ಆ್ಯಪ್ನಗರ

ಫೈನಲ್‌ಗೆ ಕಿಡಂಬಿ ಶ್ರೀಕಾಂತ್‌

ಆರಂಭಿಕ ಗೇಮ್‌ನಲ್ಲಿ ನಿರಾಸೆ ಅನುಭವಿಸಿದ ಶ್ರೀಕಾಂತ್‌, ನಂತರದ ಎರಡು ಗೇಮ್‌ಗಳಲ್ಲಿ ಸ್ಥಿರ ಆಟ ತೋರಿದರು.

Vijaya Karnataka Web 31 Mar 2019, 10:49 am
ಹೊಸದಿಲ್ಲಿ: ಮಾಜಿ ಚಾಂಪಿಯನ್‌ ಕಿಡಂಬಿ ಶ್ರೀಕಾಂತ್‌ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.
Vijaya Karnataka Web Kidambi


ಇಲ್ಲಿನ ಕೆ.ಡಿ.ಜಾಧವ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ 2015ರ ಆವೃತ್ತಿಯ ಚಾಂಪಿಯನ್‌ ಶ್ರೀಕಾಂತ್‌ 16-21, 21-14, 21-19 ಗೇಮ್‌ಗಳಿಂದ ಚೀನಾದ ಹುಯಾಂಗ್‌ ಯುಕ್ಸುಯಾಂಗ್‌ ವಿರುದ್ಧ ಪ್ರಯಾಸದ ಜಯ ಗಳಿಸಿದರು. ಆರಂಭಿಕ ಗೇಮ್‌ನಲ್ಲಿ ನಿರಾಸೆ ಅನುಭವಿಸಿದ ಶ್ರೀಕಾಂತ್‌, ನಂತರದ ಎರಡು ಗೇಮ್‌ಗಳಲ್ಲಿ ಸ್ಥಿರ ಆಟ ತೋರಿದರು.

ಅದರಲ್ಲೂ ವಿಶೇಷವಾಗಿ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಎದುರಾದ ಪ್ರಬಲ ಪ್ರತಿರೋಧವನ್ನು ಮೆಟ್ಟಿನಿಂತು ಪ್ರಶಸ್ತಿ ಆಸೆಯನ್ನು ಜೀವಂತವಾಗಿರಿಸಿಕೊಂಡರು. ಆದರೆ, ಭಾರತದ ಮತ್ತೊಬ್ಬ ಆಟಗಾರ ಪರುಪಳ್ಳಿ ಕಶ್ಯಪ್‌ ನಾಲ್ಕರ ಘಟ್ಟ ದಾಟುವಲ್ಲಿ ಎಡವಿದರು. ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾದ ಕಶ್ಯಪ್‌ 11-21, 17-21 ನೇರ ಗೇಮ್‌ಗಳಿಂದ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸೆಲ್ಸೆನ್‌ ಎದುರು ಮಂಡಿಯೂರಿದರು. ಭಾನುವಾರ ನಡೆಯಲಿರುವ ಫೈನಲ್‌ ಸೆಣಸಾಟದಲ್ಲಿ ಕೆ.ಶ್ರೀಕಾಂತ್‌ ಮತ್ತು ಆ್ಯಕ್ಸೆಲ್ಸೆನ್‌ ಪೈಪೋಟಿ ನಡೆಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಸ್ಟಾರ್‌ ಆಟಗಾರ್ತಿ ಪಿ.ವಿ ಸಿಂಧೂ ಚೀನಾದ ಹೆ ಬಿಂಗ್‌ಜಿಯಾವೊ ವಿರುದ್ಧ 3 ಗೇಮ್‌ಗಳ ಕದನದಲ್ಲಿ ಜಯಶಾಲಿಯಾಗಿ ಫೈನಲ್‌ ಪ್ರವೇಶಿಸಿದರು. ಮೊದಲ ಗೇಮ್‌ನಲ್ಲಿ ಸೋತರೂ, ಮುಂದಿನ ಎರಡು ಗೇಮ್‌ಗಳಲ್ಲಿ ಭರ್ಜರಿ ಪ್ರದರ್ಶನ ಸಂಘಟಿಸುವಲ್ಲಿ ರಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಭಾರತೀಯ ಆಟಗಾರ್ತಿ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌