ಆ್ಯಪ್ನಗರ

ನಾನು ನಿವೃತ್ತಿಯಾಗುತ್ತಿದ್ದೇನೆಂದು ಕ್ರೀಡಾಭಿಮಾನಿಗಳಿಗೆ ಶಾಕ್‌ ಕೊಟ್ಟ ಪಿ.ವಿ ಸಿಂಧು! ಅಸಲಿ ಸತ್ಯ ಇಲ್ಲಿದೆ..

ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು ಇಂದು(ಸೋಮವಾರ) ನಿವೃತ್ತಿ ಪಡೆಯುತ್ತಿದ್ದೇನೆಂದ ಟ್ವೀಟ್‌ ಕ್ರಿಡಾಭಿಮಾನಿಗಳಲ್ಲಿ ಆಘಾತ ಉಂಟುಮಾಡಿತು. ಆದರೆ, ಅವರ ಹೇಳಿಕೆಯ ವಾಸ್ತವ ಬೇರೆ ಇದೆ.

Vijaya Karnataka Web 2 Nov 2020, 4:55 pm
ಹೊಸದಿಲ್ಲಿ: ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು ಸೋಮವಾರ ಮಧ್ಯಾಹ್ನ ಇನ್‌ಸ್ಟಾಗ್ರಾಮ್‌ ಸೇರಿದಂತೆ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ನಿವೃತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್‌ ಕ್ರೀಡಾಭಿಮಾನಿಗಳಿಗೆ ಆಘಾತ ನೀಡಿತು. ಅವರು ಮೂರು ಪುಟಗಳ ಹೇಳಿಕೆಯನ್ನು ಓದುತ್ತಾ ಸಾಗಿದರೆ, ಅವರು ನಿವೃತ್ತಿ ಯಾವುದಕ್ಕೆ ನೀಡಿದ್ದಾರೆಂಬುದು ಮನದಟ್ಟಾಗುತ್ತದೆ.
Vijaya Karnataka Web PV SIndhu
ಪಿವಿ ಸಿಂಧು (ಚಿತ್ರ: ಟಿಒಐ)


ಮೂರು ಪುಟಗಳ ಹೇಳಿಕೆಯ ಮೊದಲನೇ ಪುಟ ನೋಡಿದ ಬಳಿಕ ಒಲಿಂಪಿಕ್ಸ್‌ ಪದಕ ವಿಜೇತ ಬ್ಯಾಡ್ಮಿಂಟನ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆಂದು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಸಂಪೂರ್ಣ ಮೂರು ಪುಟಗಳನ್ನು ಓದಿದ ಬಳಿಕ ಅವರು ಯಾವುದಕ್ಕೆ ವಿದಾಯ ಘೋಷಿಸಿದ್ದಾರೆಂದು ಅರ್ಥವಾಗಲಿದೆ.

"ಹೊಸದಾದ ಭಾವನೆಗಳೊಂದಿಗೆ ಬರಲು ಯೋಚಿಸುತ್ತಿದ್ದೇನೆ. ಸಾಕಷ್ಟು ದಿನಗಳಿಂದ ಇದರಿಂದ ತುಂಬಾ ಹೆಣಗಾಡುತ್ತಿದ್ದೇನೆ. ಇದು ನನ್ನಲ್ಲಿ ತಪ್ಪು ಭಾವನೆಗಳನ್ನು ಮೂಡಿಸುತ್ತಿದೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ," ಎಂದು ತಮ್ಮ ಹೇಳಿಕೆಯಲ್ಲಿ 25ರ ಪ್ರಾಯದ ಆಟಗಾರ್ತಿ ತಿಳಿಸಿದ್ದಾರೆ.



"ಸದ್ಯ ಕೋವಿಡ್‌-19 ಸಾಂಕ್ರಾಮಿಕ ಸೋಂಕು ನನಗೆ ತುಂಬಾ ಆತಂಕವನ್ನು ಉಂಟುಮಾಡಿದೆ. ಕಠಿಣ ಪರಿಶ್ರಮ ಪಟ್ಟು ಬಲಿಷ್ಠ ಎದುರಾಳಿಯನ್ನು ಸೋಲಿಸಬೇಕು. ಈ ಹಿಂದೆಯೂ ಇದನ್ನೇ ಮಾಡಿದ್ದೆ, ಆದರೆ ಇದೀಗ ಮಾರಣಾಂತಿಂಕ ವೈರಸ್‌ನಿಂದ ನನ್ನನ್ನು ಮಾನಸಿಕವಾಗಿ ಕುಗ್ಗುತ್ತಿದ್ದೇನೆ. ಇಡೀ ಜಗತ್ತು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ," ಎಂದು ಸಿಂಧು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಜಗತ್ತಿನಲ್ಲಿ ಪ್ರಸ್ತುತ ಇರುವ ಸನ್ನಿವೇಶ ಹಾಗೂ ಋಣಾತ್ಮಕ ಭಾವನೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದ ಸಿಂಧು, ಇಡೀ ಪ್ರಪಂಚಕ್ಕೆ ಪ್ರಸ್ತುತ ಇರುವ ಸನ್ನಿವೇಶ ಅರ್ಥವಾಗಲು ಈ ರೀತಿ ಬರೆದಿದ್ದಾರೆಂದು ಅವರು ಹೇಳಿಕೆಯನ್ನು ಸಂಪೂರ್ಣವಾಗಿ ಓದಿದರೆ ಅರ್ಥವಾಗುತ್ತದೆ.

ರಾಹುಲ್‌, ಮಯಾಂಕ್‌, ವೇದಾ ಸೇರಿದಂತೆ 31 ಮಂದಿ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ!

"ಡೆನ್ಮಾರ್ಕ್‌ ಓಪನ್‌ ಬಳಿಕ ನಾನು ನಿವೃತ್ತಿಯನ್ನು ಪಡೆಯುತ್ತಿಲ್ಲ. ಆದರೆ, ಮುಂದಿನ ಏಷ್ಯಾ ಕಪ್‌ಗೆ ಬಲಿಷ್ಠವಾಗಿ ಅಂಗಣಕ್ಕೆ ಮರಳುತ್ತೇನೆ ಹಾಗೂ ಇದಕ್ಕಾಗಿ ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ. ಕೊರೊನಾ ವೈರಸ್‌ ಕುರಿತು ಇರುವ ಅಸಡ್ಡೆ, ಋಣಾತ್ಮಕ ಅಂಶಗಳು, ಕೆಟ್ಟ ಆಲೋಚನೆಗಳಿಂದ ನಿವೃತ್ತಿ ಪಡೆಯುತ್ತೇನೆ ಹಾಗೂ ಮುಂದಿನ ಟೂರ್ನಿಗಳಿಗೆ ಶಕ್ತಿಯುತವಾಗಿ ಮರಳುತ್ತೇನೆ," ಎಂದು ಪಿ.ವಿ ಸಿಂಧು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌