Please enable javascript.ಕ್ರೀಡಾ ಸಚಿವರೊಂದಿಗೆ ತೆಂಡೂಲ್ಕರ್ ಮಾತುಕತೆ - ಕ್ರೀಡಾ ಸಚಿವರೊಂದಿಗೆ ತೆಂಡೂಲ್ಕರ್ ಮಾತುಕತೆ - Vijay Karnataka

ಕ್ರೀಡಾ ಸಚಿವರೊಂದಿಗೆ ತೆಂಡೂಲ್ಕರ್ ಮಾತುಕತೆ

Vijaya Karnataka Web 27 Nov 2014, 4:10 am
Subscribe

ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಕಂಚಿನ ಪದಕವನ್ನು ಸ್ವೀಕರಿಸಲು ನಿರಾಕರಿಸಿ ಅಮಾನತುಗೊಂಡಿರುವ ಭಾರತದ ಬಾಕ್ಸರ್ ಸರಿತಾ ದೇವಿ ಅವರಿಗೆ ಬೆಂಬಲ ನೀಡುವ ವಿಚಾರದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬುಧವಾರ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದಾ ಸೊನೊವಾಲ್ ಅವರೊಂದಿಗೆ ಮಾತುಕತೆ ನಡೆಸಿದರು.

ಕ್ರೀಡಾ ಸಚಿವರೊಂದಿಗೆ ತೆಂಡೂಲ್ಕರ್ ಮಾತುಕತೆ
ಹೊಸದಿಲ್ಲಿ: ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಕಂಚಿನ ಪದಕವನ್ನು ಸ್ವೀಕರಿಸಲು ನಿರಾಕರಿಸಿ ಅಮಾನತುಗೊಂಡಿರುವ ಭಾರತದ ಬಾಕ್ಸರ್ ಸರಿತಾ ದೇವಿ ಅವರಿಗೆ ಬೆಂಬಲ ನೀಡುವ ವಿಚಾರದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಬುಧವಾರ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದಾ ಸೊನೊವಾಲ್ ಅವರೊಂದಿಗೆ ಮಾತುಕತೆ ನಡೆಸಿದರು.

‘‘ಸರಿತಾ ದೇವಿಯ ವಿಚಾರದಲ್ಲಿ ಚರ್ಚಿಸಲು ಈ ಭೇಟಿ. ಆಕೆ ಯಾವ ರೀತಿಯಲ್ಲಿ ನೋವು ಅನುಭವಿಸಿರಬಹುದೆಂಬುದು ಒಬ್ಬ ಕ್ರೀಡಾಪಟುವಾಗಿ ನಾನು ಬಲ್ಲೆ. ಇದು ಆಕೆಯ ಕ್ರೀಡಾ ಬದುಕಿನಲ್ಲಿ ಅತ್ಯಂತ ಕಠಿಣ ಸ್ಥಿತಿ. ಪರಿಸ್ಥಿತಿಗೆ ಪ್ರತಿಯೊಬ್ಬರು ವಿಭಿನ್ನ ರೀತಿಯಲ್ಲಿ ಸ್ಪಂದಿಸುತ್ತಾರೆ. ಆಕೆಯ ಪ್ರಕರಣವನ್ನು ಎಐಬಿಎ ಪರಿಗಣಿಸಬೇಕಿದೆ. ಅವರು ಈಗಾಗಲೇ ಕ್ಷಮೆಯಾಚಿಸಿರುತ್ತಾರೆ. ಈ ವಿಷಯದಲ್ಲಿ ಮುಂದೆ ಯಾವ ರೀತಿಯಲ್ಲಿ ಹೆಜ್ಜೆ ಇಡಬೇಕೆಂಬ ಕುರಿತು ನಾವು ಚರ್ಚಿಸಿದೆವು,’’ ಎಂದು ಸಚಿನ್ ಹೇಳಿದ್ದಾರೆ.

‘‘ಸರಕಾರದ ಪರವಾಗಿ ನಾವು ಎಐಬಿಎಯನ್ನು ಸಂಪರ್ಕಿಸಲಿದ್ದೇವೆ. ಸರಿತಾ ದೇವಿಯ ಪ್ರಕರಣದ ವಿಚಾರದಲ್ಲಿ ಪುನರ್ ಪರಿಶೀಲನೆ ನಡೆಸುವಂತೆ ವಿಶ್ವ ಬಾಕ್ಸಿಂಗ್ ಸಂಸ್ಥೆಯನ್ನು ಕೇಳಿಕೊಳ್ಳಲಿದ್ದೇವೆ, ’’ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ