ಬೆಂಗಳೂರು : ಅಜ್ಲಾನ್ ಶಾ ಕಪ್ ಟೂರ್ನಿ ಮುಂಬರುವ ಪುರುಷರ ಹಾಕಿ ವಿಶ್ವ ಲೀಗ್ ಸೆಮಿಫೈನಲ್ಗೆ ಸಜ್ಜಾಗಲು ಅತ್ಯುತ್ತಮ ವೇದಿಕೆ ಎಂದು ಭಾರತ ತಂಡದ ಮಿಡ್ಫೀಲ್ಡರ್ ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.
26ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಟೂರ್ನಿಗೆ ಮುಂದಿನ ವಾರ ಹಿರಿಯರ ಭಾರತ ತಂಡ ಪ್ರಕಟವಾಗಲಿದ್ದು, ಸಂಭಾವ್ಯ ತಂಡ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದೆ.
ಮಂಗಳವಾರ ಪ್ರತಿಕ್ರಿಯಿಸಿರುವ ಮನ್ಪ್ರೀತ್ ಸಿಂಗ್, ''ಪ್ರಸಕ್ತ ಆವೃತ್ತಿಯಲ್ಲಿ ಭಾರತದ ಜತೆಗೆ ಗ್ರೇಟ್ ಬ್ರಿಟನ್, ಆಸ್ಪ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಜಪಾನ್ ಅಗ್ರಸ್ಥಾನ ಪಡೆಯಲು ತೀವ್ರ ಹೋರಾಟ ನಡೆಸಲಿವೆ. ಗ್ರೇಟ್ ಬ್ರಿಟನ್ ಮತ್ತು ಆಸ್ಪ್ರೇಲಿಯಾ ಯುವ ಆಟಗಾರರೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಅಂತಿಮ ಆಯ್ಕೆ ತಂಡವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಈ ಟೂರ್ನಿ ಯುವ ಆಟಗಾರರಿಗೆ ತಮ್ಮ ಪ್ರದರ್ಶನ ಒರೆಗೆ ಹಚ್ಚಲು ಸಮರ್ಥ ವೇದಿಕೆಯಾಗಿದೆ. ಅಲ್ಲಿನ ವಾತಾವರಣ ಸಹ ಉತ್ತಮವಾಗಿದ್ದು, ಎಲ್ಲಾ ಪ್ರೇಕ್ಷ ಕರನ್ನು ಸೆಳೆಯಲಿದೆ ಮತ್ತು ಅಗ್ರಮಾನ್ಯ ತಂಡಗಳು ಇಲ್ಲಿ ಆಡಿರುವ ಕಾರಣ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ,'' ಎಂದು ಮನ್ಪ್ರೀತ್ ಸಿಂಗ್ ತಿಳಿಸಿದ್ದಾರೆ.