ಪವನ್ ಸೆಹ್ರಾವತ್ ಫುಲ್ ಚಾರ್ಜ್; ತಮಿಳ್ ತಲೈವಾಸ್ ಬಗ್ಗುಬಡಿದ ಬೆಂಗಳೂರು ಬುಲ್ಸ್
ಟಾಪ್ ರೇಡರ್ ಪವನ್ ಸೆಹ್ರಾವತ್ 17 ಅಂಕಗಳ ಅಮೋಘ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನಲ್ಲಿ ತಮಿಳ್ ತಲೈವಾಸ್ ವಿರುದ್ಧ 33-27ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web 1 Sep 2019, 10:03 pm
ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಸದರ್ನ್ ಡೆರ್ಬಿ ಎಂದೇ ಕರೆಯಲ್ಪಡುವ ಸೆಣಸಾಟದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡವು ಗೆಲುವಿನ ಕೇಕೆ ಹಾಕಿದೆ. ಇದರೊಂದಿಗೆ ತವರಿನ ಅಂಗಣದಲ್ಲಿ ಮೊದಲ ಗೆಲುವು ದಾಖಲಿಸಿದೆ.
ಬೆಂಗಳೂರು ಚರಣದಲ್ಲಿ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ 33-27ರ ಅಂತರದ ಗೆಲುವು ಬಾರಿಸಿತು. ಏಕಾಂಗಿಯಾಗಿ 17 ಅಂಕಗಳನ್ನು ಪಡೆದ ಪವನ್ ಸೆಹ್ರಾವತ್ ಗೆಲುವಿನ ರೂವಾರಿಯೆನಿಸಿಕೊಂಡರು.
ಬೆಂಗಳೂರು ಹಾಗೂ ತಮಿಳ್ ನಡುವಣ ಪಂದ್ಯವಾಗಿದ್ದರಿಂದ ಅಭಿಮಾನಿಗಳಲ್ಲೂ ಹೆಚ್ಚಿನ ರೋಚಕತೆ ಮನೆ ಮಾಡಿತ್ತು. ಇದಕ್ಕೆ ತಕ್ಕುದಾಗಿ ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳಿಂದಲೂ ನಿಕಟ ಪೈಪೋಟಿ ಎದುರಾಯಿತು. ಆದರೂ 14-13ರ ಅಂತರದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಗಿತ್ತು.
ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಗೂಳಿ ಓಟವನ್ನು ಪ್ರಾರಂಭಿಸಿದ ಬೆಂಗಳೂರು ತಂಡವು ಎದುರಾಳಿಯ ಮೇಲೆ ಸವಾರಿ ಮಾಡಿತು. ಇಲ್ಲಿಂದ ಬಳಿಕ ತಲೈವಾಸ್ಗೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು 33-27ರ ಅಂತರದಲ್ಲಿ ವಶಪಡಿಸಿಕೊಂಡಿತು.
ಬೆಂಗಳೂರು ಪಾಲಿಗೆ ಫಾರ್ಮ್ಗೆ ಮರಳಿ ನೈಜ ಹೀರೊ ಎನಿಸಿಕೊಂಡಿರುವ ಪವನ್ ಸೆಹ್ರಾವತ್ 17 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ರೋಹಿತ್ ಕುಮಾರ್ ಹಾಗೂ ಅಮಿತ್ ಶೆರಾನ್ ತಲಾ ಐದು ಅಂಕಗಳನ್ನು ಪಡೆದರು. ತಮಿಳ್ ಪರ ರಾಹುಲ್ ಚೌಧರಿ ಎಂಟು ಅಂಕ ಪಡೆದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.
ಈ ಗೆಲುವಿನೊಂದಿಗೆ ಆಡಿರುವ 13 ಪಂದ್ಯಗಳಲ್ಲಿ ಏಳು ಗೆಲುವು ಹಾಗೂ ಆರು ಸೋಲುಗಳನ್ನು ಅನುಭವಿಸಿರುವ ಬೆಂಗಳೂರು ಬುಲ್ಸ್ ಒಟ್ಟು 38 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ನೆಗೆತ ಕಂಡಿದೆ.
ಇನ್ನೊಂದೆಡೆ 12 ಪಂದ್ಯಗಳಲ್ಲಿ ಮೂರು ಗೆಲುವು ಮಾತ್ರ ದಾಖಲಿಸಿರುವ ತಮಿಳ್ ತಲೈವಾಸ್ 26 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದೆ.
ಬೆಂಗಾಲ್ಗೆ ಯುಪಿ ಟಕ್ಕರ್...
ಈ ಮೊದಲು ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡವು ಬೆಂಗಾಲ್ ವಾರಿಯರ್ಸ್ ವಿರುದ್ಧ 32-29ರ ಅಂತರದ ರೋಚಕ ಗೆಲುವು ದಾಖಲಿಸಿತು. ಶ್ರೀಕಾಂತ್ ಜಾಧವ್ (9 ಅಂಕ) ಹಾಗೂ ನಿತೇಶ್ ಕುಮಾರ್ (7 ಅಂಕ) ಯುಪಿ ಪರ ಸ್ಟಾರ್ ಎನಿಸಿಕೊಂಡರು. ಬೆಂಗಾಲ್ ಪರ ಮೊಹಮ್ಮದ್ ನಬಿಭಕ್ಷ್ 7 ಅಂಕಗಳನ್ನು ಪೆಡದರು.
ಈ ಸೋಲಿನ ಹೊರತಾಗಿಯೂ 12 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ 40 ಅಂಕ ಪಡೆದಿರುವ ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ಅಷ್ಟೇ ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲುಗಳನ್ನು ಕಂಡಿರುವ ಯುಪಿ ಯೋಧಾ 32 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
ಬೆಂಗಳೂರು ಚರಣದಲ್ಲಿ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ 33-27ರ ಅಂತರದ ಗೆಲುವು ಬಾರಿಸಿತು. ಏಕಾಂಗಿಯಾಗಿ 17 ಅಂಕಗಳನ್ನು ಪಡೆದ ಪವನ್ ಸೆಹ್ರಾವತ್ ಗೆಲುವಿನ ರೂವಾರಿಯೆನಿಸಿಕೊಂಡರು.
ಬೆಂಗಳೂರು ಹಾಗೂ ತಮಿಳ್ ನಡುವಣ ಪಂದ್ಯವಾಗಿದ್ದರಿಂದ ಅಭಿಮಾನಿಗಳಲ್ಲೂ ಹೆಚ್ಚಿನ ರೋಚಕತೆ ಮನೆ ಮಾಡಿತ್ತು. ಇದಕ್ಕೆ ತಕ್ಕುದಾಗಿ ಪಂದ್ಯದ ಮೊದಲಾರ್ಧದಲ್ಲಿ ಇತ್ತಂಡಗಳಿಂದಲೂ ನಿಕಟ ಪೈಪೋಟಿ ಎದುರಾಯಿತು. ಆದರೂ 14-13ರ ಅಂತರದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಬೆಂಗಳೂರು ಯಶಸ್ವಿಯಾಗಿತ್ತು.
ದ್ವಿತಿಯಾರ್ಧದಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಗೂಳಿ ಓಟವನ್ನು ಪ್ರಾರಂಭಿಸಿದ ಬೆಂಗಳೂರು ತಂಡವು ಎದುರಾಳಿಯ ಮೇಲೆ ಸವಾರಿ ಮಾಡಿತು. ಇಲ್ಲಿಂದ ಬಳಿಕ ತಲೈವಾಸ್ಗೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು 33-27ರ ಅಂತರದಲ್ಲಿ ವಶಪಡಿಸಿಕೊಂಡಿತು.
ಬೆಂಗಳೂರು ಪಾಲಿಗೆ ಫಾರ್ಮ್ಗೆ ಮರಳಿ ನೈಜ ಹೀರೊ ಎನಿಸಿಕೊಂಡಿರುವ ಪವನ್ ಸೆಹ್ರಾವತ್ 17 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ರೋಹಿತ್ ಕುಮಾರ್ ಹಾಗೂ ಅಮಿತ್ ಶೆರಾನ್ ತಲಾ ಐದು ಅಂಕಗಳನ್ನು ಪಡೆದರು. ತಮಿಳ್ ಪರ ರಾಹುಲ್ ಚೌಧರಿ ಎಂಟು ಅಂಕ ಪಡೆದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.
ಇನ್ನೊಂದೆಡೆ 12 ಪಂದ್ಯಗಳಲ್ಲಿ ಮೂರು ಗೆಲುವು ಮಾತ್ರ ದಾಖಲಿಸಿರುವ ತಮಿಳ್ ತಲೈವಾಸ್ 26 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲೇ ಮುಂದುವರಿದಿದೆ.
ಬೆಂಗಾಲ್ಗೆ ಯುಪಿ ಟಕ್ಕರ್...
ಈ ಮೊದಲು ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ತಂಡವು ಬೆಂಗಾಲ್ ವಾರಿಯರ್ಸ್ ವಿರುದ್ಧ 32-29ರ ಅಂತರದ ರೋಚಕ ಗೆಲುವು ದಾಖಲಿಸಿತು. ಶ್ರೀಕಾಂತ್ ಜಾಧವ್ (9 ಅಂಕ) ಹಾಗೂ ನಿತೇಶ್ ಕುಮಾರ್ (7 ಅಂಕ) ಯುಪಿ ಪರ ಸ್ಟಾರ್ ಎನಿಸಿಕೊಂಡರು. ಬೆಂಗಾಲ್ ಪರ ಮೊಹಮ್ಮದ್ ನಬಿಭಕ್ಷ್ 7 ಅಂಕಗಳನ್ನು ಪೆಡದರು.
ಈ ಸೋಲಿನ ಹೊರತಾಗಿಯೂ 12 ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ 40 ಅಂಕ ಪಡೆದಿರುವ ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ಅಷ್ಟೇ ಪಂದ್ಯಗಳಲ್ಲಿ ತಲಾ ಐದು ಗೆಲುವು ಹಾಗೂ ಸೋಲುಗಳನ್ನು ಕಂಡಿರುವ ಯುಪಿ ಯೋಧಾ 32 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.