ಆ್ಯಪ್ನಗರ

ನಿರಪರಾಧಿ ಎಂಬುದನ್ನು ಸಾಬೀತುಪಡಿಸುವೆ: ನರಸಿಂಗ್ ಯಾದವ್‌

ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಎಲ್ಲವನ್ನೂ ಮಾಡಲಿದ್ದೇನೆ ಎಂದು ಸಿಎಎಸ್‌ ನಿಂದ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿರುವ ನರಸಿಂಗ ಯಾದವ್‌ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 19 Aug 2016, 11:22 am
ಹೊಸದಿಲ್ಲಿ: 'ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಎಲ್ಲವನ್ನೂ ಮಾಡಲಿದ್ದೇನೆ,' ಎಂದು ಸಿಎಎಸ್‌ (ಕೋರ್ಟ್‌ ಆಫ್‌ ಆರ್ಬಿಟ್ರೇಷನ್‌ ಫಾರ್‌ ಸ್ಪೋರ್ಟ್ಸ್)ನಿಂದ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿರುವ ಕುಸ್ತಿಪಟು ನರಸಿಂಗ ಯಾದವ್‌ ಹೇಳಿದ್ದಾರೆ.
Vijaya Karnataka Web i feel devastated narsingh on four year ban
ನಿರಪರಾಧಿ ಎಂಬುದನ್ನು ಸಾಬೀತುಪಡಿಸುವೆ: ನರಸಿಂಗ್ ಯಾದವ್‌


ನಿಷೇಧದಿಂದ ಒಲಿಂಪಿಕ್ಸ್‌ನಲ್ಲಿ ಆಟುವ ಕನಸು ನುಚ್ಚುನೂರಾಗಿದ್ದು, ನನಗೆ ನಾಶವಾಗಿ ಹೋದಂತೆ ಅನಿಸುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

'ದೇಶಕ್ಕಾಗಿ ಆಡಿ ಜಯ ಗಳಿಸಬೇಕೆಂದು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿದ್ದ ನನ್ನ ಹೋರಾಟ, ಕನಸು ಎಲ್ಲವೂ ಕಳೆದುಹೋಯಿತು. ನನ್ನನ್ನು ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಈ ನೋವನ್ನು ಬಿಟ್ಟು ಬಿಡುತ್ತೇನೆ,'ಎಂದು ಅವರು ಹೇಳಿದ್ದಾರೆ.

'ನರಸಿಂಗ ಅವರು ನಿರಪರಾಧಿ ಎಂದು ನಂಬುತ್ತಿದ್ದು, ಅವರು ನ್ಯಾಯಕ್ಕಾಗಿ ನಡೆಸುವ ಹೋರಾಟಕ್ಕೆ ನೆರವು ನೀಡುವುದಾಗಿ ಪ್ರಾಯೋಜಕ ಸಂಸ್ಥೆ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಹೇಳಿದೆ.

ಉದ್ದೇಶಪೂರ್ವಕವಾಗಿ ಡೋಪಿಂಗ್‌ ನಿಯಮ ಉಲ್ಲಂಘಿಸಿಲ್ಲ, ತಾನು ಪ್ರಕರಣದಲ್ಲಿ ಬಲಿಪಶು ಎಂಬ ನರಸಿಂಗ್‌ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸಿಎಎಸ್‌ ಹೇಳಿದ್ದು, ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌