ಆ್ಯಪ್ನಗರ

ಫಿಫಾ ವಿಶ್ವಕಪ್‌ ಕ್ವಾಲಿಫೈಯರ್‌ ಪಂದ್ಯ: ಏಷ್ಯಾ ಚಾಂಪಿಯನ್ನರಿಗೆ ಬೆವರಿಳಿಸಿದ ಸುನಿಲ್‌ ಛೆತ್ರಿ ಪಡೆ

ಕತಾರ್‌ ವಿಶ್ವಕಪ್‌ 2022ರ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತ ಫುಟ್ಬಾಲ್‌ ತಂಡ ಬಲಿಷ್ಠ ಕತಾರ್‌ ಎದುರು ಡ್ರಾ ಫಲಿತಾಂಶ ಸಾಧಿಸಿದೆ. ಇದು ಕತಾರ್‌ ವಿರುದ್ಧ ಭಾರತದ ಶ್ರೇಷ್ಠ ಪ್ರದರ್ಶನವಾಗಿದೆ.

Vijaya Karnataka Web 11 Sep 2019, 1:53 pm
ಹೊಸದಿಲ್ಲಿ, ಸೆಪ್ಟೆಂಬರ್‌ 11: ಸುನಿಲ್‌ ಛೆತ್ರಿ ನಾಯಕತ್ವದ ಭಾರತ ಫುಟ್ಬಾಲ್‌ ತಂಡ ದೋಹಾದಲ್ಲಿ ನಡೆಯುತ್ತಿರುವ 2022ರ ಕತಾರ್‌ ಫಿಫಾ ವಿಶ್ವಕಪ್‌ ಮತ್ತು 2023ರ ಎಎಫ್‌ಸಿ ಏಷ್ಯನ್‌ ಕಪ್‌ ಜಂಟಿ ಕ್ವಾಲಿಫೈಯರ್‌ ರೌಂಡ್‌ 2 ಹಂತದ ಎರಡನೇ ಪಂದ್ಯದಲ್ಲಿ ಕತಾರ್‌ ಎದುರು ಗೋಲ್‌ ರಹಿತ ಡ್ರಾ ಸಾಧಿಸುವ ಮೂಲಕ, ಹಾಲಿ ಏಷ್ಯಾ ಚಾಂಪಿಯನ್ನರ ಬೆವರಿಳಿಸಿದೆ.
Vijaya Karnataka Web India vs Qatar 2019 fifa q match


ಮೊದಲ ಪಂದ್ಯದಲ್ಲಿ ಓಮಾನ್‌ ಎದುರು ಆರಂಭಿಕ ಗೋಲ್‌ ದಾಖಲಿಸಿ ಗೆಲ್ಲುವ ಉತ್ತಮ ಅವಕಾಶ ಹೊಂದಿದ್ದ ಭಾರತ ತಂಡ ದ್ವಿತೀಯಾರ್ಧದಲ್ಲಿ ಎರಡು ಗೋಲ್‌ ಬಿಟ್ಟುಕೊಡುವ ಮೂಲಕ ಸೋಲಿನ ನಿರಾಸೆಗೆ ಒಳಾಗಾಗಿತ್ತು. ಆದರೆ, ತನ್ನೆಲ್ಲಾ ಸಾಮರ್ಥ್ಯವನ್ನು ಒಗ್ಗೂಡಿಸಿ ಓಮಾನ್‌ಗಿಂತಲೂ ಬಲಿಷ್ಠ ತಂಡವಾದ ಕತಾರ್‌ ಎದುರು ಹೋರಾಟ ಪ್ರದರ್ಶಿದ ಬ್ಲೂ ಟೈಗರ್ಸ್‌ ಗೋಲ್‌ ರಹಿತ ಡ್ರಾ ಫಲಿತಾಂಶ ಪಡೆಯಿತು.

ಅಥ್ಲೆಟಿಕ್ಸ್‌: ವಿಶ್ವ ಚಾಂಪಿಯನ್‌ಷಿಪ್‌ಗೆ ದೂತೀ ಚಾಂದ್‌ ಆಯ್ಕೆ

ಭಾರತ ತಂಡದ ಈ ಅದ್ಭತ ಪ್ರದರ್ಶನವನ್ನು ಕೊಂಡಾಡಿರುವ ನಾಯಕ ಸುನಿಲ್‌ ಛೆತ್ರಿ ಟ್ವಿಟರ್‌ ಮೂಲಕ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. "ಪ್ರೀತಿಯ ಭಾರತ, ಇದು ನನ್ನ ತಂಡ, ಇವರೆಲ್ಲಾ ನನ್ನ ಹುಡುಗರು! ಈ ಸಂದರ್ಭದಲ್ಲಿ ನನ್ನಲ್ಲಿ ಆವರಿಸಿರುವ ಹೆಮ್ಮೆಯ ಭಾವವನ್ನು ವಿವರಿಸಲಾರೆ. ಇದು ದೊಡ್ಡ ಫಲಿತಾಂಶವಲ್ಲದೇ ಇದ್ದರೂ, ಹೋರಾಟ ಪ್ರದರ್ಶಿಸಿದ ನಿಟ್ಟಿನಲ್ಲಿ ಇದು ಬಹುದೊಡ್ಡ ಗೆಲುವಿಗೆ ಸರಿಸಮವಾದದ್ದು. ತರಬೇತಿ ವರ್ಗಕ್ಕೆ ಬಹುದೊಡ್ಡ ಶ್ರೇಯಸ್ಸು ಲಭ್ಯವಾಗುತ್ತದೆ," ಎಂದು ಛೆತ್ರಿ ಟ್ವೀಟ್‌ ಮಾಡಿದ್ದಾರೆ.


ಪಂದ್ಯದಲ್ಲಿ ಭಾರತ ತಂಡದ ಡಿಫೆನ್ಸ್‌ ನಿಜಕ್ಕೂ ಮನಮೋಹಕವಾಗಿತ್ತು. ಅದರಲ್ಲೂ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಬ್ಲೂ ಟೈಗರ್ಸ್‌ ಪರ ಭದ್ರ ಕೋಟೆಯಂತೆ ನಿಂತು ಎದುರಾಳಿ ತಂಡದ ಗೋಲ್‌ ಗಳಿಕೆಯ ಎಲ್ಲಾ ಪ್ರಯತ್ನಗಳನ್ನು ಫಿಲವನ್ನಾಗಿಸಿ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ಎದುರು ಅವಿಸ್ಮರಣೀಯ ಡ್ರಾ ಫಲಿತಾಂಶ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.

PKL 2019: ತೆಲುಗು ಟೈಟನ್ಸ್‌ ವಿರುದ್ಧ ಯು ಮುಂಬಾಗೆ 41-27 ಅಂತರದ ಭರ್ಜರಿ ಗೆಲುವು

"ಕತಾರ್‌ ಎದುರು ತಂಡ ಪ್ರದರ್ಶಿಸಿದ ಹೋರಾಟದ ಬಗ್ಗೆ ಹೆಮ್ಮೆಯಿದೆ. ಈ ಫಲಿತಾಂಶ ಸಾಧ್ಯವಾದದ್ದು ಒಂದು ತಂಡವಾಗಿ ಹೋರಾಡಿದ್ದಕ್ಕೆ. ಇದು ಕ್ವಾಲಿಫೈಯರ್‌ ಹಂತದಲ್ಲಿ ತಂಡಕ್ಕೆ ನೆರವಾಗಲಿದೆ," ಎಂದು ಗುರುಪ್ರೀತ್‌ ಸಿಂಗ್‌ ಸಂಧು ಹೇಳಿದ್ದಾರೆ.

ಕತಾರ್‌ ಅಂಕಪಟ್ಟಿಯಲ್ಲಿ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಮುನ್ನಡೆಯಲ್ಲಿದೆ. ಭಾರತ ತಂಡ 2 ಪಂದ್ಯಗಳಿಂದ 1 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಎದುರು ಅಕ್ಟೋಬರ್‌ 15ರಂದು ಪೈಪೋಟಿ ನಡೆಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌