ಹೊಸದಿಲ್ಲಿ: ಅಮೋಘ ಪ್ರದರ್ಶನ ನೀಡಿರುವ ಭಾರತದ ಹೆಮ್ಮೆಯ ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಮೂರನೇ ಸೂಪರ್ ಸಿರೀಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇಂಡೋನೇಷ್ಯಾ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ನಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದ ಕಿಡಂಬಿ, ಸಿಂಗಾಪುರ ಓಪನ್ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.
ಭಾನುವಾರ ರಾತ್ರಿ ನಡೆದ ಫೈನಲ್ ಹೋರಾಟದಲ್ಲಿ ದಕ್ಷಿಣ ಕೊರಿಯಾ ಮೂಲದ ಲೀ ಹ್ಯುನ್ ಇ ವಿರುದ್ದ 21-10, 21-5ರ ಅಂತರದ ಸುಲಭ ಗೆಲುವು ದಾಖಲಿಸಿದ ಕಿಡಂಬಿ ಮಗದೊಂದು ಸಾಧನೆ ಮರೆದರು.
ಯುವ ತಾರೆ ಕಿಡಂಬಿಗೆ ಹಿರಿಯ ಅನುಭವಿ 37ರ ಹರೆಯದ ಹ್ಯುನ್ ಸವಾಲಾಗಲೇ ಇಲ್ಲ. ಇದರಿಂದಾಗಿ ಕೇವಲ 25 ನಿಮಿಷಗಳ ಅಂತರದಲ್ಲೇ ಪಂದ್ಯವನ್ನು ವಶಪಡಿಸಿಕೊಂಡರು.
ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲೂ 22ನೇ ಸ್ಥಾನದಲ್ಲಿರುವ ಹ್ಯುನ್ ಮೇಲೆ ಎಂಟನೇ ರ್ಯಾಂಕ್ನ ಕಿಡಂಬಿ ಸವಾರಿ ಮಾಡಿದರು. ಸತತ ಪಂದ್ಯಗಳಿಂದಾಗಿ ಫೈನಲ್ ವೇಳೆಯಾಗುವಾಗ ಎದುರಾಳಿ ಆಟಗಾರ ಬಳಲಿರುವುದೇ ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಆದರೆ ಪ್ರತಿಯೊಂದು ಪಂದ್ಯದಲ್ಲೂ ಎದುರಾಳಿಗಳ ಮೇಲೆ ಅಮೋಘ ಆಟ ಪ್ರದರ್ಶಿಸಿರುವ 24ರ ಹರೆಯದ ಶ್ರೀಕಾಂತ್ಗೆ ಸರ್ವ ಶ್ರೇಯಸ್ಸು ಸಲ್ಲಲೇಬೇಕು.
ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಮೂರನೇ ಸೂಪರ್ ಸಿರೀಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇಂಡೋನೇಷ್ಯಾ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ನಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದ ಕಿಡಂಬಿ, ಸಿಂಗಾಪುರ ಓಪನ್ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.
ಭಾನುವಾರ ರಾತ್ರಿ ನಡೆದ ಫೈನಲ್ ಹೋರಾಟದಲ್ಲಿ ದಕ್ಷಿಣ ಕೊರಿಯಾ ಮೂಲದ ಲೀ ಹ್ಯುನ್ ಇ ವಿರುದ್ದ 21-10, 21-5ರ ಅಂತರದ ಸುಲಭ ಗೆಲುವು ದಾಖಲಿಸಿದ ಕಿಡಂಬಿ ಮಗದೊಂದು ಸಾಧನೆ ಮರೆದರು.
ಯುವ ತಾರೆ ಕಿಡಂಬಿಗೆ ಹಿರಿಯ ಅನುಭವಿ 37ರ ಹರೆಯದ ಹ್ಯುನ್ ಸವಾಲಾಗಲೇ ಇಲ್ಲ. ಇದರಿಂದಾಗಿ ಕೇವಲ 25 ನಿಮಿಷಗಳ ಅಂತರದಲ್ಲೇ ಪಂದ್ಯವನ್ನು ವಶಪಡಿಸಿಕೊಂಡರು.
ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲೂ 22ನೇ ಸ್ಥಾನದಲ್ಲಿರುವ ಹ್ಯುನ್ ಮೇಲೆ ಎಂಟನೇ ರ್ಯಾಂಕ್ನ ಕಿಡಂಬಿ ಸವಾರಿ ಮಾಡಿದರು. ಸತತ ಪಂದ್ಯಗಳಿಂದಾಗಿ ಫೈನಲ್ ವೇಳೆಯಾಗುವಾಗ ಎದುರಾಳಿ ಆಟಗಾರ ಬಳಲಿರುವುದೇ ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಆದರೆ ಪ್ರತಿಯೊಂದು ಪಂದ್ಯದಲ್ಲೂ ಎದುರಾಳಿಗಳ ಮೇಲೆ ಅಮೋಘ ಆಟ ಪ್ರದರ್ಶಿಸಿರುವ 24ರ ಹರೆಯದ ಶ್ರೀಕಾಂತ್ಗೆ ಸರ್ವ ಶ್ರೇಯಸ್ಸು ಸಲ್ಲಲೇಬೇಕು.