ಆ್ಯಪ್ನಗರ

ಸಾಕೇತ್‌ - ಸುಮಿತ್‌ ಫೈಟ್‌

ವೈಲ್ಡ್‌ ಕಾರ್ಡ್‌ ಪ್ರವೇಶಿತರಾದ ಹಾಲಿ ಚಾಂಪಿಯನ್‌ ಸುಮಿತ್‌ ನಾಗಲ್‌ ಮತ್ತು ಸಾಕೇತ್‌ ಮೈನೇನಿ ಎಟಿಪಿ ಚಾಲೆಂಜರ್‌ ಟೂರ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ 8ರ ಘಟ್ಟಕ್ಕೆ ಮುನ್ನಡೆದಿದ್ದು, ಸೆಮಿಫೈನಲ್‌ ಪ್ರವೇಶಕ್ಕಾಗಿ ಗುರುವಾರ ಮುಖಾಮುಖಿಯಾಗಲಿದ್ದಾರೆ.

Vijaya Karnataka 15 Nov 2018, 5:00 am
ಬೆಂಗಳೂರು : ವೈಲ್ಡ್‌ ಕಾರ್ಡ್‌ ಪ್ರವೇಶಿತರಾದ ಹಾಲಿ ಚಾಂಪಿಯನ್‌ ಸುಮಿತ್‌ ನಾಗಲ್‌ ಮತ್ತು ಸಾಕೇತ್‌ ಮೈನೇನಿ ಎಟಿಪಿ ಚಾಲೆಂಜರ್‌ ಟೂರ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ 8ರ ಘಟ್ಟಕ್ಕೆ ಮುನ್ನಡೆದಿದ್ದು, ಸೆಮಿಫೈನಲ್‌ ಪ್ರವೇಶಕ್ಕಾಗಿ ಗುರುವಾರ ಮುಖಾಮುಖಿಯಾಗಲಿದ್ದಾರೆ.
Vijaya Karnataka Web
ಸಾಕೇತ್‌ - ಸುಮಿತ್‌ ಫೈಟ್‌


ಇಲ್ಲಿನ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ 1ರಲ್ಲಿ ಬುಧವಾರ ನಡೆದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಡೇವಿಸ್‌ ಕಪ್‌ ಆಟಗಾರ ಸಾಕೇತ್‌ 6-1, 3-6, 6-1 ಸೆಟ್‌ಗಳಿಂದ ಅರ್ಹತಾ ಸುತ್ತಿನ ವಿಜೇತ ಈಜಿಪ್ತ್‌ನ ಯೂಸೆಫ್‌ ಹೊಸಾಮ್‌ ವಿರುದ್ಧ 2 ಗಂಟೆಗೂ ಅಧಿಕ ಸಮಯದಲ್ಲಿ ಪಂದ್ಯ ವಶಪಡಿಸಿಕೊಂಡರು. ಮೊದಲ ಸೆಟ್ಟನ್ನು ಸುಲಭವಾಗಿ ಗೆದ್ದ ಸಾಕೇತ್‌ ದ್ವಿತೀಯ ಸೆಟ್‌ನಲ್ಲಿ ಯೂಸೆಫ್‌ ಆಟಕ್ಕೆ ನಿಬ್ಬೆರಗಾದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮೈಕೊಡವಿ ನಿಂತ ಭಾರತೀಯ ಆಟಗಾರ ಎದುರಾಳಿಯ ಎಲ್ಲ ಹೋರಾಟವನ್ನು ಹತ್ತಿಕ್ಕಿ 6-1ರಲ್ಲಿ ಸೆಟ್‌ ವಶಪಡಿಸಿಕೊಂಡರು.

ಮತ್ತೊಂದು ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್‌ ಸುಮಿತ್‌ ನಾಗಲ್‌ 6-3, 7-6 (7/4) ಸೆಟ್‌ಗಳಿಂದ ಗ್ರೇಟ್‌ ಬ್ರಿಟನ್‌ನ ಜೇಮ್ಸ್‌ ವಾರ್ಡ್‌ ವಿರುದ್ಧ ಜಯ ಗಳಿಸಿದರು. ಮೊದಲ ಸೆಟನ್ನು ನಿರಾಯಾಸವಾಗಿ ಜಯಿಸಿದ ಹಾಲಿ ಚಾಂಪಿಯನ್‌ ದ್ವಿತೀಯ ಸೆಟ್‌ನಲ್ಲಿ ಪ್ರಬಲ ಪ್ರತಿರೋಧ ಎದುರಿಸಿದರು. ಈ ಮಧ್ಯೆ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ದಿನದ ಆರಂಭದ ಪಂದ್ಯದಲ್ಲಿ ಅರ್ಹತಾ ಸುತ್ತಿನ ವಿಜೇತ ಭಾರತದ ಸಸಿ ಕುಮಾರ್‌ ಮುಕುಂದ್‌ 7-6(7-2), 3-1ರಲ್ಲಿ ಮುನ್ನಡೆ ಗಳಿಸಿದ್ದಾಗ ಎದುರಾಳಿ ಸ್ಲೊವಾಕಿಯಾದ ಬ್ಲಾಜ್‌ ಕಾವ್ಚಿಚ್‌ ಹಿಂದೆ ಸರಿದ ಕಾರಣ ಸುಲಭವಾಗಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌