ಆ್ಯಪ್ನಗರ

ಭಾರತ ನಿರಾಳ; ಪಾಕಿಸ್ತಾನದಿಂದ ಡೇವಿಸ್ ಕಪ್ ತಾಣ ಸ್ಥಳಾಂತರ

ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಡೇವಿಸ್ ಕಪ್ ತಾಣವನ್ನು ಸ್ಥಳಾಂತರ ಮಾಡಲಾಗಿದೆ. ಈ ಸಂಬಂಧ ಐದು ದಿನಗಳೊಳಗೆ ತಟಸ್ಥ ತಾಣವನ್ನು ಆಯ್ಕೆ ಮಾಡುವಂತೆ ಅಂತಾರಾಷ್ಟ್ರೀಯ ಟೆನಿಸ್ ಫೇಡರೇಷನ್ ಸೂಚನೆ ನೀಡಿದೆ.

Vijaya Karnataka Web 5 Nov 2019, 10:03 am
ಮುಂಬಯಿ: ಪಾಕಿಸ್ತಾನದಿಂದ ಡೇವಿಸ್ ಕಪ್ ತಾಣವನ್ನು ಸ್ಥಳಾಂತರ ಮಾಡಲಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಟೆನಿಸ್ ಫೇಡರೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಭಾರತೀಯ ತಂಡವು ನಿಟ್ಟುಸಿರು ಬಿಡುವಂತಾಗಿದೆ.
Vijaya Karnataka Web ಟೆನಿಸ್


ಭದ್ರತಾ ಕಾರಣಗಳಿಂದಾಗಿ ಡೇವಿಸ್ ಕಪ್ ತಾಣವನ್ನು ತಟಸ್ಥ ಸ್ಥಾನಕ್ಕೆ ಬದಲಾಯಿಸುವಂತೆ ಅಂತಾರಾಷ್ಟ್ರೀಯ ಟೆನಿಸ್ ಫೇಡರೇಷನ್ ಸೂಚನೆ ನೀಡಿದೆ.

ಚೀನಾ ಓಪನ್‌ನಿಂದ ಹಿಂದೆ ಸರಿದ ಕಿಡಂಬಿ ಶ್ರೀಕಾಂತ್‌!

ಟೆನಿಸ್ ಕಾರ್ಯ ನಿರ್ವಾಹಕ ಮಂಡಳಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ಮೊದಲು ಭಾರತ ಹಾಗೂ ಪಾಕಿಸ್ತಾನ ನಡುವಣ ಡೇವಿಸ್ ಕಪ್ ಏಷ್ಯಾ/ಒಷಿಯಾನಿಯಾ ಗುಂಪಿನ 1 ಹಣಾಹಣಿಯು ಸೆಪ್ಟೆಂಬರ್ 14 ಹಾಗೂ 15ರಂದು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿತ್ತು.

ಇದೀಗ ಭದ್ರತಾ ಕಳವಳದ ಹಿನ್ನಲೆಯಲ್ಲಿ ನವೆಂಬರ್ 29-30ಕ್ಕೆ ಮುಂದೂಡಲಾಗಿದೆ. ಅಲ್ಲದೆ ತಟಸ್ಥ ತಾಣವನ್ನು ಐದು ದಿನಗಳೊಳಗೆ ನಿರ್ಧರಿಸುವಂತೆ ಪಾಕ್‌ಗೆ ಸೂಚನೆ ನೀಡಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎಂಟು ಬಾರಿಯ ಚಾಂಪಿಯನ್ ಭಾರತ

ಈ ಮೊದಲು ಅಖಿಲ ಭಾರತ ಟೆನಿಸ್ ಸಂಸ್ಥೆಯು, ಪಾಕಿಸ್ತಾನ ವಿರುದ್ಧದ ಡೇವಿಸ್ ಕಪ್ ತಾಣವನ್ನು ಬದಲಾಯಿಸುವಂತೆ ಬೇಡಿಕೆ ಮುಂದಿಟ್ಟಿತ್ತು.

ಆಟಗಾರರ ಭದ್ರತೆಗೆ ಮೊದಲ ಆದ್ಯತೆಯಾಗಿದೆ. ಭದ್ರತೆಯ ಬಗ್ಗೆ ವಿಮರ್ಶೆಯ ಬಳಿಕ ಐಟಿಎಫ್ ಸ್ವತಂತ್ರ ಸಲಹಾ ಸಮಿತಿಯು ನಿರ್ಧಾರವನ್ನು ಪ್ರಕಟಿಸಿದೆ.

ರಾಣಿ ರಾಂಪಾಲ್ ಮ್ಯಾಜಿಕ್ ಗೋಲು; 3ನೇ ಬಾರಿಗೆ ಒಲಿಂಪಿಕ್ ಅರ್ಹತೆ ಪಡೆದ ಭಾರತೀಯ ವನಿತೆಯರು

ಕಳೆದೊಂದು ದಶಕದಿಂದ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಆತಿಥ್ಯದ ಡೇವಿಸ್ ಕಪ್ ತಾಣವನ್ನು ತಟಸ್ಥ ತಾಣಗಳಿಗೆ ಸ್ಥಳಾಂತರ ಮಾಡಲಾಗುವ ಪ್ರವೃತ್ತಿ ಕಂಡುಬಂದಿದೆ. ಈ ಮಧ್ಯೆ 2017ರಲ್ಲಿ ಇರಾನ್ ವಿರುದ್ಧ ಪಂದ್ಯಾವಳಿಯನ್ನು ಪಾಕ್‌ನಲ್ಲೇ ಆಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌