ಆ್ಯಪ್ನಗರ

ಪ್ರೊ ಕಬಡ್ಡಿ ಲೀಗ್‌ 2019: ಯೋಧಾ ಕದನ ಗೆದ್ದ ಬೆಂಗಳೂರು ಬುಲ್ಸ್‌ ಸೆಮಿಫೈನಲ್‌ಗೆ

ಕ್ಷಣ ಕ್ಷಣಕ್ಕೂ ರೋಮಾಂಚನ ನೀಡುತ್ತಿದ್ದ ಅತ್ಯಂತ ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಯುಪಿ ಯೋಧಾ ಎದುರು 48-45 ಅಂಕಗಳ ಮನಮೋಹಕ ಜಯದೊಂದಿಗೆ 7ನೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೆಮಿಫೈನಲ್ಸ್‌ ತಲುಪಿದೆ.

Vijaya Karnataka Web 14 Oct 2019, 9:44 pm
ಅಹಮದಾಬಾದ್‌: ಅತ್ಯಂತ ರೋಚಕವಾಗಿ ಮೂಡಿದ ಬಂದ ಹೈವೋಲ್ಟೇ ಎಲಿಮಿನೇಟರ್‌ 1 ಪಂದ್ಯದಲ್ಲಿ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರ ಮಿಂಚಿನ ದಾಳಿಯ ಬಲದಿಂದ ಗೆದ್ದ ಯುಪಿ ಯೋಧಾ ವಿರುದ್ಧ ಬೆಂಗಳೂರು ಬುಲ್ಸ್‌ ತಂಡ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದೆ.
Vijaya Karnataka Web bengaluru bulls vs up yoddha eliminator 1 match 2019


ಇಲ್ಲಿನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದ ನಿಗದಿತ 40 ನಿಮಿಷಗಳ ಅವಧಿಯಲ್ಲಿ ಇತ್ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಮೂಲಕ 36-36 ಅಂಕಗಳಿಂದ ಟೈ ಫಲಿತಾಂಶ ಕಂಡಿದ್ದವು. ನಾಕ್‌ಔಟ್‌ ಪಂದ್ಯವಾಗಿದ್ದ ಕಾರಣ ಟೈ ಬ್ರೇಕರ್‌ ನಿಯಮ ಬಳಕೆಗೆ ತಂದು ಫಲಿತಾಂಶ ಸಲುವಾಗಿ ಹೆಚ್ಚುವರಿ 7 ನಿಮಿಷಗಳ ಆಟ ನಡೆಸಲಾಯಿತು.

ಪ್ಲೇ-ಆಫ್ ವೇಳಾಪಟ್ಟಿ ಇಲ್ಲಿದೆ

ಇಲ್ಲಿ ಆರಂಭದಲ್ಲೇ 3 ಅಂಕಗಳ ಹಿನ್ನಡೆ ಅನುಭವಿಸಿ ಪ್ರಮುಖ ರೇಡರ್‌ ಒವನ್‌ ಕುಮಾರ್‌ ಅವರನ್ನೂ ಕಳೆದುಕೊಂಡು ಮರ್ಮಾಘಾತ ಅನುಭವಿಸುವುದರಲ್ಲಿದ್ದ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ಸ, ಕೊನೆಯ 4 ನಿಮಿಷಗಳಲ್ಲಿ ಪೀನಿಕ್ಸ್‌ ಪಕ್ಷಿಯಂತೆ ಅತ್ಯಂತ ನಾಟಕೀಯ ರೀತಿಯಲ್ಲಿ ಪುಟಿದೆದ್ದು ಜಯ ದಕ್ಕಿಸಿಕೊಂಡಿತು. ಅಂಗಣಕ್ಕೆ ಮರಳಿದ ನಡೆಸಿದ ಮೊದಲ ರೇಡ್‌ನಲ್ಲೇ ಎದುರಾಳಿ ತಂಡದ ನಾಲ್ವರನ್ನು ಔಟ್‌ ಮಾಡಿದ ಪವನ್‌ ಕುಮಾರ್‌, ಬಳಿಕ ಕ್ಷಣಮಾತ್ರದಲ್ಲಿ ಯೋಧಾ ಪಡೆಯನ್ನು ಆಲ್‌ಔಟ್‌ ಮಾಡಿಬಿಟ್ಟರು.

ಹೆಚ್ಚುವರಿ ಸಮಯದಲ್ಲಿ ಪವನ್‌ ಕುಮಾರ್‌ ತೋರಿದ ವೀರಾವೇಶದ ಪ್ರದರ್ಶನದಿಂದ ಬೆಂಗಳೂರು ಬುಲ್ಸ್‌ ತಂಡ 48-45 ಅಂಕಗಳಿಂದ ಯುಪಿ ಯೋಧಾ ಪಡೆಯನ್ನು ಹಿಮ್ಮೆಟ್ಟಿಸಿ ಸೆಮಿಫೈನಲ್ಸ್‌ ಟಿಕೆಟ್‌ ಸಂಪಾದಿಸಿತು. ಅಷ್ಟೇ ಅಲ್ಲದೆ ಲೀಗ್‌ ಹಂತದಲ್ಲಿ ಯೋಧಾ ವಿರುದ್ಧ ಅನುಭವಿಸಿದ್ದ ಸತತ ಎರಡು ಸೋಲಿನ ಕೊಂಡಿಯನ್ನು ಕಳಚಿ ಎದುರಾಳಿಗೆ ನಿರ್ಣಾಯಕ ಘಟ್ಟದಲ್ಲಿ ಆಘಾತ ನೀಡಿ ಸೇಡು ತೀರಿಸಿಕೊಂಡಿತು.

ಪ್ರೋ ಕಬಡ್ಡಿ ಲೀಗ್‌ ಲೇಟೆಸ್ಟ್‌ ಸುದ್ದಿಗಳು

ಇದೀಗ ಅ.16ರಂದು ನಡೆಯಲಿರುಯವ ಸೆಮಿಫೈನಲ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಬಲಿಷ್ಠ ದಬಾಂಗ್‌ ಡೆಲ್ಲಿ ವಿರುದ್ಧ ಪೈನಲ್‌ ಅರ್ಹತೆಗಾಗಿ ಪೈಪೋಟಿ ನಡೆಸಲಿದೆ. ಡೆಲ್ಲಿ ತಂಡ ಲೀಗ್‌ ಹಂತದಲ್ಲಿ ಅಂಕಪಟ್ಟಿಯ ಅಗ್ರ 2 ಸ್ಥಾನದಲ್ಲಿ ಗುರುತಿಸಿಕೊಳ್ಳುವ ಮೂಲಕ ಸೆಮಿಫೈನಲ್ಸ್‌ ಹಂತಕ್ಕರ ನೇರ ಅರ್ಹತೆ ಪಡೆದಿತ್ತು.

ಬುಲ್ಸ್‌ ಪರ ಮತ್ತೊಮ್ಮೆ ಮ್ಯಾಚ್‌ ವಿನ್ನರ್‌ ಎನಿಸಿದ ಪವನ್‌ ಕುಮಾರ್‌ ಸೆಹ್ರಾವತ್‌ ಬರೋಬ್ಬರಿ 20 ಅಂಕಗಳನ್ನು ಗಳಿಸುವ ಮೂಲಕ ಯೋಧಾ ಪಡೆ ಭದ್ರ ಕೋಟೆನ್ನು ಛಿದ್ರ ಛಿದ್ರ ಮಾಡಿದರು. ಈ ಮೂಲಕ ಪ್ರಸಕ್ತ ಸಾಲಿನ ಲೀಗ್‌ನಲ್ಲಿ ಅತಿ ಹೆಚ್ಚು ರೇಡ್‌ ಅಂಕ ಗಳಿಸಿದವರ ಪೈಕಿ ಅಗ್ರಸ್ಥಾನವನ್ನು ಮತ್ತಷ್ಟು ಬಲ ಪಡಿಸಿಕೊಂಡಿದ್ದಾರೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌