ಆ್ಯಪ್ನಗರ

ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಭಾರತೀಯ ಜೂ. ಶೂಟರ್‌ಗಳು

ದಕ್ಷಿಣ ಕೊರಿಯಾದ ಚಾಗ್ವಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸ್ವದೇಶಕ್ಕೆ ಹಿಂತಿರುಗುತ್ತಿದ್ದ ವೇಳೆ ವಿಮಾನ ತುರ್ತಾಗಿ ಭೂಸ್ಪರ್ಶ ಮಾಡಿದ್ದರ ಹಿನ್ನಲೆಯಲ್ಲಿ 11 ಕಿರಿಯ ಶೂಟರ್‌ಗಳು ಥಾಯ್ಲೆಂಡ್‌ನ ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಘಟನೆ ವರದಿಯಾಗಿದೆ.

TOI.in 13 Sep 2018, 11:52 am
ಪುಣೆ: ದಕ್ಷಿಣ ಕೊರಿಯಾದ ಚಾಗ್ವಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸ್ವದೇಶಕ್ಕೆ ಹಿಂತಿರುಗುತ್ತಿದ್ದ ವೇಳೆ ವಿಮಾನ ತುರ್ತಾಗಿ ಭೂಸ್ಪರ್ಶ ಮಾಡಿದ್ದರ ಹಿನ್ನಲೆಯಲ್ಲಿ 11 ಕಿರಿಯ ಶೂಟರ್‌ಗಳು ಥಾಯ್ಲೆಂಡ್‌ನ ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಘಟನೆ ವರದಿಯಾಗಿದೆ.
Vijaya Karnataka Web shooting


ಎಲ್ಲ ಯುವ ಪ್ರತಿಭೆಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಬುಧವಾರದಂದು ಚಾಗ್ವಾನ್‌ನಿಂದ ದಿಲ್ಲಿಗೆ ಮರಳುತ್ತಿದ್ದರು. ಆದರೆ ಥಾಯ್ ಏರ್‌ವೇಸ್ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ಬ್ಯಾಂಕಾಕ್‌ನಲ್ಲಿ ವಿಮಾನ ತುರ್ತಾಗಿ ಭೂಸ್ಪರ್ಶ ಮಾಡಲಾಗಿದೆ.

ಹಿರಿಯ ಅಧಿಕಾರಿಗಳಾಗಲಿ ಅಥವಾ ಯಾವುದೇ ಕೋಚ್ ಅಥವಾ ಸಹಾಯಕ ಸಿಬ್ಬಂದಿಗಳು ಯುವ ಕ್ರೀಡಾಪಟುಗಳ ಜೊತಿಗಿರಲಿಲ್ಲ ಎಂಬುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಪೋಷಕರು ಆಳಲನ್ನು ತೋಡಿಕೊಂಡಿದ್ದಾರೆ.

"ಬ್ಯಾಂಕಾಕ್ ವಿಮಾನ ನಿಲ್ದಾಣದಿಂದ ನನ್ನ ಮಗುವಿನಿಂದ ಕರೆಯನ್ನು ಪಡೆದೆ. ವಿಮಾನ ತುರ್ತಾಗಿ ಇಳಿಸಲಾಗಿದೆ. ದಿಲ್ಲಿಗೆ ಮರಳುವ ಅವರ ಜೊತೆ ಹಿರಿಯರು ಯಾರು ಇಲ್ಲದಿದ್ದುದರಿಂದ ನಾವು ತುಂಬಾನೇ ಗಾಬರಿಗೊಂಡಿದ್ದೇವೆ. ಮಕ್ಕಳ ಮೊಬೈಲ್ ಫೋನ್ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಕನಿಷ್ಠ ಶೂಟಿಂಗ್ ಫೇಡರೇಷನ್ ಅಥವಾ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಜೊತೆಗಿರಬೇಕಿತ್ತು" ಎಂದು ಹೆತ್ತವರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ರೈಫಲ್ ಸಂಸ್ಥೆಯ ಅಧ್ಯಕ್ಷ ರನಿಂದರ್ ಸಿಂಗ್, ಕೋಚ್‌ಗಿಂತಲೂ ಮೊದಲು ಮಕ್ಕಳನ್ನು ಮನೆಗೆ ಕಳುಹಿಸುವುದನ್ನು ಖಾತ್ರಿಪಡಿಸಲಾಗಿದೆ ಎಂದರು. ಅಲ್ಲದೆ ಘಟನೆ ತಿಳಿದ ಕೂಡಲೇ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಇದೀಗ ಎಲ್ಲ ಜೂನಿಯರ್ ಅಥ್ಲೀಟ್‌ಗಳು ಮಧ್ಯರಾತ್ರಿ ವೇಳೆಗೆ ದಿಲ್ಲಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರೀಡಾ ಪ್ರಾಧಿಕಾರವು, ಆಟಗಾರರ ವೇಳಾಪಟ್ಟಿ ತಯಾರಿ ಮಾಡುವುದು ಎನ್ಆರ್‌ಎಐ ಜವಾಬ್ದಾರಿಯಾಗಿದೆ ಎಂದಿದೆ. ಒಟ್ಟಿನಲ್ಲಿ ಕ್ರೀಡೆ ಇಲಾಖೆಗಳು ಮಾಡಿರುವ ಎಡವಟ್ಟಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌