ಆ್ಯಪ್ನಗರ

ಆಸ್ಪ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌; ಫೈನಲ್‌ಗೆ ಲಗ್ಗೆಯಿಟ್ಟ ಶ್ರೀಕಾಂತ್

ಅಮೋಘ ಫಾರ್ಮ್‌ ಮುಂದುವರಿಸಿರುವ ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಕಿಡಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಆಸ್ಪ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 24 Jun 2017, 3:07 pm
ಸಿಡ್ನಿ: ಅಮೋಘ ಫಾರ್ಮ್‌ ಮುಂದುವರಿಸಿರುವ ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಕಿಡಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಆಸ್ಪ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
Vijaya Karnataka Web kidambi srikanth sails into australian open super series final
ಆಸ್ಪ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌; ಫೈನಲ್‌ಗೆ ಲಗ್ಗೆಯಿಟ್ಟ ಶ್ರೀಕಾಂತ್


ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಚೀನಾದ ನಾಲ್ಕನೇ ಶ್ರೇಯಾಂಕಿತ ಶಿ ಯೂಕಿ ವಿರುದ್ಧ 21-10, 21-14ರ ಅಂತರದ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವದ 11ನೇ ರ‍್ಯಾಂಕ್‌ನ ಶ್ರೀಕಾಂತ್‌, ಭಾರತದವರೇ ಆದ ಬಿ.ಸಾಯಿ ಪ್ರಣೀತ್‌ ಅವರ ಕಠಿಣ ಸವಾಲನ್ನು 25-23, 21-17ರಿಂದ ಹಿಮ್ಮೆಟ್ಟಿಸಿ 4ರ ಘಟ್ಟಕ್ಕೆ ಅರ್ಹತೆ ಪಡೆದರು. ಇದರೊಂದಿಗೆ ಇದೇ ವರ್ಷ ನಡೆದ ಸಿಂಗಾಪುರ ಓಪನ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಸಾಯಿ ಪ್ರಣೀತ್‌ ವಿರುದ್ಧ ಎದುರಾದ ಪರಾಭವಕ್ಕೆ ಶ್ರೀಕಾಂತ್‌ ಸೇಡು ತೀರಿಸಿಕೊಂಡಿದ್ದರು.

ಅಲ್ಲದೆ ಶ್ರೀಕಾಂತ್ ಪಾಲಿಗಿದು ಸತತ ಮೂರನೇ ಫೈನಲ್ ಪಂದ್ಯವಾಗಿದೆ. ಕಳೆದ ವಾರವಷ್ಟೇ ಶ್ರೀಕಾಂತ್‌ ಇಂಡೊನೇಷ್ಯಾ ಓಪನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಈಗ ಮಗದೊಂದು ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸುವ ಹೊಸ್ತಿಲಲ್ಲಿದ್ದಾರೆ.

ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್‌ ಅಕಾಡೆಮಿಯಲ್ಲಿ ಜತೆಯಾಗಿ ಅಭ್ಯಾಸ ನಡೆಸುವ ಶ್ರೀಕಾಂತ್‌ ತಮ್ಮ ವೃತ್ತಿ ಜೀವನದ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌