ಆ್ಯಪ್ನಗರ

ರಾಷ್ಟ್ರೀಯ ರ‍್ಯಾಲಿಯಲ್ಲಿ ದುರಂತ: ರೇಸರ್‌ ಗೌರವ್‌ ಗಿಲ್‌ ಕಾರಿಗೆ ಸಿಕ್ಕ ಮೂವರ ದುರ್ಮರಣ!

ಕಳೆದ ತಿಂಗಳಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾಗುವ ಮೂಲಕ ದೇಶದ ಮೋಟಾರ್‌ ಸ್ಪೋರ್ಟ್ಸ್‌ ಕ್ಷೇತ್ರದಲ್ಲಿ ನವ ಭಾಷ್ಯ ಬರೆದ ಗೌರವ್‌ ಗಿಲ್‌, ರ‍್ಯಾಲಿ ಆಫ್‌ ಜೋದ್ಫುರ್‌ ರೇಸ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಮೂವರ ದುರ್ಮರಣಕ್ಕೆ ಕಾರಣರಾಗಿರುವುದು ದುರದೃಷ್ಟವೇ ಸರಿ.

Vijaya Karnataka Web 22 Sep 2019, 8:15 pm
ಬಾರ್ಮರ್‌ (ರಾಜಸ್ಥಾನ): ರಾಷ್ಟ್ರೀಯ ರ‍್ಯಾಲಿ ರೇಸ್‌ನ ಒಂದು ಭಾಗವಾಗಿರುವ ರ‍್ಯಾಲಿ ಆಫ್‌ ಜೋದ್ಪುರ್‌ ರೇಸ್‌ನಲ್ಲಿ ನಡೆದ ಅಪಘಾತದಲ್ಲಿ ಮೂವರ ದುರ್ಮರಣಕ್ಕೆ ಕಾರಣರಾದ ಹಿನ್ನೆಲೆ ಅರ್ಜುನ ಪ್ರಶಸ್ತಿ ವಿಜೇತ ರೇಸರ್‌ ಗೌರವ್‌ ವಿರುದ್ಧ ಸ್ಥಳೀಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Vijaya Karnataka Web Gaurav Gill accident 2019


ರ‍್ಯಾಲಿ ರೇಸ್ ಆಯೋಜಿಸಿದ್ದ ಭಾರತೀಯ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗಳ ಒಕ್ಕೂಟ (ಎಫ್‌ಎಮ್‌ಎಸ್‌ಸಿಐ) ಮತ್ತು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಮ್ಯಾಕ್ಸ್‌ಪೆರಿಯನ್ಸ್‌, ಮಹೀಂದ್ರ, ಜೆಕೆ ಟೈರ್ಸ್‌ ಮತ್ತು ಎಮ್‌ಆರ್‌ಎಫ್‌ ಟೈರ್ಸ್‌ ಸಂಸ್ಥೆಗಳ ವಿರುದ್ಧವೂ ದೂರು ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಇನ್ನೂ 2 ತಿಂಗಳು ಧೋನಿ ಕ್ರಿಕೆಟ್‌ ಆಡೋಲ್ಲ ಯಾಕೆ ಗೊತ್ತಾ?!

ಇಲ್ಲಿನ ಸಂಮ್ದಾರಿ ಪೊಲೀಸ್‌ ಠಾಣೆಯಲ್ಲಿ ಮೃತ ಕುಟುಂಬಸ್ತರ ಹಿರಿಯ ಪುತ್ರ ರಾಹುಲ್‌ ನೀಡಿರುವ ದೂರಿನ ಆಧಾರದ ಮೇರೆಗೆ ಎಫ್‌ಐಆರ್‌ (ಪ್ರಾಥಮಿಕ ತನಿಖಾ ವರದಿ) ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಖಿನ್ವ್‌ ಸಿಂಗ್‌ ತಿಳಿಸಿದ್ದಾರೆ.

ದೂರುದಾರ ರಾಹುಲ್‌ ಹೇಳಿರುವ ಪ್ರಕಾರ ರ‍್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಆತನ ತಂದೆ-ತಾಯಿ ಮತ್ತು ಕಿರಿಯ ಸಹೋದರ ಬೈಕ್‌ ಮೇಲೆ ಕುಳಿತು ನಿಂತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಗಿಲ್‌ ಅವರ ಕಾರು ನಿಯಂತ್ರಣ ತಪ್ಪಿ ಗುದ್ದಿದೆ. ಹಿಂದಿನಿಂದ ಬಂದಂತಹ ಮತ್ತೆರಡು ಕಾರು ನೆಲಕ್ಕುರುಳಿದ್ದವರ ಮೇಲೆ ಹರಿದಿದೆ.

ಭಾರತ v/s ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌: ರೋಹಿತ್‌-ವಿರಾಟ್‌ ನಡುವಣ ರೇಸ್‌ನಲ್ಲಿ ಗೆಲ್ಲೋರು ಯಾರು?

ಈ ಹಿನ್ನೆಲೆಯಲ್ಲಿ ಗೌರವ್‌ ಗಿಲ್‌ ಮತ್ತು ಸಹ ಚಾಲಕ (ನ್ಯಾವಿಗೇಟರ್‌) ಮೂಸಾ ಶರೀಫ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ರ (ಕೊಲೆ ಉದ್ದೇಶವಲ್ಲದ ನರಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಖಿನ್ವ್‌ ಸಿಂಗ್‌ ಹೇಳಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರ್‌ನ ಮೇಲೆ ಆರೋಪಿಗಳ ಹೆಸರೂ ಇದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಮೃತರಾದ ನರೇಂದ್ರ ಕುಮಾರ್‌, ಆತನ ಪತ್ನಿ ಪುಷ್ಪಾ ದೇವಿ ಮತ್ತು ಪುತ್ರ ಜೀತೇಂದ್ರ ಅವರ ಶವಗಳನ್ನು ರಸ್ತೆಯಲ್ಲೇ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ರ‍್ಯಾಲಿ ಸಂಘಟಕರು ಭೇಟಿ ನೀಡಬೇಕು. ಸರಕಾರ ಮೃತ ಕುಟುಂಬಕ್ಕೆ ಪರಿಹಾರ ನೀಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿದೇಶ ಪ್ರವಾಸದ ವೇಳೆ ಟೀಮ್‌ ಇಂಡಿಯಾ ಆಟಗಾರರಿಗೆ ಸಿಗಲಿರುವ ದಿನದ ಭತ್ಯೆ ಎಷ್ಟು ಗೊತ್ತಾ?

" ರ‍್ಯಾಲಿ ಸಂಘಟಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿದೆ. ಆದರೆ ಅವರು ಸಹಕರಿಸುತ್ತಿಲ್ಲ. ನಿನ್ನೆಯಿಂದಲೂ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸಂಘಟಕರು ಘಟನಾ ಸ್ಥಳಕ್ಕೆ ಆಗಮನಿಸಬೇಕಾಗಿ ಆಗ್ರಹಿಸಿದ್ದಾರೆ. ಆದರೆ, ಅವರಿಂದ ಸಹಕಾರ ಲಭ್ಯವಾಗುತ್ತಿಲ್ಲ," ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌