ಆ್ಯಪ್ನಗರ

ರಸ್ತೆ ಅಪಘಾತ: ಫುಟ್ಬಾಲ್‌ ಆಟಗಾರ್ತಿ ಸಾವು

ರಾಜ್ಯದ ಪ್ರತಿಭಾನ್ವಿತ ಫುಟ್ಬಾಲ್‌ ಆಟಗಾರ್ತಿ ತೇಜಸ್ವಿನಿ, ನಗರದ ಪಿಇಎಸ್‌ ಕಾಲೇಜು ಫ್ಲೈಓವರ್‌ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

Vijaya Karnataka 10 Apr 2018, 10:50 am
ಬೆಂಗಳೂರು: ರಾಜ್ಯದ ಪ್ರತಿಭಾನ್ವಿತ ಫುಟ್ಬಾಲ್‌ ಆಟಗಾರ್ತಿ ತೇಜಸ್ವಿನಿ, ನಗರದ ಪಿಇಎಸ್‌ ಕಾಲೇಜು ಫ್ಲೈಓವರ್‌ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. 2015ರಲ್ಲಿ ಅಸ್ಸಾಂನಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ತೇಜಸ್ವಿನಿ, 2013-14ರಿಂದ ಬೆಂಗಳೂರು ಜಿಲ್ಲಾ ಫುಟ್ಬಾಲ್‌ ತಂಡವನ್ನು ಪ್ರತಿನಿಧಿಸುತ್ತಿದ್ದರು. ರಾಷ್ಟ್ರೀಯ ಕೋಚ್‌ ಚಿತ್ರಾ ಗಂಗಾಧರ್‌ ಅವರ ಗರಡಿಯಲ್ಲಿ ಫುಟ್ಬಾಲ್‌ ವೃತ್ತಿ ಬದುಕು ಆರಂಭಿಸಿದ್ದ ತೇಜಸ್ವಿನಿ ಪ್ರತಿಭಾವಂತ ಆಟಗಾರ್ತಿಯಾಗಿದ್ದರು.
Vijaya Karnataka Web acc


ತೇಜಸ್ವಿನಿ ಅವರ ಸಾವಿಗೆ ಸಾಯ್‌, ಕರ್ನಾಟಕ ಫುಟ್ಬಾಲ್‌ ಸಂಸ್ಥೆ ಮತ್ತು ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಸಂತಾಪ ವ್ಯಕ್ತಪಡಿಸಿವೆ.ಅಂತ್ಯಕ್ರಿಯೆಗಾಗಿ ತೇಜಸ್ವಿನಿ ಮೃತದೇಹವನ್ನು ತವರೂರಾದ ಹಾಸನಕ್ಕೆ ಸೋಮವಾರ ಕೊಂಡೊಯ್ಯಲಾಗಿದೆ. ''ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದ ತೇಜಸ್ವಿನಿ ಇತ್ತೀಚೆಗೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ನಿಜವಾಗಿಯೂ ದಿಗ್ಭ್ರಮೆ ಹಾಗೂ ಬೇಸರ ತಂದಿದೆ,'' ಎಂದು ತೇಜಸ್ವಿನಿ ಕೋಚ್‌ ಚಿತ್ರಾ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌