ಚೆನ್ನೈ ಓಪನ್: ಭಾರತಕ್ಕೆ ಪ್ರಜ್ಞೇಶ್ ಸಾರಥ್ಯ
ಈ ಬಾರಿ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ ಸೋಮವಾರ ಆರಂಭವಾಗುತ್ತಿದ್ದು, ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
PTI 4 Feb 2019, 5:00 am
ಚೆನ್ನೈ: ಈ ಬಾರಿ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ ಸೋಮವಾರ ಆರಂಭವಾಗುತ್ತಿದ್ದು, ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಪೈಕಿ ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್ ಅಗ್ರಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ಎಟಿಪಿ ರಾರಯಂಕಿಂಗ್ನಲ್ಲಿ ಟಾಪ್-200 ಪಟ್ಟಿಗೆ ಸೇರ್ಪಡೆಯಾಗಲು ಅವಕಾಶಗಳಿವೆ. ಹೀಗಾಗಿ ಚೆನ್ನೈ ಓಪನ್ ಟೂರ್ನಿ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತದ ನಂ.2 ಆಟಗಾರ ರಾಮ್ಕುಮಾರ್ ರಾಮನಾಥನ್ ಹಂಗರಿಯಾದ ಬುಡಾಪೆಸ್ಟ್ನ ಚಾಲೆಂಜರ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಚೆನ್ನೈಓಪನ್ನಲ್ಲಿ ಆಡುತ್ತಿಲ್ಲ. ಇತ್ತೀಚೆಗಷ್ಟೇ ಡೇವಿಸ್ ಕಪ್ ವಿಶ್ವ ಗುಂಪು ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಇಟಲಿ ವಿರುದ್ಧ ನೀರಸ ಪ್ರದರ್ಶನ ತೋರಿದ್ದ ಪ್ರಜ್ಞೇಶ್, ಚೆನ್ನೈ ಓಪನ್ನಲ್ಲಿ ಲಯ ಕಂಡುಕೊಳ್ಳಲು ಹಾತೊರೆಯುತ್ತಿದ್ದಾರೆ.
ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಪೈಕಿ ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್ ಅಗ್ರಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ಎಟಿಪಿ ರಾರಯಂಕಿಂಗ್ನಲ್ಲಿ ಟಾಪ್-200 ಪಟ್ಟಿಗೆ ಸೇರ್ಪಡೆಯಾಗಲು ಅವಕಾಶಗಳಿವೆ. ಹೀಗಾಗಿ ಚೆನ್ನೈ ಓಪನ್ ಟೂರ್ನಿ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತದ ನಂ.2 ಆಟಗಾರ ರಾಮ್ಕುಮಾರ್ ರಾಮನಾಥನ್ ಹಂಗರಿಯಾದ ಬುಡಾಪೆಸ್ಟ್ನ ಚಾಲೆಂಜರ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಚೆನ್ನೈಓಪನ್ನಲ್ಲಿ ಆಡುತ್ತಿಲ್ಲ. ಇತ್ತೀಚೆಗಷ್ಟೇ ಡೇವಿಸ್ ಕಪ್ ವಿಶ್ವ ಗುಂಪು ಅರ್ಹತಾ ಸುತ್ತಿನ ಹಣಾಹಣಿಯಲ್ಲಿ ಇಟಲಿ ವಿರುದ್ಧ ನೀರಸ ಪ್ರದರ್ಶನ ತೋರಿದ್ದ ಪ್ರಜ್ಞೇಶ್, ಚೆನ್ನೈ ಓಪನ್ನಲ್ಲಿ ಲಯ ಕಂಡುಕೊಳ್ಳಲು ಹಾತೊರೆಯುತ್ತಿದ್ದಾರೆ.