ಆ್ಯಪ್ನಗರ

ಸಿಂಧೂ, ಸಮೀರ್‌, ಪ್ರಣಯ್‌ ಹೋರಾಟ ಮುಕ್ತಾಯ

ಆಸ್ಪ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ವಿವಿಧ ವಿಭಾಗಗಳ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯಶಾಲಿಗಳಾಗಿದ್ದ ಭಾರತದ ಸ್ಪರ್ಧಿಗಳು 2ನೇ ಸುತ್ತಿನಲ್ಲಿ ಹಳಿ ತಪ್ಪಿ ಸ್ಪರ್ಧೆಗೆ ಎಳ್ಳು ನೀರು ಬಿಟ್ಟಿದ್ದಾರೆ.

Vijaya Karnataka 7 Jun 2019, 5:00 am
ಐಎಎನ್‌ಎಸ್‌ ಸಿಡ್ನಿ
Vijaya Karnataka Web p v sindhu


ಆಸ್ಪ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ವಿವಿಧ ವಿಭಾಗಗಳ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯಶಾಲಿಗಳಾಗಿದ್ದ ಭಾರತದ ಸ್ಪರ್ಧಿಗಳು 2ನೇ ಸುತ್ತಿನಲ್ಲಿ ಹಳಿ ತಪ್ಪಿ ಸ್ಪರ್ಧೆಗೆ ಎಳ್ಳು ನೀರು ಬಿಟ್ಟಿದ್ದಾರೆ.

ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧೂ ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ನಿಚಾನ್‌ ಜಿಂದಪೋಲ್‌ಗೆ 19-21, 18-21 ನೇರ ಗೇಮ್‌ಗಳಿಂದ ಶರಣಾದರು. ಸಿಂಧೂ ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಕೊಯಿರುನ್ನೀಸಾ ವಿರುದ್ಧ ಗೆದ್ದಿದ್ದರು.

ಪುರುಷರ ಸಿಂಗಲ್ಸ್‌ ಸ್ಪರ್ಧೆಗಳಲ್ಲಿ 6ನೇ ಶ್ರೇಯಾಂಕದ ಸಮೀರ್‌ ವರ್ಮಾ ಕೂಡ ಸೋತು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಭಾರತೀಯ ಆಟಗಾರ 2ನೇ ಸುತ್ತಿನ ಹಣಾಹಣಿಯಲ್ಲಿ 16-21, 21-17, 13-21 ಗೇಮ್‌ಗಳಿಂದ ತೈವಾನ್‌ನ ವಾಂಗ್‌ ಝು ವೀ ಎದುರು ಪರಾಭವಗೊಂಡರು.

ಇದೇ ವೇಳೆ, ಬಿ.ಸಾಯ್‌ ಪ್ರಣೀತ್‌ ಇಂಡೊನೇಷ್ಯಾದ ಅಂಥೋನಿ ಸಿನಿಸುಕಾ ಜಿಂಟಿಂಗ್‌ ಎದುರು 23-25, 9-21 ಗೇಮ್‌ಗಳಿಂದ ಮಂಡಿಯೂರಿದರೆ, ಅನುಭವಿ ಆಟಗಾರ ಪರುಪಳ್ಳಿ ಕಶ್ಯಪ್‌ 17-21, 22-20, 14-21 ಗೇಮ್‌ಗಳಿಂದ ಚೀನಾದ ಲಿನ್‌ ಡ್ಯಾನ್‌ಗೆ ಶರಣಾದರು. 2 ಒಲಿಂಪಿಕ್ಸ್‌ ಮತ್ತು 5 ವಿಶ್ವ ಚಾಂಪಿಯನ್‌ಷಿಪ್‌ ಚಿನ್ನದ ಪದಕಗಳ ವಿಜೇತ ಡ್ಯಾನ್‌ ಇದಕ್ಕೂ ಮೊದಲು ಭಾರತದ ಎಚ್‌.ಎಸ್‌.ಪ್ರಣಯ್‌ ವಿರುದ್ಧ 21-18, 21-19 ಗೇಮ್‌ಗಳಿಂದ ಗೆದ್ದು 2ನೇ ಸುತ್ತು ಪ್ರವೇಶಿಸಿದ್ದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ರೆಡ್ಡಿ ಕೂಡ ಸೋತು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌