ಆ್ಯಪ್ನಗರ

2.5 ಕಿ.ಮೀ ಈಜಿ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದರು!

ಬ್ಯಾಗ್‌ ಹಾಗೂ ಕಿಟ್‌ ಅನ್ನು ಪ್ಲಾಸ್ಟಿಕ್‌ನಲ್ಲಿ ಸುಭದ್ರವಾಗಿ ಪ್ಯಾಕ್‌ ಮಾಡಿ 2.5 ಕಿ.ಮೀ ಈಜಿ ಮುಖ್ಯ ರಸ್ತೆ ಸೇರಿದರು. ಅಲ್ಲಿಂದ ರೈಲು ಹಿಡಿದು ಬೆಂಗಳೂರು ಸೇರಿದ ಈ ಕ್ರಿಡಾಪಟು ಕೂಟದಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.

Vijaya Karnataka 13 Aug 2019, 5:00 am
ಬೆಂಗಳೂರು: ನಿಶಾನ್‌ ಮನೋಹರ್‌ ಬೆಳಗಾವಿಯ ಮಣ್ಣೂರಿನ ಉದಯೋನ್ಮುಖ ಬಾಕ್ಸರ್‌. ಕರ್ನಾಟಕ ಅಮೆಚೂರು ಬಾಕ್ಸಿಂಗ್‌ ಸಂಸ್ಥೆ ಬೆಂಗಳೂರಿನಲ್ಲಿ ಆ.7ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿ ಬ್ಯಾಗ್‌ ತುಂಬಿಕೊಂಡು ಸಿದ್ಧತೆ ನಡೆಸುವಾಗಲೇ ಮಹಾಮಳೆ ಬಂದು, ಅವರೂರು ನೆರೆ ನೀರಿನಿಂದ ಆವೃತವಾಗತೊಡಗಿತು. ಊರಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ದಾರಿಗಳೆಲ್ಲವೂ ಜಲಾವೃತವಾಗಿತ್ತು. ಹಿಂದೆ ಮುಂದೆ ನೋಡದೇ ಬ್ಯಾಗ್‌ ಹಾಗೂ ಕಿಟ್‌ ಅನ್ನು ಪ್ಲಾಸ್ಟಿಕ್‌ನಲ್ಲಿ ಸುಭದ್ರವಾಗಿ ಪ್ಯಾಕ್‌ ಮಾಡಿ 2.5 ಕಿ.ಮೀ ಈಜಿ ಮುಖ್ಯ ರಸ್ತೆ ಸೇರಿದರು. ಅಲ್ಲಿಂದ ರೈಲು ಹಿಡಿದು ಬೆಂಗಳೂರು ಸೇರಿದ ಈ ಕ್ರಿಡಾಪಟು ಕೂಟದಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.
Vijaya Karnataka Web karnataka floods 19 year old boxer swims 2 5 km to take part in state level championship in bangalore
2.5 ಕಿ.ಮೀ ಈಜಿ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದರು!


ಇದು ಯುವ ಬಾಕ್ಸರ್‌ ಒಬ್ಬ ಪದಕ ಗೆಲ್ಲುವ ಮೊದಲು ಎದುರಿಸಿದ ಕಷ್ಟಗಳ ಕತೆ. ಮಣ್ಣೂರಿನ ರೈತ ಮನೋಹರ್‌ ಅವರ ಪುತ್ರ ನಿಶಾನ್‌ (19) ಎರಡು ವರ್ಷಗಳಿಂದ ಬಾಕ್ಸಿಂಗ್‌ ಅಭ್ಯಾಸ ನಡೆಸುತ್ತಿದ್ದು, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅವರ ಕನಸಾಗಿತ್ತು. ಆದರೆ, ಬೆಂಗಳೂರಿಗೆ ಹೊರಡುವ ಮೊದಲೇ ಅವರಿಗೆ ನೆರೆ ನೀರು ಕಾಡಿತ್ತು. ''ನಾನು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ, ನೀರು ನಮ್ಮೂರನ್ನು ಆವರಿಸುತ್ತಿತ್ತು. ಯಾವುದಕ್ಕೂ ಹೆದರದೇ ತಂದೆಯ ಜತೆಗೂಡಿ 2.5 ಕಿ.ಮೀ ದೂರವನ್ನು 45 ನಿಮಿಷಗಳಲ್ಲಿ ಈಜಿದೆ. ಮುಖ್ಯರಸ್ತೆ ಮೂಲಕ ಜಿಲ್ಲಾ ಕೇಂದ್ರಕ್ಕೆ ಹೋಗಿ ತಂಡವನ್ನು ಸೇರಿಕೊಂಡು ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದೆ,'' ಎಂದು ನಿಶಾನ್‌ ತಾನೆದುರಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ಲೈಟ್‌ಫ್ಲೈವೇಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ನಿಶಾನ್‌, ಸಣ್ಣ ಅಂತರದ ಸೋಲಿನೊಂದಿಗೆ ಚಿನ್ನದ ಪದಕದಿಂದ ವಂಚಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌