ ಎಂದು ಭಾರತದ ತಂಡ ವಿನಂತಿಸಿದಾಗ ಅದಕ್ಕೆ ಸಂಘಟಕರು ಅನುಮತಿ ನೀಡಲಿಲ್ಲ. ಹೀಗಾಗಿ ಆಗ ತಪ್ಪಿದ ಅವಕಾಶ ಇನ್ನೂ ಸಿಕ್ಕಿಲ್ಲ. ಇನ್ನು ಭಾರತ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಮುಂದೆಯೂ ವಿಫಲವಾದರೂ, ಭಾರತಕ್ಕೆ ಆಡುವ ಅವಕಾಶ ಇದ್ದೇ ಇದೆ. ಅದು ಪಿಫಾ ವಿಶ್ವಕಪ್‌ ಆತಿಥ್ಯ ವಹಿಸುವುದು. ಅದಕ್ಕಾಗಿ ಇಲ್ಲಿಯ ಕ್ರೀಡಾಂಗಣಗಳನ್ನು ವಿಶ್ವದರ್ಜೆಗೆ ಏರಿಸುವುದು.

ಫುಟ್ಬಾಲ್‌ ಆತಿಥ್ಯವನ್ನು ವಹಿಸುತ್ತಿರುವ ರಷ್ಯಾ ಸುಮಾರು 2 ಲಕ್ಷ ಕೋಟಿ ರೂ. ಆದಾಯವನ್ನು ನಿರೀಕ್ಷಿಸುತ್ತಿದೆ. ಈ ಆರ್ಥಿಕ ಪರಿಣಾಮ ರಷ್ಯಾದ ಮೇಲೆ ಮಾತ್ರವಲ್ಲ. ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. ಫುಟ್ಬಾಲ್‌ ತಯಾರಿಸುವ ಪಾಕಿಸ್ತಾನ, ಮೆಸ್ಸಿಯ ಉತ್ಪನ್ನಗಳನ್ನು ಮಾರುವ ಭಾರತ, ಜಗತ್ತಿನ ಜನಪ್ರಿಯ ಬ್ರಾಂಡ್‌ಗಳಾದ ನೈಕಿ, ಪೂಮಾ ಹಾಗೂ ಅಡಿಡಾಸ್‌ಗಳ ಉತ್ಪನ್ನಗಳು ಹೆಚ್ಚಿ ಅವುಗಳ ಮಾರುಕಟ್ಟೆಯನ್ನು ಹೊಂದಿರುವ ದೇಶಗಳ ಆರ್ಥಿಕ ವ್ಯವಸ್ಥೆಯೂ ಸುಧಾರಣೆಯಾಗಬಹುದು.

ಸಾರಿಗೆ, ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ವಿನಿಯಮವೂ ದೇಶದ ಆರ್ಥಿಕತೆಯ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಕ್ರೀಡಾ ಜಗತ್ತಿನ ಸಾಮ್ರಾಟನೆನಿಸಿರುವ ಫುಟ್ಬಾಲ್‌ ವಿಶ್ವಕಪ್‌ಗೆ ಸಂಭ್ರಮ, ಸಂತಸ, ಶಾಂತಿ, ಸಂಪತ್ತು ಎಲ್ಲವನ್ನೂ ನೀಡುವ ಶಕ್ತಿ ಇದೆ. ಆ ಸಂಭ್ರಮದ ಕ್ಷ ಣ ಈಗ ಆರಂಭಗೊಂಡಿದೆ. ಜಗತ್ತಿನ ಸಂಭ್ರಮಕ್ಕೆ ನಾವೂ ಸಾಕ್ಷಿಯಾಗೋಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌