ಹೊಸದಿಲ್ಲಿ: 'ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ನಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಎಲ್ಲವನ್ನೂ ಮಾಡಲಿದ್ದೇನೆ,' ಎಂದು ಸಿಎಎಸ್ (ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್)ನಿಂದ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿರುವ ಕುಸ್ತಿಪಟು ನರಸಿಂಗ ಯಾದವ್ ಹೇಳಿದ್ದಾರೆ.
ನಿಷೇಧದಿಂದ ಒಲಿಂಪಿಕ್ಸ್ನಲ್ಲಿ ಆಟುವ ಕನಸು ನುಚ್ಚುನೂರಾಗಿದ್ದು, ನನಗೆ ನಾಶವಾಗಿ ಹೋದಂತೆ ಅನಿಸುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
'ದೇಶಕ್ಕಾಗಿ ಆಡಿ ಜಯ ಗಳಿಸಬೇಕೆಂದು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿದ್ದ ನನ್ನ ಹೋರಾಟ, ಕನಸು ಎಲ್ಲವೂ ಕಳೆದುಹೋಯಿತು. ನನ್ನನ್ನು ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಈ ನೋವನ್ನು ಬಿಟ್ಟು ಬಿಡುತ್ತೇನೆ,'ಎಂದು ಅವರು ಹೇಳಿದ್ದಾರೆ.
'ನರಸಿಂಗ ಅವರು ನಿರಪರಾಧಿ ಎಂದು ನಂಬುತ್ತಿದ್ದು, ಅವರು ನ್ಯಾಯಕ್ಕಾಗಿ ನಡೆಸುವ ಹೋರಾಟಕ್ಕೆ ನೆರವು ನೀಡುವುದಾಗಿ ಪ್ರಾಯೋಜಕ ಸಂಸ್ಥೆ ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಹೇಳಿದೆ.
ಉದ್ದೇಶಪೂರ್ವಕವಾಗಿ ಡೋಪಿಂಗ್ ನಿಯಮ ಉಲ್ಲಂಘಿಸಿಲ್ಲ, ತಾನು ಪ್ರಕರಣದಲ್ಲಿ ಬಲಿಪಶು ಎಂಬ ನರಸಿಂಗ್ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸಿಎಎಸ್ ಹೇಳಿದ್ದು, ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.
ನಿಷೇಧದಿಂದ ಒಲಿಂಪಿಕ್ಸ್ನಲ್ಲಿ ಆಟುವ ಕನಸು ನುಚ್ಚುನೂರಾಗಿದ್ದು, ನನಗೆ ನಾಶವಾಗಿ ಹೋದಂತೆ ಅನಿಸುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
'ದೇಶಕ್ಕಾಗಿ ಆಡಿ ಜಯ ಗಳಿಸಬೇಕೆಂದು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿದ್ದ ನನ್ನ ಹೋರಾಟ, ಕನಸು ಎಲ್ಲವೂ ಕಳೆದುಹೋಯಿತು. ನನ್ನನ್ನು ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಈ ನೋವನ್ನು ಬಿಟ್ಟು ಬಿಡುತ್ತೇನೆ,'ಎಂದು ಅವರು ಹೇಳಿದ್ದಾರೆ.
'ನರಸಿಂಗ ಅವರು ನಿರಪರಾಧಿ ಎಂದು ನಂಬುತ್ತಿದ್ದು, ಅವರು ನ್ಯಾಯಕ್ಕಾಗಿ ನಡೆಸುವ ಹೋರಾಟಕ್ಕೆ ನೆರವು ನೀಡುವುದಾಗಿ ಪ್ರಾಯೋಜಕ ಸಂಸ್ಥೆ ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಹೇಳಿದೆ.
ಉದ್ದೇಶಪೂರ್ವಕವಾಗಿ ಡೋಪಿಂಗ್ ನಿಯಮ ಉಲ್ಲಂಘಿಸಿಲ್ಲ, ತಾನು ಪ್ರಕರಣದಲ್ಲಿ ಬಲಿಪಶು ಎಂಬ ನರಸಿಂಗ್ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ಸಿಎಎಸ್ ಹೇಳಿದ್ದು, ನಾಲ್ಕು ವರ್ಷಗಳ ನಿಷೇಧ ವಿಧಿಸಿದೆ.