ಆ್ಯಪ್ನಗರ

ಕಬಡ್ಡಿ: ಮೂರೂ ಪ್ರಶಸ್ತಿ ಬೆಂಗಳೂರು ಪಾಲು

ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮೂರೂ ಪ್ರಶಸ್ತಿಗಳು ಬೆಂಗಳೂರಿನ ತಂಡಗಳ ಪಾಲಾಗಿವೆ.

ವಿಕ ಸುದ್ದಿಲೋಕ 1 Mar 2016, 4:26 am
ಬೇಲೂರು: ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಮೂರೂ ಪ್ರಶಸ್ತಿಗಳು ಬೆಂಗಳೂರಿನ ತಂಡಗಳ ಪಾಲಾಗಿವೆ.
Vijaya Karnataka Web kabaddi three awards
ಕಬಡ್ಡಿ: ಮೂರೂ ಪ್ರಶಸ್ತಿ ಬೆಂಗಳೂರು ಪಾಲು


ಎಚ್‌ಎಎಲ್ ತಂಡ ಪ್ರಥಮ ಸ್ಥಾನ ಪಡೆದು 66,666 ರೂ. ನಗದು ಬಹುಮಾನ ಪಡೆದಿದೆ. ದ್ವಿತೀಯ ಸ್ಥಾನವನ್ನು 33,333 ರೂ. ನಗದಿನೊಂದಿಗೆ ಕ್ಲಾಸಿಕ್ ನ್ಯಾಷನಲ್ ತಂಡ ತನ್ನದಾಗಿಸಿಕೊಂಡಿದೆ. ಬಸವನಗುಡಿ ಎಚ್‌ಎಂಟಿ ಕಾಲನಿ ಬಾಯ್ಸ್ ತಂಡ ತತೀಯ ಸ್ಥಾನ, 11,111 ರೂ. ಪಡೆದು ತಪ್ತಿಪಟ್ಟುಕೊಂಡಿದೆ.

ಬೆಸ್ಟ್ ರೈಡರ್ ಆಗಿ ಕ್ಲಾಸಿಕ್ ನ್ಯಾಷನಲ್ ತಂಡದ ಗೋವಿಂದ್, ಬೆಸ್ಟ್ ಕ್ಯಾಚರ್ ಆಗಿ ಎಚ್‌ಎಂಟಿ ಕಾಲನಿ ಬಾಯ್ಸ್ ತಂಡದ ಶ್ರಥೀಪ್, ಆಲ್‌ರೌಂಡರ್ ಆಗಿ ಎಚ್‌ಎಎಲ್ ತಂಡದ ನಾರಾಯಣಸ್ವಾಮಿ ಬಹುಮಾನ ಪಡೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 32 ತಂಡಗಳು ಭಾಗವಹಿಸಿದ್ದವು.

ಅಚ್ಚುಕಟ್ಟಾದ ವ್ಯವಸ್ಥೆ: ಕಳೆದ ವರ್ಷಕ್ಕಿಂತ ಈ ಬಾರಿ ಕಬಡ್ಡಿ ಪಂದ್ಯ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. 2 ಅಂಕಣದ ಸುತ್ತಲೂ ವೀಕ್ಷಣೆಗೆ ತಾತ್ಕಾಲಿಕ ಗ್ಯಾಲರಿ ಅಳವಡಿಸಲಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿತ್ತು. ಭಾನುವಾರ ಮಧ್ಯರಾತ್ರಿ 12ಕ್ಕೆ ಅಂತಿಮ ಪಂದ್ಯ ಮುಕ್ತಾಯಗೊಂಡಿತು.

ಬಹುಮಾನ ವಿತರಣೆ: ಅರ್ಜುನ್ ಪ್ರಶಸ್ತಿ ವಿಜೇತ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಸಿ.ರಮೇಶ್ ಬಹುಮಾನ ವಿತರಿಸಿದರು. ಬೆಂಗಳೂರು ನಗರ ಅಮೆಚೂರ್ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಷಣ್ಮುಗಂ, ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಿ.ಎಚ್.ಮಹೇಶ್, ಕಾರ್ಯದರ್ಶಿ ಖಾದರ್, ತೀರ್ಪುಗಾರ ಗೋಪಿನಾಥ್ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌