ಆ್ಯಪ್ನಗರ

ಪ್ರತಿಭಾನ್ವೇಷಣೆಗೆ ಟಿಎಂಎಸ್‌ ಸಜ್ಜು

ದೇಶದ ಕ್ರೀಡಾ ರಾಜಧಾನಿಯಾಗಿ ರೂಪುಗೊಳ್ಳುತ್ತಿರುವ ಉದ್ಯಾನನಗರಿ ಬೆಂಗಳೂರಿನ ಬ್ಯಾಡ್ಮಿಂಟನ್‌ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಬಹು ಕ್ರೀಡಾ ಸೌಲಭ್ಯಗಳನ್ನೊಳಗೊಂಡ ಹಾಗೂ ವಿಶ್ವ ದರ್ಜೆಯ ಎಂಟು ಬ್ಯಾಡ್ಮಿಂಟನ್‌ ಕೋರ್ಟ್‌ಗಳನ್ನು ಹೊಂದಿರುವ ದಿ ಮೆಜೆಸ್ಟೀನ್‌ ಸ್ಪೋರ್ಟ್ಸ್ (ಟಿಎಂಎಸ್‌)ಅನ್ನು ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಭಾನುವಾರ ಉದ್ಘಾಟಿಸಿದರು.

Vijaya Karnataka 11 Feb 2019, 5:00 am
ಬೆಂಗಳೂರು : ದೇಶದ ಕ್ರೀಡಾ ರಾಜಧಾನಿಯಾಗಿ ರೂಪುಗೊಳ್ಳುತ್ತಿರುವ ಉದ್ಯಾನನಗರಿ ಬೆಂಗಳೂರಿನ ಬ್ಯಾಡ್ಮಿಂಟನ್‌ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಬಹು ಕ್ರೀಡಾ ಸೌಲಭ್ಯಗಳನ್ನೊಳಗೊಂಡ ಹಾಗೂ ವಿಶ್ವ ದರ್ಜೆಯ ಎಂಟು ಬ್ಯಾಡ್ಮಿಂಟನ್‌ ಕೋರ್ಟ್‌ಗಳನ್ನು ಹೊಂದಿರುವ ದಿ ಮೆಜೆಸ್ಟೀನ್‌ ಸ್ಪೋರ್ಟ್ಸ್ (ಟಿಎಂಎಸ್‌)ಅನ್ನು ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಭಾನುವಾರ ಉದ್ಘಾಟಿಸಿದರು.
Vijaya Karnataka Web launch of tms fortargeted to scout talent
ಪ್ರತಿಭಾನ್ವೇಷಣೆಗೆ ಟಿಎಂಎಸ್‌ ಸಜ್ಜು


ಕರ್ನಾಟಕದ ಮಾಜಿ ಕ್ರಿಕೆಟಿಗ ನಾರಾಯಣ ರಾಜು ಅವರ ಕನಸಿನ ಕೂಸಾದ 'ಟಿಎಂಎಸ್‌' ನಗರದ ಬಂಡೆಪಾಳ್ಯದ ಎಚ್‌ಎಸ್‌ಆರ್‌ ಟ್ರಿನಿಟಿ ಸಮುಚ್ಚಯದ ಮುಂಬಾಗ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಿದೆ. ಟಿಎಂಎಸ್‌ ಕುರಿತು ವಿವರ ನೀಡಿದ ನಾರಾಯಣರಾಜು, ''ನಗರದ ಪ್ರತಿಭಾನ್ವಿತ ಬ್ಯಾಡ್ಮಿಂಟನ್‌ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಕೇಂದ್ರದಲ್ಲಿ ಒಟ್ಟು 8 ವಿಶ್ವ ದರ್ಜೆಯ ಕೋರ್ಟ್‌ಗಳಿದ್ದು, ತರಬೇತಿ ಜತೆಗೆ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ,''ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌