ಆ್ಯಪ್ನಗರ

70 ವರ್ಷದ ವೃದ್ಧನಿಗೆ ಪಿವಿ ಸಿಂಧೂ ಅಪಹರಿಸಿ ಮದುವೆಯಾಗುವ ಆಸೆಯಂತೆ!

ತಮಿಳುನಾಡಿನ ರಾಮನಾಥಪುರಂ ಜಿಲ್ಲಾಧಿಕಾರಿ ಕಚೇರಿಗೆ ವಿಚಿತ್ರವಾದ ಮನವಿಯೊಂದು ಬಂದಿದೆ. 70ರ ವೃದ್ಧನೋರ್ವ ಭಾರತದ ಬ್ಯಾಡ್ಮಿಂಟನ್ ಚೆಲುವೆ ಪಿವಿ ಸಿಂಧೂ ಅಪಹರಿಸಿ ಮದುವೆಯಾಗುವ ಇರಾದೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 17 Sep 2019, 12:33 pm
ಚೆನ್ನೈ: ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಮುಡಿಗೇರಿಸಿರುವ ಭಾರತದ ಅಗ್ರಮಾನ್ಯ ತಾರೆ ಪಿವಿ ಸಿಂಧೂ ಎಲ್ಲರ ಮನೆ ಮಾತಾಗಿದ್ದಾರೆ. 24ರ ಹರೆಯದ ಸಿಂಧೂ ದೇಶದೆಲ್ಲೆಡೆ ಅಪಾರ ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ.
Vijaya Karnataka Web pv-sindhu-glamour


ಈ ನಡುವೆ 70 ವರ್ಷದ ವೃದ್ಧ ವ್ಯಕ್ತಿಯೊಬ್ಬ ಬ್ಯಾಡ್ಮಿಂಟನ್ ತಾರೆ ಸಿಂಧೂ ಅವರನ್ನು ಅಪಹರಿಸಿ ಮದುವೆಯಾಗುವುದಾಗಿ ಇರಾದೆ ವ್ಯಕ್ತಪಡಿಸಿದ್ದಾರೆ. ಹೌದು, ನೀವಿದನ್ನು ನಂಬಲೇಬೇಕು. ತಮಿಳುನಾಡಿನ ರಾಮನಾಥಪುರಂ ಜಿಲ್ಲಾಧಿಕಾರಿ ಕಚೇರಿಗೆ ಇಂತಹದೊಂದು ಅರ್ಜಿ ಸಲ್ಲಿಕೆಯಾಗಿದೆ.

ಭಾರತದ ಓಟದ ರಾಣಿ ಪಿಟಿ ಉಷಾ ಮಡಿಲಲ್ಲಿ ಕುಳಿತ ಈ ಮುದ್ದಾದ ಹುಡುಗಿ ಯಾರು?

ಸ್ವತ: ರಾಮನಾಥಪುರಂ ಜಿಲ್ಲಾಧಿಕಾರಿ ವೀರ ರಾಘವ ರಾವೂ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಯಾಕೆ ಕಾಗದದ ಹಾಳೆಯಲ್ಲಿ ಸಿಂಧೂ ಜತೆಗೆ ತಮ್ಮ ಭಾವಚಿತ್ರವನ್ನು ಅಂಟಿಸಿದ್ದಾರೆ.

ರಾಮನಾಥಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿ ವಾರವೂ ನಡೆಯುವ ಸಾಪ್ತಾಹಿಕ ಪರಿಹಾರ ಸಭೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಈ ಸಭೆಯಲ್ಲಿ ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡು ಪರಿಹಾರವನ್ನು ಗಿಟ್ಟಿಸಿಕೊಳ್ಳುತ್ತಾರೆ.

ರಾಷ್ಟ್ರಗೀತೆ ಆಲಿಸಿದಾಗ ಕಣ್ಣೀರನ್ನು ತಡೆದುಕೊಳ್ಳಲಾಗಲಿಲ್ಲ: ಪಿವಿ ಸಿಂಧೂ

ಇಂತಹದೊಂದು ಗಂಭೀರ ಸಭೆಯಲ್ಲಿ ವೃದ್ಧ ವಿಲಕ್ಷಣ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ನೀಡಿರುವ ಕಾರಣವನ್ನು ಕೇಳಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

2004 ಎಪ್ರಿಲ್ 4ರಂದು ಜನಿಸಿದ್ದೇನೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ವೃದ್ದ ವೇಷಧಾರಿಯಾಗಿರುವ ತಾವು ಎಲ್ಲ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಇಳಿದ ಅವತಾರ ಪುರುಷ ಎಂದು ಹೇಳಿಕೊಳ್ಳುತ್ತಾರೆ. ನನ್ನಂತಹ 16 ವರ್ಷದ ಬಾಲಕನಿಗೆ ಉತ್ತಮ ಜೋಡಿಯಾಗಬಲ್ಲ ಏಕೈಕ ಹುಡುಕಿ ಸಿಂಧೂ ಅವರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಈ ಎಲ್ಲ ಕಾರಣಗಳನ್ನು ಓದಿದ ಜಿಲ್ಲಾಧಿಕಾರಿ ಆಶ್ಚರ್ಯ ಚಕಿತಗೊಂಡಿದ್ದಾರೆ. ಸದ್ಯ ಈ ಹಾಸ್ಯ ಕಥೆಯನ್ನು ಅರಿತ ಬಳಿಕ ಸ್ವತ: ಪಿವಿ ಸಿಂಧೂ ಉತ್ತರ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌