ಆ್ಯಪ್ನಗರ

ಅಥ್ಲೆಟಿಕ್ಸ್‌ ಸಂಸ್ಥೆಯಿಂದಲೇ ಕ್ರೀಡಾಪಟುವಿಗೆ ಅನ್ಯಾಯ

ಏಷ್ಯನ್‌ ಗೇಮ್ಸ್‌ ಆಯ್ಕೆಗಾಗಿ ನಡೆಯುವ 58ನೇ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ವನಿತೆಯರ 200 ಮೀ. ಓಟದಲ್ಲಿ ಸ್ಪರ್ಧಿಸಬೇಕಾಗಿದ್ದ ಫೆಡರೇಷನ್‌ ಕಪ್‌ ಪದಕ ವಿಜೇತೆ ಕರ್ನಾಟಕದ ಸ್ನೇಹಾ ಪಿಜೆ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಅವಕಾಶದಿಂದ ವಂಚಿತರಾಗಿದ್ದಾರೆ.

Vijaya Karnataka 23 Jun 2018, 10:10 am
ಬೆಂಗಳೂರು: ಏಷ್ಯನ್‌ ಗೇಮ್ಸ್‌ ಆಯ್ಕೆಗಾಗಿ ನಡೆಯುವ 58ನೇ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ವನಿತೆಯರ 200 ಮೀ. ಓಟದಲ್ಲಿ ಸ್ಪರ್ಧಿಸಬೇಕಾಗಿದ್ದ ಫೆಡರೇಷನ್‌ ಕಪ್‌ ಪದಕ ವಿಜೇತೆ ಕರ್ನಾಟಕದ ಸ್ನೇಹಾ ಪಿಜೆ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಅವಕಾಶದಿಂದ ವಂಚಿತರಾಗಿದ್ದಾರೆ.
Vijaya Karnataka Web athletics


ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸ್ನೇಹಾ 200 ಮೀ. ಓಟದಲ್ಲಿ ಎರಡನೇ ಸ್ಥಾನ ಪಡೆದು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದರು. ಇದು ಏಷ್ಯನ್‌ ಗೇಮ್ಸ್‌ ಆಯ್ಕೆಗಾಗಿ ನಡೆಯುವ ಚಾಂಪಿಯನ್‌ಷಿಪ್‌ ಇದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರ ತರಬೇತಿ ನಡೆಸುತ್ತಿರುವ ಸ್ನೇಹಾಗೆ 200 ಮೀ. ಓಟದಲ್ಲಿ ಪದಕ ಗೆದ್ದು ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕನಸು ಕಂಡಿದ್ದರು. ಅದಕ್ಕಾಗಿ ಪಟಿಯಾಲದಲ್ಲಿ ನಡೆದ ತರಬೇತಿ ಶಿಬಿರದಲ್ಲೂ ಪಾಲ್ಗೊಂಡಿರುತ್ತಾರೆ. ರಾಜ್ಯ ಅರಣ್ಯ ಇಲಾಖೆ ಇದಕ್ಕಾಗಿ ಅನುಮತಿಯನ್ನೂ ನೀಡಿದೆ. ಆದರೆ ಎರಡನೇ ಸ್ಥಾನ ಗಳಿಸಿದ ಸ್ನೇಹಾ ಅವರನ್ನು ಕೈ ಬಿಟ್ಟು ಮೂರನೇ ಸ್ಥಾನ ಗಳಿಸಿದ ಅಪ್ಸಾನಾ ಬೇಗಂ ಅವರನ್ನು 200 ಮೀ. ಓಟದ ವಿಭಾಗದಲ್ಲಿ ಹೆಸರು ಸೇರಿಸಲಾಗಿದೆ.

ಈ ಕುರಿತು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜವೇಲು ಅವರನ್ನು ವಿಜಯ ಕರ್ನಾಟಕ ಸಂಪರ್ಕಿಸಿದಾಗ, ''ನಾವು ಆನ್‌ಲೈನ್‌ನಲ್ಲಿ ಕಳುಹಿಸಿದ್ದೇವೆ, ಅದು ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಕಡೆಯಿಂದ ತಪ್ಪಾಗಿರಬಹುದು, ನಾವು ಈ ಬಗ್ಗೆ ಮನವಿ ಪತ್ರವನ್ನೂ ಕಳುಹಿಸಿದ್ದೇವೆ,'' ಎಂದರು. ಅಂತಿಮ ಪಟ್ಟಿಯ ವಿವರ ಸಿಗಬಹುದೇ ಎಂದು ಪ್ರಶ್ನಿಸಿದಾಗ, ''ಇಲ್ಲಿ ಕಂಪ್ಯೂಟರ್‌ ಅಪರೇಟರ್‌ ಇಲ್ಲ ,'' ಎಂದು ಸಮರ್ಪಕ ಉತ್ತರ ನೀಡಲಿಲ್ಲ.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಕಳೆದ ನಾಲ್ಕು ವರ್ಷಗಳಿಂದ ಅಭ್ಯಾಸ ನಡೆಸಿರುತ್ತಾರೆ. ಈಗ ಅವಕಾಶ ತಪ್ಪಿದರೆ ಮತ್ತೆ ನಾಲ್ಕು ವರ್ಷ ಕಾಯಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌