ಆ್ಯಪ್ನಗರ

ಅಥ್ಲೆಟಿಕ್ಸ್‌: ವಿಶ್ವ ಚಾಂಪಿಯನ್‌ಷಿಪ್‌ಗೆ ದೂತೀ ಚಾಂದ್‌ ಆಯ್ಕೆ

ದೋಹಾದಲ್ಲಿ ಸೆಪ್ಟೆಂಬರ್‌ 27ರಂದು ಆರಂಭವಾಗಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ 25 ಮಂದಿ ಅಥ್ಲೀಟ್‌ಗಳ ಪಟ್ಟಿಗೆ ಸ್ಪ್ರಿಂಟರ್‌ ದೂತೀ ಚಾಂದ್‌ ಆಯ್ಕೆಯಾಗಿದ್ದಾರೆ.

Vijaya Karnataka Web 10 Sep 2019, 9:45 pm
ಹೊಸದಿಲ್ಲಿ, ಸೆಪ್ಟೆಂಬರ್‌ 10: ಭಾರತ ಚಾಂಪಿಯನ್‌ ಸ್ಪ್ರಿಂಟನ್‌ ದೂತೀ ಚಾಂದ್‌, ಸೆಪ್ಟೆಂಬರ್‌ 27ರಂದು ದೋಹಾದಲ್ಲಿ ಆರಂಭವಾಗಲಿರುವ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.
Vijaya Karnataka Web Dutee Chand 2019.


"ದೋಹಾ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ 25 ಮಂದಿ ಅಥ್ಲೀಟ್‌ಗಳ ಪಟ್ಟಿಗೆ ಆಯ್ಕೆಯಾಗಿದ್ದೇನೆ. ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 27ರಂದು ಆರಂಭವಾಗಲಿದ್ದು, ಹೆಚ್ಚು ವೇಗ ಮತ್ತು ಅದೃಷ್ಟ ನನ್ನ ಕೈ ಹಿಡಿಯಲೆಂದು ಹಾರೈಸಿ," ಎಂದು ದೂತೀ ಚಾಂದ್‌ ಟ್ವೀಟ್‌ ಮಾಡಿದ್ದಾರೆ.

ಬಿಯರ್‌ ಕುಡಿದ ಅಮಲಿನಲ್ಲಿ ಮೋಸದಾಟದ ಗುಟ್ಟನ್ನು ಬಾಯ್ಬಿಟ್ಟಿದ್ದ ಡೇವಿಡ್‌ ವಾರ್ನರ್‌!


23 ವರ್ಷದ ಯುವ ಸ್ಪ್ರಿಂಟರ್‌ ಪ್ರಸಕ್ತ ಸಾಲಿನಲ್ಲಿ ಅದ್ಭುತ ಲಯದಲ್ಲಿದ್ದು, ನಾಪೋಲಿಯಲ್ಲಿ ಇದೇ ವರ್ಷ ನಡೆದ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. ಮಹಿಳೆಯರ 100 ಮೀ. ಸ್ಪ್ರಿಂಟ್‌ನಲ್ಲಿ 11.32 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದ ಚಾಂದ್‌ ಚೆನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇನ್ನು 100 ಮೀ. ಓಟದಲ್ಲಿ 11.24 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ರಾಷ್ಟ್ರೀಯ ದಾಖಲೆ ಕೂಡ ಚಾಂದ್‌ ಅವರ ಹೆಸರಿನಲ್ಲಿದೆ.

ಪ್ರಥಮ ಅನಧಿಕೃತ ಟೆಸ್ಟ್‌: ಇಂಡಿಯಾ 'ಎ' ಮುಷ್ಠಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 'ಎ' ತಂಡ

"ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಾಪೋಲಿಯಲ್ಲಿ ನಡೆದ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 11.32 ಸೆಕೆಂಡ್‌ಗಳಲ್ಲಿ 100 ಮೀ. ಡ್ಯಾಷ್‌ ರೇಸ್‌ ಮುಗಿಸಿ ಚಿನ್ನ ಗೆಲ್ಲುವ ಮೂಲಕ ದಾಖಲೆ ಬರೆದಿದ್ದೇನೆ," ಎಂದು ಚಾಂದ್‌ ಈ ಮೊದಲು ಟ್ವೀಟ್‌ ಮಾಡಿದ್ದರು.

ಇನ್ನು ಇದೇ ವರ್ಷ ತಮ್ಮ ಭರ್ಜರಿ ಲಯದ ಜೊತೆಗೆ ವಿವಾದದ ಮೂಲಕವೂ ಚಾಂದ್‌ ಭಾರಿ ಸುದ್ದಿಯಾಗಿದ್ದರು, ತಾವು ಸಲಿಂಗಿ ಎಂಬ ಅಚ್ಚರಿಯ ಸಂಗತಿಯನ್ನು ಹೊರಹಾಕಿದ್ದ ದೂತಿ ಚಾಂದ್‌, ತಮ್ಮ ಕುಟುಂಬದವರಿಂದ ತಮಗೆ ಮತ್ತು ತಮ್ಮ ಪ್ರೇಯಸಿಗೆ ಕಿರುಕುಳವಾಗುತ್ತಿದೆ ಎಂದು ದೂರಿದ್ದರು.

ಅಫಘಾನಿಸ್ತಾನ ವಿರುದ್ಧದ ಟೆಸ್ಟ್‌ ಸೋಲಿನ ಬಳಿಕ ಅಚ್ಚರಿಯ ಹೇಳಿಕೆ ನೀಡಿದ ಶಕಿಬ್‌ ಅಲ್‌ ಹಸನ್‌

"ಇದು ನನ್ನ ವೈಯಕ್ತಿಕ ವಿಚಾರ. ಇದು ಕೆಲ ತಿಂಗಳುಗಳಲ್ಲಿ ಸರಿ ಹೋಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಅಥ್ಲೀಟ್‌ಗಳು ಸಲಿಂಗಿಗಳು. ಜೀವನದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವಂತಹ ಜೊತೆಗಾರನ ಅಗತ್ಯವಿರುತ್ತದೆ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಜೊತೆಯಾಗಿ ಇರಬೇಕೆಂದು ನಿರ್ಧರಿಸಿದ್ದೇವೆ. ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡುವುದಕ್ಕೆ ನನಗೆ ಆಕೆಯೇ ಸ್ಫೂರ್ತಿ," ಎಂದು ಚಾಂದ್‌ ಹೇಳಿದ್ದರು.

ಪ್ರೋ ಕಬಡ್ಡಿ ಲೀಗ್‌ ಸೀಸನ್‌ 7: ನಾಕ್‌ಔಟ್‌ ಪಂದ್ಯಗಳಿಗೆ ಅಹಮದಾಬಾದ್‌ ಆತಿಥ್ಯ

"ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ಇದಕ್ಕೆ ಯಾರೂ ಕೂಡ ಭರವಸೆ ನೀಡಲಾರರು. ನನ್ನ ತರಬೇತಿ ಕಡೆಗೆ ಗಮನ ನೀಡಲಿದ್ದೇನೆ. 2020ರ ಟೋಕಿಯೊ ಒಲಿಂಪಿಕ್ಸ್‌ ನನ್ನ ಗುರಿ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕಡೆಗೆ ಸಿದ್ದತೆ ನಡೆಸುತ್ತಿದ್ದೇನೆ," ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌