ಆ್ಯಪ್ನಗರ

ಪ್ರತಿಭಾನ್ವೇಷಣೆಯಲ್ಲಿ ಗೆದ್ದವರಿಗೆ ದ್ರಾವಿಡ್‌, ಛೆಟ್ರಿ ವಿದ್ಯಾರ್ಥಿವೇತನ

ನಗರದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಇಬ್ಬರು ವಿಜೇತರು, ಬಿಎಫ್‌ಸಿ ಫುಟ್ಬಾಲ್‌ ಸ್ಕೂಲ್‌ನಲ್ಲಿ ತರಬೇತಿ ಪಡೆಯಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಬೆಂಗಳೂರು ಎಫ್‌ಸಿ ರಾಯಭಾರಿ ರಾಹುಲ್‌ ದ್ರಾವಿಡ್‌ ಹಾಗೂ ಕ್ಲಬ್‌ ನಾಯಕ ಸುನಿಲ್‌ ಛೆಟ್ರಿ ಅವರಿಂದ ಒಂದು ವರ್ಷದ ದೀರ್ಘಾವಧಿಗೆ ವಿದ್ಯಾರ್ಥಿವೇತನ ಪಡೆಯಲಿದ್ದಾರೆ.

Vijaya Karnataka 29 Apr 2018, 5:00 am
ಬೆಂಗಳೂರು : ನಗರದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಆಯ್ಕೆಯಾದ ಇಬ್ಬರು ವಿಜೇತರು, ಬಿಎಫ್‌ಸಿ ಫುಟ್ಬಾಲ್‌ ಸ್ಕೂಲ್‌ನಲ್ಲಿ ತರಬೇತಿ ಪಡೆಯಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮತ್ತು ಬೆಂಗಳೂರು ಎಫ್‌ಸಿ ರಾಯಭಾರಿ ರಾಹುಲ್‌ ದ್ರಾವಿಡ್‌ ಹಾಗೂ ಕ್ಲಬ್‌ ನಾಯಕ ಸುನಿಲ್‌ ಛೆಟ್ರಿ ಅವರಿಂದ ಒಂದು ವರ್ಷದ ದೀರ್ಘಾವಧಿಗೆ ವಿದ್ಯಾರ್ಥಿವೇತನ ಪಡೆಯಲಿದ್ದಾರೆ.
Vijaya Karnataka Web dravid chhetri hand scholarships to boost play the pros winners
ಪ್ರತಿಭಾನ್ವೇಷಣೆಯಲ್ಲಿ ಗೆದ್ದವರಿಗೆ ದ್ರಾವಿಡ್‌, ಛೆಟ್ರಿ ವಿದ್ಯಾರ್ಥಿವೇತನ


ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬೂಸ್ಟ್‌ ಪ್ಲೇ ದಿ ಪ್ರೊಸ್‌ ಕೂಟದಲ್ಲಿ ಹತ್ತು ವರ್ಷದ ಗುರುಕಿರಣ್‌ ಮತ್ತು 13 ವರ್ಷದ ಎನ್‌.ಮೋನಿಕಾರನ್ನು ಕ್ಲಬ್‌ನ ಯೂತ್‌ ತರಬೇತಿ ಸಿಬ್ಬಂದಿ ಆಯ್ಕೆ ಮಾಡಿದ್ದು, ಇವರಿಬ್ಬರು ಒಂದು ವರ್ಷ ಬಿಎಫ್‌ಸಿ ಕೋಚ್‌ಗಳ ಅಡಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಈ ಕೂಟದಲ್ಲಿ ಪಾಲ್ಗೊಂಡಿದ್ದ ರಾಹುಲ್‌ ದ್ರಾವಿಡ್‌ ಮತ್ತು ಛೆಟ್ರಿ ಸುಮಾರು 200ಕ್ಕೂ ಅಧಿಕ ಯುವ ಉತ್ಸಾಹಿಗಳೊಂದಿಗೆ ಕ್ರೀಡೆಯಲ್ಲಿ ಫಿಟ್ನೆಸ್‌ ಮತ್ತು ಮಾನಸಿಕ ಕಠಿಣತೆ ಹಾಗೂ ಇತರ ವಿಷಯಗಳ ಬಗ್ಗೆ ಸಂವಾದ ನಡೆಸಿದರು.

ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ದ್ರಾವಿಡ್‌, ''ಮಕ್ಕಳ ಆಸಕ್ತಿ ಮತ್ತು ಪೋಷಕರು ಸಹ ಕ್ರೀಡೆಯಲ್ಲಿ ಪಾಲ್ಗೊಂಡಿರುವುದನ್ನು ನೋಡುವುದೇ ಒಂದು ಅದ್ಭುತ. ಕ್ರೀಡೆಯಲ್ಲಿ ದೀರ್ಘಾವಧಿಗೆ ಮುಂದುವರಿಯುವವರಿಗೆ ಚಿಕ್ಕಂದಿನಿಂದಲೇ ಕ್ರೀಡೆಯ ಬಗ್ಗೆ ಶಿಕ್ಷ ಣ ನೀಡಬೇಕಿದೆ. ತಳಮಟ್ಟದಲ್ಲಿ ಬಲವಾಗಿ ಅಭಿವೃದ್ಧಿಪಡಿಸುವ ಯೋಜನೆಗಳು ಸೀನಿಯರ್‌ ಅಥವಾ ರಾಷ್ಟ್ರೀಯ ತಂಡದಲ್ಲಿ ಹೇಗೆ ಯಶಸ್ವಿಯಾಗುತ್ತದೆ ಎಂಬುದನ್ನು ನಿರ್ಧರಿಸುತ್ತವೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌