ಆ್ಯಪ್ನಗರ

ನಾನು ಪತ್ರ ಬರೆದಿಲ್ಲ: ಚೌಧರಿ

ಐಸಿಸಿಗೆ ತಾವು ಪತ್ರ ಬರೆದಿಲ್ಲ ಎಂದು ಹೇಳುವ ಮೂಲಕ ಭಯೋತ್ಪಾದನೆಗೆ ನೀರೆರೆಯುತ್ತಿರುವ ದೇಶಗಳೊಂದಿಗೆ ಕ್ರಿಕೆಟ್‌ ಬಾಂಧವ್ಯವನ್ನು ತ್ಯಜಿಸಬೇಕು ಎಂದು ಬಿಸಿಸಿಐ ಐಸಿಸಿಗೆ ಬರೆದ ಪತ್ರ ಕುರಿತು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸೋಮವಾರ ಕೈತೊಳೆದುಕೊಂಡಿದ್ದಾರೆ.

PTI 5 Mar 2019, 5:00 am
ಮುಂಬಯಿ: ಐಸಿಸಿಗೆ ತಾವು ಪತ್ರ ಬರೆದಿಲ್ಲ ಎಂದು ಹೇಳುವ ಮೂಲಕ ಭಯೋತ್ಪಾದನೆಗೆ ನೀರೆರೆಯುತ್ತಿರುವ ದೇಶಗಳೊಂದಿಗೆ ಕ್ರಿಕೆಟ್‌ ಬಾಂಧವ್ಯವನ್ನು ತ್ಯಜಿಸಬೇಕು ಎಂದು ಬಿಸಿಸಿಐ ಐಸಿಸಿಗೆ ಬರೆದ ಪತ್ರ ಕುರಿತು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸೋಮವಾರ ಕೈತೊಳೆದುಕೊಂಡಿದ್ದಾರೆ.
Vijaya Karnataka Web i didnt write that letter choudhary on bcci missive to icc
ನಾನು ಪತ್ರ ಬರೆದಿಲ್ಲ: ಚೌಧರಿ


ಭಯೋತ್ಪಾದನೆ ವಿಷಯವನ್ನು ಕೇಂದ್ರವಾಗಿಸಿಕೊಂಡು ಯಾವುದೇ ದೇಶದ ತಂಡವನ್ನು ವಿಶ್ವಕಪ್‌ನಲ್ಲಿ ಬಹಿಷ್ಕರಿಸುವ ತೀರ್ಮಾನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಂತಹ ತೀರ್ಮಾನಗಳೇನಿದ್ದರೂ ಸರಕಾರದ ಮಟ್ಟದಲ್ಲಿ ನಡೆಯಬೇಕು ಎಂದು ಐಸಿಸಿ ಹೇಳುವ ಮೂಲಕ ಬಿಸಿಸಿಐ ಮನವಿಯನ್ನು ತಳ್ಳಿ ಹಾಕಿತ್ತು. ಐಸಿಸಿಗೆ ಬರೆಯಲಾದ ಪತ್ರದಲ್ಲಿ ನಿರ್ದಿಷ್ಟವಾಗಿ ಪಾಕಿಸ್ತಾನ ಹೆಸರನ್ನು ನಮೂದಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚೌಧರಿ, ''ಐಸಿಸಿಗೆ ನಾನು ಪತ್ರ ಬರೆದಿಲ್ಲ,'' ಎಂದಿದ್ದಾರೆ.

ಕಳೆದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಜೈಷ್‌-ಎ-ಮೊಹಮ್ಮದ್‌ ಉಗ್ರರ ದಾಳಿಯ ಹಿನ್ನೆಲೆಯಲ್ಲಿ, ಕ್ರಿಕೆಟ್‌ ಆಡಳಿತಾತ್ಮಕ ಸಮಿತಿ ಜತೆ ಚರ್ಚಿಸಿ ಬಿಸಿಸಿಐ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಜೊಹ್ರಿ ಉಗ್ರರಿಗೆ ನೆಲೆ ನೀಡಿರುವ ರಾಷ್ಟ್ರಗಳನ್ನು ಕ್ರಿಕೆಟಿನಿಂದ ಬಹಿಷ್ಕರಿಸುವಂತೆ ಐಸಿಸಿಗೆ ಪತ್ರ ಬರೆದಿದ್ದರು. ಆದರೆ ಪಾಕಿಸ್ತಾನವನ್ನು ಹೊರಗಿಡಬೇಕು ಎಂದು ನಿರ್ದಿಷ್ಟವಾಗಿ ಹೆಸರಿಸದ ಕಾರಣ ಐಸಿಸಿ ಭಾರತದ ಕೋರಿಕೆಯನ್ನು ತಿರಸ್ಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌